ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕಟ್ಟಡದ ಪ್ಲ್ಯಾನ್ ಮಂಜೂರಾತಿ ಪ್ರಕ್ರಿಯೆ ಈಗ ಸುಲಭ

ಕಟ್ಟಡ ಯೋಜನೆ ಮಂಜೂರಾತಿ ಪ್ರಕ್ರಿಯೆ ಸುಲಭಗೊಳಿಸಲು ಹಾಗೂ ನಾಗರಿಕರಿಗೆ ಹೆಚ್ಚಿನ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಆನ್ ಲೈನ್ ತಂತ್ರಾಂಶವೊಂದನ್ನು ಅನಾವರಣಗೊಳಿಸಿದೆ.

ಬೆಂಗಳೂರು: ಕಟ್ಟಡ ಯೋಜನೆ ಮಂಜೂರಾತಿ ಪ್ರಕ್ರಿಯೆ ಸುಲಭಗೊಳಿಸಲು ಹಾಗೂ ನಾಗರಿಕರಿಗೆ ಹೆಚ್ಚಿನ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಆನ್ ಲೈನ್ ತಂತ್ರಾಂಶವೊಂದನ್ನು  ಅನಾವರಣಗೊಳಿಸಿದೆ.

ವಿನೂತನ ಎಬಿಪಿಎಎಸ್  ತಂತ್ರಾಂಶ ಏ.1ರಿಂದ ಕಾರ್ಯಾಚರಣೆ ಮಾಡಲಿದೆ. ಇದರ ಮೂಲಕ ನಾಗರಿಕರು ಕಟ್ಟಡ ಯೋಜನೆ ಮಂಜೂರಾತಿ ಪಡೆಯಬಹುದು.ಇದರ ಬ್ರೋಸರ್ ನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಚಾರ್ಜ್ ನಿನ್ನೆ ಬಿಡುಗಡೆ ಮಾಡಿದರು.

ಈ ತಂತ್ರಾಂಶದಲ್ಲಿ ನಾಗರಿಕರು ಮೊದಲು ಅರ್ಜಿ ಸಲ್ಲಿಸಿ, ಸಂಬಂಧಿತ ದಾಖಲಾತಿಗಳನ್ನು ಅಳವಡಿಸಬೇಕು. ನಂತರ ವಿವಿಧ ಹಂತದ ಆರು ಮಂದಿ ಬಿಬಿಎಂಪಿ ಅದಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಲಿದ್ದಾರೆ.

ಪ್ರತಿಯೊಬ್ಬ ಅಧಿಕಾರಿಗೂ ಅನುಮೋದನೆ ನೀಡಲು ದಿನ ನಿಗದಿಪಡಿಸಲಾಗಿದೆ. ಒಟ್ಟಾರೆ 30 ದಿನಗಳೊಳಗೆ ಬಿಬಿಎಂಪಿ  ಅನುಮತಿ ದೊರೆಯಲಿದೆ. ಈ ಅವಧಿಯಲ್ಲಿ ಯಾವುದೇ ಅಧಿಕಾರಿ ಯೋಜನೆ ಬಗ್ಗೆ ಸ್ಪಷ್ಟಪಡಿಸದಿದ್ದರೆ ಅದು ಸ್ವಯಂ ಚಾಲಿತವಾಗಿ ಸ್ಥಗಿತಗೊಂಡು ಮುಂದಿನ ಅಧಿಕಾರಿಯ ಬಳಿ ಹೋಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

 ಇದರಿಂದಾಗಿ ನಾಗರಿಕರು ಬಿಬಿಎಂಪಿ ಕಚೇರಿಗೆ ಅಲೆಯುವುದು ತಪ್ಪಿದಂತಾಗಿದ್ದು, ಇದನ್ನು ಪರಿಚಯಿಸಿದ ಅಧಿಕಾರಿಗೆ ಧನ್ಯವಾದ ತಿಳಿಸಿದ ಮಂಜುನಾಥ್ ಪ್ರಸಾದ್, 40 , 60 ಚದರ ಅಡಿಯ ನಿವೇಶನಗಳ ಕಟ್ಟಡಗಳ ಯೋಜನೆ ಮಂಜೂರಾತಿಗಾಗಿ ಮಾತ್ರ ಈ ವಿಧಾನ ಅನ್ವಯವಾಗುತ್ತದೆ ಎಂದರು.

ನೆಲಮಹಡಿಯ ಕಾಮಗಾರಿ ಪೂರ್ಣಗೊಂಡ ನಂತರ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಆರಂಭವಾಗುತ್ತದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಏನಾದರೂ ನಿಯಮ ಉಲ್ಲಂಘನೆ ಕಂಡುಬಂದರೆ  ಪ್ರಮಾಣ ಪತ್ರ ನೀಡುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳುತ್ತಾರೆ.

ಇದರ ಪ್ರಕ್ರಿಯೆ ಹೇಗೆ
ಮೊದಲು ಬಿಬಿಎಂಪಿ ವೆಬ್ ಸೈಟ್ ನಲ್ಲಿನ  ಎಬಿಪಿಎಎಸ್ ಪೋರ್ಟಲ್ ನಲ್ಲಿ ಬಳಕೆದಾರರು ಐಡಿ ಸೃಷ್ಟಿಸಬೇಕು. ನಂತರ ಕಟ್ಟಡ ಯೋಜನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ , ಸಂಬಂಧಿತ ದಾಖಲೆಗಳನ್ನು ಅಪ್ ಲೋಡ್ ಮಾಡಿ ಪರಿಶೀಲನಾ ಶುಲ್ಕವನ್ನು ಸಂದಾಯ ಮಾಡಬೇಕು.

ಈ ಪ್ರಸ್ತಾವನೆಯನ್ನು ಏಳು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ,ಬಿಬಿಎಂಪಿ ತಂತ್ರಾಂಶದಿಂದ ಪರಿಶೀಲಿಸಿ ಅರ್ಜಿದಾರರ ಗಮನಕ್ಕೆ ತರಲಾಗುತ್ತದೆ.

ಅರ್ಜಿಯ ಪರಿಶೀಲನೆ ಮುಗಿದ ನಂತರ ಎಸ್ ಎಂಎಸ್ ಮತ್ತು ಇ-ಮೇಲ್ ನಲ್ಲಿ ಮಾಹಿತಿ ತಿಳಿಸಲಾಗುತ್ತದೆ. ನಂತರ  ನೀಡಿರುವ  ಮಂಜೂರಾತಿಯಂತೆ ಕಟ್ಟಡ ನಿರ್ಮಾಣ ಪ್ರಕ್ರಿಯೆ ಆರಂಭಿಸಬಹುದು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT