ಹೆಲಿ ಟ್ಯಾಕ್ಸಿ 
ರಾಜ್ಯ

ಬೆಂಗಳೂರಿನ ಮೊದಲ ಹೆಲಿ-ಟ್ಯಾಕ್ಸಿ ಸೇವೆಗೆ ಪ್ರಯಾಣಿಕರು ಫಿದಾ!, 2.5 ಗಂಟೆ ಪ್ರಯಾಣ ಈಗ 15 ನಿಮಿಷ!

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹೆಲಿ-ಟ್ಯಾಕ್ಸಿ ಸೇವೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಡುವೆ ಸಂಪರ್ಕ ಕಲ್ಪಿಸುವ ಹೆಲಿ-ಟ್ಯಾಕ್ಸಿಗೆ

ಬೆಂಗಳೂರು: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹೆಲಿ-ಟ್ಯಾಕ್ಸಿ ಸೇವೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಡುವೆ ಸಂಪರ್ಕ ಕಲ್ಪಿಸುವ ಹೆಲಿ-ಟ್ಯಾಕ್ಸಿಗೆ ಪ್ರಯಾಣಿಕರು ಮನಸೋತಿದ್ದಾರೆ. 
ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರೊಂದಿಗೆ ಬೆಂಗಳೂರು ಮಹಾನಗರದ ವೈಮಾನಿಕ ನೋಟ ನೋಡಲು ಸಿಗುವುದು ಹೆಲಿ-ಟ್ಯಾಕ್ಸಿ ಸೇವೆಯಿಂದ ಪ್ರಯಾಣಿಕರಿಗೆ ಸಿಗುವ ಮತ್ತೊಂದು ಆಹ್ಲಾದಕರ ಅನುಭವಾಗಿದೆ. 
ತಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಈ ಸೇವೆ ಒದಗಿಸುತ್ತಿದ್ದು, 3,500 ರೂಪಾಯಿಯೊಂದಿಗೆ  ಪ್ರತ್ಯೇಕವಾಗಿ ಜಿಎಸ್ ಟಿ ತೆರಿಗೆಯ ದರ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಕೆಐಎಎಲ್ ಗೂ ಹೆಲಿ-ಟ್ಯಾಕ್ಸಿ ಸೇವೆ ಒದಗಿಸಲು ತಂಬಿ ಏವಿಯೇಷನ್ ಚಿಂತನೆ ನಡೆಸಿದೆ. 
ಎಲೆಕ್ಟ್ರಾನಿಕ್ ಸಿಟಿ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಸಂಚರಿಸಲು ಪ್ರಯಾಣಿಕರಿಗೆ 2.5 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಹೆಲಿ-ಟ್ಯಾಕ್ಸಿಯಿಂದಾಗಿ 15 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. 
ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇನೆ, ಆದರೆ ನಮ್ಮ ನಗರದಲ್ಲಿ ಈ ಪ್ರಮಾಣದ ಹಸಿರು ಹಾಗೂ ಕೆರೆಗಳಿವೆ ಎಂದು ಗೊತ್ತಿರಲಿಲ್ಲ. ಹೆಲಿ-ಟ್ಯಾಕ್ಸಿ ಬಳಕೆ ಮಾಡಿದಾಗ ನಗರದ ವೈಮಾನಿಕ ನೋಟ ಸಿಕ್ಕಿತು. ವಾರಕ್ಕೆ ಎರಡು ದಿನಗಳು ಬೆಂಗಳೂರಿನಿಂದ ಮುಂಬೈ ಗೆ ಸಂಚರಿಸುತ್ತೇನೆ, ಹೆಲಿ-ಟ್ಯಾಕ್ಸಿ ಸೇವೆಯನ್ನು ಇನ್ನು ಮುಂದೆ ಆಗಾಗ್ಗೆ ಬಳಕೆ ಮಾಡುತ್ತೇನೆ ಎಂದು ಉದ್ಯಮಿ ಅಬ್ದುಲ್ ಹದಿ  ಹೇಳಿದ್ದಾರೆ. 
ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾದ ಸುರೇಶ್ ಬಾಬು ಸಹ ಹೆಲಿ-ಟ್ಯಾಕ್ಸಿ ಸೇವೆಗೆ ಮೆಚ್ಚುಗೆ ಸೂಚಿಸಿದ್ದು, ಪ್ರಯಾಣ ದರ ಸ್ವಲ್ಪ ಹೆಚ್ಚಾದರೂ ಮೌಲ್ಯಯುತವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಬೆಂಗಳೂರಿಗೆ ಹೊಸದಾಗಿ ಪರಿಚಯವಾಗಿರುವ ಹೆಲಿ-ಟ್ಯಾಕ್ಸಿ ನಗರವಾಸಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT