ತ್ಯಾಗಮೂರ್ತಿಯ ಮಹಾಮಜ್ಜನಕ್ಕೂ ಮುನ್ನ ದೇಹ ತ್ಯಾಗ ಮಾಡಿದ ಜೈನಮುನಿ 
ರಾಜ್ಯ

ತ್ಯಾಗಮೂರ್ತಿಯ ಮಹಾಮಜ್ಜನಕ್ಕೂ ಮುನ್ನ ದೇಹ ತ್ಯಾಗ ಮಾಡಿದ ಜೈನಮುನಿ

ತ್ಯಾಗಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕಕ್ಕೂ ಮುನ್ನವೇ ಶ್ರವಣಬೆಳಗೊಳದಲ್ಲಿ ಜೈನ ಧರ್ಮೀಯತ ಅತ್ಯಂತ ಪವಿತ್ರ ಮತ್ತು ಕಠಿಣ ವ್ರತದ ಸಾರ್ವಜನಿಕ ದರ್ಶನ ನಡೆದಿದ್ದು, ಜೈನಮುನಿ ಶ್ರೀ 108 ಶ್ರೇಯಸಾಗರ ಮಹಾರಾಜರು (74) ಸಲ್ಲೇಖನ ಪೂರಕ ಸಮಾಧಿ ಮರಣ ಹೊಂದಿದ್ದಾರೆ...

ಶ್ರವಣಬೆಳಗೊಳ: ತ್ಯಾಗಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕಕ್ಕೂ ಮುನ್ನವೇ ಶ್ರವಣಬೆಳಗೊಳದಲ್ಲಿ ಜೈನ ಧರ್ಮೀಯತ ಅತ್ಯಂತ ಪವಿತ್ರ ಮತ್ತು ಕಠಿಣ ವ್ರತದ ಸಾರ್ವಜನಿಕ ದರ್ಶನ ನಡೆದಿದ್ದು, ಜೈನಮುನಿ ಶ್ರೀ 108 ಶ್ರೇಯಸಾಗರ ಮಹಾರಾಜರು (74) ಸಲ್ಲೇಖನ ಪೂರಕ ಸಮಾಧಿ ಮರಣ ಹೊಂದಿದ್ದಾರೆ. 
ಮುನಿಶ್ರೀಗಳು ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಮಧ್ಯಪ್ರದೇಶದಿಂದ ಆಗಮಿಸಿ ತ್ಯಾಗಿನಗರದಲ್ಲಿ ವಾಸ್ತವ್ಯ ಹೂಡಿದ್ದರು. 
ಸುಮಾರು 1 ತಿಂಗಳಿನಿಂದ ಶರೀರ ಕ್ಷೀಣವಾಗಿ ಕಳೆದ ಒಂದು ವಾರದಿಂದ ಆಹಾರ ತ್ಯಜಿಸಿದ್ದರು. ಕೊನೆಗ ಅವರ ಇಚ್ಚೆಯಂತೆಯೇ ನೀರನ್ನೂ ತ್ಯಜಿಸಿದ್ದರು. ವಿಶೇಷವೆಂದರೆ ಶ್ರವಣಬೆಳಗೊಳಕ್ಕೆ ಬರುವ ಮುನ್ನ ಅವರು ಶ್ರವಣಬೆಳಗೊಳದಲ್ಲಿಯೇ ತಮ್ಮ ಸಮಾಧಿಯಾಗಬೇಕೆಂದು ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ. 
ತಮ್ಮ ಇಚ್ಛೆಯಂತೆಯೇ ನಿನ್ನೆ ಮುಶ್ರೀಗಳು ದೇಹತ್ಯಾಗ ಮಾಡಿದ್ದಾರೆ. ಮುನಿಶ್ರೀ ಶ್ರೇಯಸಾಗರ ಮಹಾರಾಜರ ಪಾರ್ಥೀವ ಶರೀರವನ್ನು ತ್ಯಾಗಿ ನಗರದಿಂದ ಮೆರವಣಿಗೆಯಲ್ಲಿ ತಂದು ಶ್ರವಣಬೆಳಗೊಳದ ಸಂತೆ ಮೈದಾನದಲ್ಲಿರುವ ಶ್ರಮಣಗುಡ್ಡದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT