ರಂಗಯ್ಯನದುರ್ಗ ವನ್ಯಜೀವಿ ಅಭಯಾರಣ್ಯ 
ರಾಜ್ಯ

ರಂಗಯ್ಯನದುರ್ಗ ಅಭಯಾರಣ್ಯ ಸೂಕ್ಷ್ಮ ಪರಿಸರ ವಲಯವಾಗಿ ಘೋಷಣೆ

ನಾಲ್ಕು ಕೊಂಬಿನ ಚಿಗರೆಗಳಿರುವ ದಾವಣೆಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿರುವ ರಂಗಯ್ಯನದುರ್ಗ ಅಭ್ಯಯಾರಣ್ಯ ಅಂತಿಮವಾಗಿ ಸೂಕ್ಷ್ಮ ಪರಿಸರ...

ಬೆಂಗಳೂರು: ನಾಲ್ಕು ಕೊಂಬಿನ ಚಿಗರೆಗಳಿರುವ ದಾವಣೆಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿರುವ ರಂಗಯ್ಯನದುರ್ಗ ಅಭ್ಯಯಾರಣ್ಯ ಅಂತಿಮವಾಗಿ ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಲ್ಪಟ್ಟಿದೆ. 
ಇದರಿಂದಾಗಿ ಈ ಪ್ರದೇಶದಲ್ಲಿ ಪ್ರಾಣಿಗಳ ಭೇಟೆ, ನಷ್ಟ ಹಾಗೂ ವಿಭಜನೆ ತಪ್ಪಿ ಸಂರಕ್ಷಿತ ವಲಯವಾಗಲಿದೆ.
ಸೂಕ್ಷ್ಮ ಪರಿಸರ ವಲಯ ಪ್ರದೇಶ ಒಟ್ಟು 137.14 ಸ್ಕ್ವೇರ್ ಕಿಮೀ ಅಭಯಾರಣ್ಯದ ವರೆಗೂ ಒಳಪಟ್ಟಿದೆ. ಸುಮಾರು 30 ಗ್ರಾಮಗಳು ಈ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ಹಲವು ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳು ನಿಷೇಧಗೊಳ್ಳಲಿವೆ,
77.24 ಸ್ಕ್ವೇರ್  ಕಿಮೀ ಪ್ರದೇಶವನ್ನು ರಂಗಯ್ಯನದುರ್ಗ ವನ್ಯಜೀವಿ ಅಭಯಾರಣ್ಯ ಎಂದು 2011ರ ಜನವರಿಯಲ್ಲಿ ಗುರುತಿಸಲಾಯಿತು. ನಂತರ ಅಲ್ಲಿರುವ ಪ್ರಾಣಿ ಪ್ರಬೇಧಗಳಿಗೆ ವಿಶೇಷ ಸ್ಥಾನಮಾನ ದೊರಕಿತು. 
ಭಾರತದಲ್ಲಿ ಅತಿ ಅಪರೂಪಕ್ಕೆ ಕಾಣ ಸಿಗುವ 4 ಕೊಂಬಿನ ಹುಲ್ಲೆ ಅಥವಾ ಚಿಗರೆಗಳು ಇಲ್ಲಿತ್ತು ಕ್ರಮೇಣ ಅವುಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿತು. ಈ ಪ್ರಬೇಧದ ಪ್ರಾಣಿಯ ಜೀವಕ್ಕೆ ಬೆದರಿಕೆ ಬಂದೊದಗಿದೆ. 
ಪ್ರಾಣಿಗಳ ಆವಾಸ ಸ್ಥಾನವನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವಾಗ ಅಲ್ಲಿ ಅಸಾಮಾನ್ಯವಾದ ತಲೆಬುರುಡೆ, ಹಾಗೂ ನಾಲ್ಕು ಕೊಂಬುಗಳು ಭೇಟೆಗಾರರಿಗೆ ಸಿಕ್ಕಿವೆ. ಜೊತೆಗೆ ಮಾಂಸಕ್ಕಾಗಿ ಕೂಡ ಭೇಟೆಯಾಡಲಾಗುತ್ತದೆ. 
ಈ ನಾಲ್ಕು ಕೊಂಬುಗಳುಳ್ಳ ಹುಲ್ಲೆಗಳು ಕಾಣ ಸಿಗುವುದು ಬಹಳ ಅಪರೂಪ. ಇವು ಬಹಳ ನಾಚಿಕೆ ಸ್ವಭಾವವದ್ದು,  ಇವುಗಳ ಸಂಖ್ಯೆ ಎಷ್ಟಿವೆ ಎಂಬ ಬಗ್ಗೆ ನಿಖರವಾಗಿಲ್ಲ ಎಂದು ಬಳ್ಳಾರಿ ಡಿಸಿಎಫ್ ಟಿ.ಎಸ್ ರಣಾವತ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!