ಸಾಂದರ್ಭಿಕ ಚಿತ್ರ 
ರಾಜ್ಯ

ಎರ್ನಾಕುಲಂ ಗೆ ಹೋಗುವ ರೈಲುಗಳು ಇನ್ಮುಂದೆ ಬೈಯಪ್ಪನಹಳ್ಳಿಯಲ್ಲಿ ಹಾಲ್ಟ್!

ಬಾಣಸವಾಡಿ ರೈಲು ನಿಲ್ದಾಣವನ್ನು ಹೊರಡುವ ಮತ್ತು ತಂಗುವ ನಿಲ್ದಾಣವೆಂದು ಎರ್ನಾಕುಲಂ ಮೂಲದ ....

ಬೆಂಗಳೂರು: ಬಾಣಸವಾಡಿ ರೈಲು ನಿಲ್ದಾಣವನ್ನು ಹೊರಡುವ ಮತ್ತು ತಂಗುವ ನಿಲ್ದಾಣವೆಂದು ಎರ್ನಾಕುಲಂ ಮೂಲದ ಎರಡು ರೈಲುಗಳಿಗೆ ಗೊತ್ತುಪಡಿಸುವುದಕ್ಕೆ ಭಾರೀ ವಿರೋಧ ಮತ್ತು ಪ್ರತಿಭಟನೆ ಕೇಳಿಬರುತ್ತಿದ್ದರೂ ಸಹ ಅಲ್ಲಿಂದಲೇ ನಾಳೆ ಸಂಚಾರ ಆರಂಭಿಸಲಿದೆ. ಬೆಂಗಳೂರು ರೈಲ್ವೆ ವಲಯ ರಿಯಾಯಿತಿ ನೀಡಿರುವುದರಿಂದ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ರೈಲು ನಿಲುಗಡೆ ಹೊಂದಿರುತ್ತದೆ.
ಇತ್ತೀಚೆಗೆ ಕರ್ನಾಟಕ-ಕೇರಳ ಪ್ರಯಾಣಿಕರ ವೇದಿಕೆ ಮತ್ತು 87 ಮಲಯಾಳಿ ಒಕ್ಕೂಟದ ಫೆಡರೇಶನ್ ಮತ್ತು ಬೆಂಗಳೂರು ರೈಲ್ವೆ ವಲಯದ ಉನ್ನತ ಮಟ್ಟದ ಅಧಿಕಾರಿಗಳನ್ನು ಒಳಗೊಂಡು ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಧಾನಕ್ಕೆ ಬರಲಾಯಿತು. ರೈಲು ಹೊರಡುವ ಮತ್ತು ತಂಗುವ ನಿಲ್ದಾಣವೆಂದು ಬೈಯಪ್ಪನಹಳ್ಳಿಯೆಂದು ಅಥವಾ ಈಗಿರುವ ಸಂಗೊಳ್ಳಿ ರಾಯಣ್ಣ ವೃತ್ತವನ್ನು ಮಾಡಬೇಕೆಂದು ಹೇಳಲಾಯಿತಾದರೂ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಎರಡು ರೈಲುಗಳ ನಿಲುಗಡೆ ಮತ್ತು ಹೊರಡುವ ನಿಲ್ದಾಣವನ್ನು ಮುಂದಿನ ದಿನಗಳಲ್ಲಿ ಬೇರೆಡೆಗೆ ವರ್ಗಾಯಿಸಲು  ರೈಲ್ವೆ ಅಧಿಕಾರಿಗಳು ನಿರ್ಧರಿಸಿದ್ದಾರೆ. 
ಎರ್ನಾಕುಲಂ ರೈಲು ನಾಳೆಯಿಂದ ಬಾಣಸವಾಡಿ ರೈಲು ನಿಲ್ದಾಣದಿಂದ ಹೊರಡಲಿದೆ. ಬಾಣಸವಾಡಿ-ಎರ್ನಾಕುಲಂ ವಾರಕ್ಕೆರಡು ರೈಲು (ರೈಲು ಸಂಖ್ಯೆ 12684) ಬಾಣಸವಾಡಿಯಿಂದ ಮಂಗಳವಾರ ಮತ್ತು ಗುರುವಾರ ಸಂಜೆ 7 ಗಂಟೆಗೆ ಹೊರಡಲಿದ್ದು ಎರ್ನಾಕುಲಂಗೆ ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 7 ಗಂಟೆಗೆ ತಲುಪಲಿದೆ. 
ಎರ್ನಾಕುಲಂ-ಬಾಣಸವಾಡಿ ಬೈವೀಕ್ಲಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 12683) ಎರ್ನಾಕುಲಂನಿಂದ ಸಂಜೆ 5 ಗಂಟೆಗೆ ಬುಧವಾರ ಹೊರಟು ಬಾಣಸವಾಡಿಯಿಂದ ಬೆಳಗ್ಗೆ 4.5ಕ್ಕೆ ತಲುಪಲಿದೆ. 
ಇನ್ನೊಂದು ರೈಲು ಎರ್ನಾಕುಲಂ-ಬಾಣಸವಾಡಿ ವಾರದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 22607), ಎರ್ನಾಕುಲಂನಿಂದ ಸಾಯಂಕಾಲ 5 ಗಂಟೆಗೆ ಹೊರಟು, ಬಾಣಸವಾಡಿಗೆ ಸೋಮವಾರಗಳಂದು ಬೆಳಗ್ಗೆ 4.05ಕ್ಕೆ ತಲುಪಲಿದೆ. ಮೊದಲ ರೈಲು ಜನವರಿ 7ರಂದು ಹೊರಡಲಿದೆ. ಬಾಣಸವಾಡಿ-ಎರ್ನಾಕುಲಂ ವಾರದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 22608) ಬಾಣಸವಾಡಿಯಿಂದ ಸಾಯಂಕಾಲ 7 ಗಂಟೆಗೆ ಹೊರಟು ಎರ್ನಾಕುಲಂಗೆ ಮಂಗಳವಾರ ಬೆಳಗ್ಗೆ 6 ಗಂಟೆಗೆ ತಲುಪಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT