ರಾಜ್ಯ

ನಗದು ಕೊರತೆ: ಆಕ್ರೋಶಿತ ನಾಗರಿಕರಿಂದ ಎಟಿಎಂ ಅಂತ್ಯಕ್ರಿಯೆ

Srinivasamurthy VN
ಕಲಬುರಗಿ: ದೇಶದಲ್ಲಿ ದಿಢೀರ್ ಉಂಟಾಗಿರುವ ನಗದು ಕೊರತೆಯಿಂದ ಬೇಸತ್ತಿರುವ ರಾಜ್ಯದ ಜನತೆ ಗುರುವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಎಟಿಎಂ ಯಂತ್ರಗಳ ಅಂತ್ಯಕ್ರಿಯೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಹಿಂದ ಚಿಂತಕರ ವೇದಿಕೆ ಕಾರ್ಯಕರ್ತರ ತಂಡ ಇಂದು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿ, ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐನ ಎಟಿಎಂ ಕೇಂದ್ರದ ಮುಂದೆ ಎಟಿಎಂ ತಿಥಿ ಊಟ ಕಾರ್ಯಕ್ರಮ ಆಯೋಜನೆ ಮಾಡಿತ್ತು.  ಸಂಘಟನೆ ಅಧ್ಯಕ್ಷ ಸಾಯಿಬಣ್ಣ ಜಮಾದಾರ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ, ನಗದು ಕೊರತೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ತಿಥಿ ಊಟ ಸಿದ್ಧಪಡಿಸಿ ಕಾರ್ಯಕರ್ತರು ಸೇವಿಸಿದರು. 
ಇದಕ್ಕೂ ಮೊದಲು ಎಟಿಎಂ ಯಂತ್ರದ ಮಾದರಿಗೆ ಹೂವಿನ ಅಲಂಕಾರ ಮಾಡಿ, ಎಟಿಎಂ ಯಂತ್ರದ ಶವಯಾತ್ರೆ ಕೂಡ ನಡೆಸಿದ್ದರು. ಇದೇ ವೇಳೆ ಎಸ್ ಬಿಐ ಬ್ಯಾಂಕ್ ನ ಪ್ರಾಂತೀಯ ಮ್ಯಾನೇಜರ್ ಗೆ ಪ್ರತಿಭಟನಾಕಾರರು ನಗದು ಕೊರತೆ ಸಮಸ್ಯೆ ಕುರಿತ ಮನವಿ ಸಲ್ಲಿಕೆ ಮಾಡಿದರು. ಅಲ್ಲದೆ ಈ ಮನವಿಯನ್ನು ವಿತ್ತ ಸಚಿವಾಲಯಕ್ಕೂ ತಲುಪಿಸುವಂತೆ ಹೇಳಿದರು. 
ಈ ವೇಳೆ ಮಾತನಾಡಿದ ಅಹಿಂದ ಚಿಂತಕರ ವೇದಿಕೆ ಅಧ್ಯಕ್ಷ ಸಾಯಿಬಣ್ಣ ಜಮಾದಾರ್ ಅವರು, ರಾಜ್ಯದಲ್ಲಿರುವ ಬಹುತೇಕ ಎಟಿಎಂಗಳ ನಗದು ರಹಿತವಾಗಿದ್ದು, ಇದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ನಗದು ಇರುವ ಕೆಲ ಎಟಿಎಂಗಳಲ್ಲಿ 10 ಸಾವಿರ ರೂ.ಗಳಿಗಿಂತೆ ಹೆತ್ತು ಹಣ ವಿತ್ ಡ್ರಾ ಮಾಡಲು ಅನುಮತಿ ನೀಡುತ್ತಿಲ್ಲ. ಕೂಡಲೇ ಸಮಸ್ಯೆ ಇತ್ಯರ್ಥ ಪಡಿಸಬೇಕು. ಇಲ್ಲವಾದಲ್ಲ ತಮ್ಮ ವೇದಿಕೆಯ ಪ್ರತಿಭಟನೆ ಉಗ್ರ ಸ್ವರೂಪ ಪಡೆಯಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
SCROLL FOR NEXT