ಹೆಲಿ ಟ್ಯಾಕ್ಸಿ 
ರಾಜ್ಯ

ಬೆಂಗಳೂರಿನ ಮೊದಲ ಹೆಲಿ-ಟ್ಯಾಕ್ಸಿ ಸೇವೆಗೆ ಪ್ರಯಾಣಿಕರು ಫಿದಾ!, 2.5 ಗಂಟೆ ಪ್ರಯಾಣ ಈಗ 15 ನಿಮಿಷ!

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹೆಲಿ-ಟ್ಯಾಕ್ಸಿ ಸೇವೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಡುವೆ ಸಂಪರ್ಕ ಕಲ್ಪಿಸುವ ಹೆಲಿ-ಟ್ಯಾಕ್ಸಿಗೆ

ಬೆಂಗಳೂರು: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹೆಲಿ-ಟ್ಯಾಕ್ಸಿ ಸೇವೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಡುವೆ ಸಂಪರ್ಕ ಕಲ್ಪಿಸುವ ಹೆಲಿ-ಟ್ಯಾಕ್ಸಿಗೆ ಪ್ರಯಾಣಿಕರು ಮನಸೋತಿದ್ದಾರೆ. 
ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರೊಂದಿಗೆ ಬೆಂಗಳೂರು ಮಹಾನಗರದ ವೈಮಾನಿಕ ನೋಟ ನೋಡಲು ಸಿಗುವುದು ಹೆಲಿ-ಟ್ಯಾಕ್ಸಿ ಸೇವೆಯಿಂದ ಪ್ರಯಾಣಿಕರಿಗೆ ಸಿಗುವ ಮತ್ತೊಂದು ಆಹ್ಲಾದಕರ ಅನುಭವಾಗಿದೆ. 
ತಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಈ ಸೇವೆ ಒದಗಿಸುತ್ತಿದ್ದು, 3,500 ರೂಪಾಯಿಯೊಂದಿಗೆ  ಪ್ರತ್ಯೇಕವಾಗಿ ಜಿಎಸ್ ಟಿ ತೆರಿಗೆಯ ದರ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಕೆಐಎಎಲ್ ಗೂ ಹೆಲಿ-ಟ್ಯಾಕ್ಸಿ ಸೇವೆ ಒದಗಿಸಲು ತಂಬಿ ಏವಿಯೇಷನ್ ಚಿಂತನೆ ನಡೆಸಿದೆ. 
ಎಲೆಕ್ಟ್ರಾನಿಕ್ ಸಿಟಿ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಸಂಚರಿಸಲು ಪ್ರಯಾಣಿಕರಿಗೆ 2.5 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಹೆಲಿ-ಟ್ಯಾಕ್ಸಿಯಿಂದಾಗಿ 15 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. 
ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇನೆ, ಆದರೆ ನಮ್ಮ ನಗರದಲ್ಲಿ ಈ ಪ್ರಮಾಣದ ಹಸಿರು ಹಾಗೂ ಕೆರೆಗಳಿವೆ ಎಂದು ಗೊತ್ತಿರಲಿಲ್ಲ. ಹೆಲಿ-ಟ್ಯಾಕ್ಸಿ ಬಳಕೆ ಮಾಡಿದಾಗ ನಗರದ ವೈಮಾನಿಕ ನೋಟ ಸಿಕ್ಕಿತು. ವಾರಕ್ಕೆ ಎರಡು ದಿನಗಳು ಬೆಂಗಳೂರಿನಿಂದ ಮುಂಬೈ ಗೆ ಸಂಚರಿಸುತ್ತೇನೆ, ಹೆಲಿ-ಟ್ಯಾಕ್ಸಿ ಸೇವೆಯನ್ನು ಇನ್ನು ಮುಂದೆ ಆಗಾಗ್ಗೆ ಬಳಕೆ ಮಾಡುತ್ತೇನೆ ಎಂದು ಉದ್ಯಮಿ ಅಬ್ದುಲ್ ಹದಿ  ಹೇಳಿದ್ದಾರೆ. 
ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾದ ಸುರೇಶ್ ಬಾಬು ಸಹ ಹೆಲಿ-ಟ್ಯಾಕ್ಸಿ ಸೇವೆಗೆ ಮೆಚ್ಚುಗೆ ಸೂಚಿಸಿದ್ದು, ಪ್ರಯಾಣ ದರ ಸ್ವಲ್ಪ ಹೆಚ್ಚಾದರೂ ಮೌಲ್ಯಯುತವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಬೆಂಗಳೂರಿಗೆ ಹೊಸದಾಗಿ ಪರಿಚಯವಾಗಿರುವ ಹೆಲಿ-ಟ್ಯಾಕ್ಸಿ ನಗರವಾಸಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT