ರಾಜ್ಯ

ಆಜಾನ್ ವೇಳೆ ಭಾಷಣ ನಿಲ್ಲಿಸಿದ್ದಕ್ಕೆ ವೇದಿಕೆಯಿಂದ ಹೊರ ನಡೆದ ನಟಿ, ಕಾಂಗ್ರೆಸ್ ಮುಖಂಡೆ ಭಾವನಾ

Vishwanath S
ಚಿತ್ರದುರ್ಗ: ಸ್ಯಾಂಡಲ್ವುಡ್ ನಟಿ, ಕೆಪಿಸಿಸಿ ಕಾರ್ಯದರ್ಶಿ ಭಾವನಾ ಅವರು ಆಜಾನ್ ವೇಳೆ ಭಾಷಣ ನಿಲ್ಲಿಸಿದ್ದಕ್ಕೆ ವೇದಿಕೆಯಿಂದ ಹೊರ ನಡೆದ ಘಟನೆ ವರದಿಯಾಗಿದೆ. 
ಚಿತ್ರದುರ್ಗದಲ್ಲಿ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸ್ಥಳೀಯ ಮಹಿಳಾ ಮುಖಂಡೆ ಸಮಯ್ಯಾ ತಬ್ರೀಜ್ ಭಾಷಣ ಮಾಡುತ್ತಿದ್ದರು. ಈ ವೇಳೆ ಆಜಾನ್ ಕೂಗಿದ್ದರಿಂದ ತಬ್ರೀಜ್ ಭಾಷಣ ನಿಲ್ಲಿಸಿದ್ದಾರೆ. 
ಸಮಯ್ಯಾ ತಬ್ರೀಜ್ ನಡೆಯಿಂದ ಕೋಪಗೊಂಡ ಭಾವನಾ ಭಾಷಣ ಮುಂದುವರೆಸುಂತೆ ಸೂಚಿಸಿದರು. ಆಗ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾವನ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಬೇಸರಗೊಂಡ ಭಾವನಾ ಕೊರಳಿಗೆ ಹಾಕಿಕೊಂಡಿದ್ದ ಕಾಂಗ್ರೆಸ್ ಶಾಲನ್ನು ತೆಗೆದುಹಾಕಿ ಭಾಷಣ ನಿಲ್ಲಿಸಿದ ಸಮಯ್ಯಾ ಅವರನ್ನು ಬೈದು ಸಭೆಯಿಂದ ಹೊರ ನಡೆದರು. 
ಭಾವನಾ ಅವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ ಅವರೇ ಆಜಾನ್ ಮೊಳಗುವ ವೇಳೆ ಭಾಷಣ ನಿಲ್ಲಿಸುತ್ತಾರೆ, ಭಾವನಾ ಅವರೇನು ವಿಶೇಷವೇ ಎಂದು ಪ್ರಶ್ನಿಸಿದ್ದಾರೆ. 
SCROLL FOR NEXT