ಮೃತ ಮಹಿಳೆ ಕುಸುಮಾ ಮತ್ತು ಆಕೆಯ ಮಕ್ಕಳು 
ರಾಜ್ಯ

ಮೈಸೂರು: ಗಂಡು ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ಮಹಿಳೆ ಮತ್ತು ಇಬ್ಬರು ಹೆಣ್ಣು ಮಕ್ಕಳ ದಹನ

30 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳನ್ನು ತಂಬಾಕು ಕಣಜದಲ್ಲಿ ಹಾಕಿ ಸುಟ್ಟಿರುವ ಘಟನೆ ಮೈಸೂರಿನ ರಾಜನ ಬೆಳಗುಲಿಯಲ್ಲಿ ...

ಮೈಸೂರು: 30 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳನ್ನು ತಂಬಾಕು ಕಣಜದಲ್ಲಿ ಹಾಕಿ ಸುಟ್ಟಿರುವ ಘಟನೆ ಮೈಸೂರಿನ ರಾಜನ ಬೆಳಗುಲಿಯಲ್ಲಿ ನಡೆದಿದೆ,

ಜನವರಿ 28 ರಂದು ಘಟನೆ ನಡೆದಿತ್ತು, ಆದರೆ ಕಳೆದ ಶನಿವಾರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆ ಸಹೋದರ ಬಿ.ಕೆ ಯುವರಾಜ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೆಬ್ರವರಿ 17 ರಂದು ಈ ಸಂಬಂಧ  ದೂರು ದಾಖಲಾಗಿದೆ. ಮೈಸೂರು ಎಸ್ ಪಿ ರವಿ ಡಿ. ಚನ್ನಣ್ಣನವರ್ ಪ್ರಕರಣ ಸಂಬಂಧ ಮಧ್ಯ ಪ್ರವೇಶಿಸಿದ್ದಾರೆ.

ಜನವರಿ 28 ರಂದು ಕುಸುಮಾ, ಮಕ್ಕಳಾದ ಕಾವ್ಯಾ, ಮತ್ತು ಪ್ರಣೀತಾ ರಾಜನಬೆಳಗುಲಿಯಲ್ಲಿರುವ ತಮ್ಮ ಮನೆಯಲ್ಲಿ ಬೆಂಕಿಗೆ ಬಲಿಯಾಗಿದ್ದರು. ಕುಸುಮಾ ಪತಿ ದೇವರಾಜು ಮತ್ತು ಆತನ ಆರು ಮಂದಿ ಸಂಬಂಧಿಕರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ನಂಬಿಸಿ, ಗ್ರಾಮದ ಹೊರವಲಯದಲ್ಲಿ ಮೂವರ ದೇಹಗಳನ್ನು ಸುಟ್ಟು ಹಾಕಿದ್ದರು.ಜೊತೆಗೆ ಎಲ್ಲಾ ಸಾಕ್ಷಿಗಳನ್ನು ನಾಶ ಪಡಿಸಿದ್ದರು.

ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಸುಮಾ ಪತಿ ಆರೋಪಿಸಿದ್ದ, ಕುಸುಮಾ ಸಹೋದರ, ಯುವರಾಜ ಇದೇ ವೇಳೆ ಗ್ರಾಮಕ್ಕೆ ಆಗಮಿಸಿದ್ದರು.ಅಲ್ಲಿ ತಮ್ಮ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿರಲಿಲ್ಲ,  ತನ್ನ ಸಹೋದರಿ ಹಾಗೂ ಮಕ್ಕಳನ್ನು ತಂಬಾಕು ಕ್ಯೂರಿಂಗ್ ಮಾಡುವ ಕಣಜದೊಳಗೆ ಹಾಕಿ ಸುಡಲಾಗಿದೆ ಎಂದು ಯುವರಾಜ ಆರೋಪಿಸಿದ್ದಾರೆ.

ಜಿಲ್ಲಾ ಎಸ್ ಪಿ ಅವರನ್ನು ಭೇಟಿ ಮಾಡಿ, ತನ್ನ ಅಕ್ಕನಿಗೆ ಗಂಡು ಮಗು ಆಗಲಿಲ್ಲ ಎಂಬ ಕಾರಣಕ್ಕೆ ಕುಸುಮಾ ಪತಿ ದೇವರಾಜ್ ಕಿರುಕುಳ ನೀಡುತ್ತಿದ್ದ. ದಂಪತಿಗೆ ಈ ಮೊದಲು ಹುಟ್ಟಿದ ಎರಡು ಮಕ್ಕಳು ಸ್ವಲ್ಪ ದಿನಗಳಲ್ಲೇ ನಿಗೂಡವಾಗಿ ಸಾವನ್ನಪ್ಪಿದ್ದವು, ಸಾಯುವ ಕೆಲ ದಿನಗಳ ಮುನ್ನ ಕುಸುಮಾ ತನ್ನ ಗಂಡನಿಂದ ಕಿರುಕುಳ ತಡೆಯಾಲಗುತ್ತಿಲ್ಲ ಎಂದು ಹೇಳಿಕೊಂಡಿದ್ದಾಗಿ ಯುವರಾಜ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುವುದಾಗಿ ಎಸ್ ಪಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT