ಸಾಂದರ್ಭಿಕ ಚಿತ್ರ 
ರಾಜ್ಯ

ಮೈಸೂರಿನಲ್ಲಿ ದಲಿತ ಮಹಿಳೆ ಸಂಸ್ಕಾರಕ್ಕೆ ದೊರೆಯದ ಸ್ಮಶಾನ: 2 ದಿನ ಶವವಿಟ್ಟು ಸಂಬಂಧಿಕರ ಯಾತನೆ

ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲದ ಕಾರಣ ಮೃತ ಪಟ್ಟಿದ್ದ 90 ವರ್ಷದ ವೃದ್ಧೆಯ ಮೃತ ದೇಹವನ್ನು 2 ದಿನಗಳ ಕಾಲ ಮನೆಯಲ್ಲಿಯೇ ಇಟ್ಟು ಕಾದಿರುವ ಘಟನೆ ...

ಮೈಸೂರು: ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲದ ಕಾರಣ ಮೃತ ಪಟ್ಟಿದ್ದ 90 ವರ್ಷದ ವೃದ್ಧೆಯ ಮೃತ ದೇಹವನ್ನು 2 ದಿನಗಳ ಕಾಲ ಮನೆಯಲ್ಲಿಯೇ ಇಟ್ಟು ಕಾದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಳಿಪುರ ಗ್ರಾಮದಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ ಸುಮಾರು 11 ಗಂಟೆಗೆ ರಂಗಮ್ಮ ನಿಧನರಾಗಿದ್ದಾರೆ. ಶವ ಸಂಸ್ಕಾರ ಮಾಡಲು ರಂಗಮ್ಮ ಸಂಬಂಧಿಕರು ಗುರುವಾರ ಸಂಜೆ ವರೆಗೂ ಭೂಮಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸ್ಥಳ ಸಿಗದ ಕಾರಣ ನೀರಾವರಿ ಕಾಲುವೆಯ ಪಕ್ಕದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
310 ನಾಯಕ ಹಾಗೂ 270 ಲಿಂಗಾಯಿತ ಕುಟುಂಬಗಳಿರುವ ಗುಳಿಪುರ ಗ್ರಾಮದಲ್ಲಿ ಈ ಎರಡು ಸಮುದಾಯದವರಿಗೂ ಪ್ರತ್ಯೇಕ ಸ್ಮಶಾನ ಭೂಮಿಯಿದೆ. ಆದರೆ 65 ಕುಟುಂಬಗಳಿರುವ ದಲಿತರ ಅಂತ್ಯ ಸಂಸ್ಕಾರಕ್ಕೆ ಇಡೀ ಗ್ರಾಮದಲ್ಲಿ ಸ್ಮಶಾನ ಭೂಮಿಯಿಲ್ಲ,  ದಲಿತರೆಲ್ಲಾ ಹಲವು ವರ್ಷಗಳಿಂದ ತಮ್ಮತಮ್ಮ ಜಮೀನಿನನಲ್ಲೇ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಸರ್ಕಾರ ಐದು ಎಕರೆ ಖಾಸಗಿ ಭೂಮಿ ಖರೀದಿಸಿ ಅವುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ದಲಿತರಿಗೆ ನೀಡಿದೆ. ಆದರೆ ಈ ಜಾಗದಲ್ಲಿ ದಲಿತರ ಅಂತ್ಯ ಸಂಸ್ಕಾರ ನಡೆಸಲು ನಾಯಕ ಸಮುದಾಯದವರು ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ, ಬೇರೆ ದಾರಿಯಿಲ್ಲದೇ ದಲಿತರು ನೀರಾವರಿಗಾಗಿ ಇರುವ ಕಾಲುವೆ ದಂಡೆಯಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾರೆ. 
ಸರ್ಕಾರ ಅಂತ್ಯ ಸಂಸ್ಕಾರ ಮಾಡಲು ನಮಗೆ ಭೂಮಿಯನ್ನು ನೀಡದ ಕಾರಣ ನಮ್ಮಲ್ಲಿ ಯಾರಾದರೂ ಮರಣ ಹೊಂದಿದಾಗ ನ ಭೂಮಿ ಸಿಗುವವರೆಗೂ ನಾವು ಶವವಿಟ್ಟಪು ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ದಲಿತ ಕಾಲೋನಿಯ ನಾಗರಾಜಯ್ಯ ಎಂಬುವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT