ರಾಜ್ಯ

ನೇರಲಕಟ್ಟೆ ಬಾಬು ಶೆಟ್ಟಿ ಕೊಲೆ ಪ್ರಕರಣ; ಕುಂದಾಪುರ ಪೊಲೀಸರಿಂದ ಆರು ಮಂದಿ ಬಂಧನ

Raghavendra Adiga

ಕುಂದಾಪುರ: ನೇರಲ ಕಟ್ಟೆ  ಬಾಬು ಶೆಟ್ಟಿ  ಕೊಲೆ ಪ್ರಕರಣ  ಸಂಬಂಧ  ಕುಂದಾಪುರ ಗ್ರಾಮಾಂತರ ಪೊಲೀಸರು   ಆರು ಮಂದಿಯನ್ನು  ಗುರುವಾರ ಬಂಧಿಸಿದ್ದಾರೆ.

ಬಂಧಿತರನ್ನು  ಕೆಂಚನೂರು ರಮೇಶ್ ಪೂಜಾರಿ(25) ಪ್ರವೀಣ್ ಪೂಜಾರಿ ಅನಗಳ್ಳಿ(25) ಸಚಿನ್ ಪೂಜಾರಿ ಬಸಸೂರು( 21), ರಾಘವೇಂದ್ರ ಪೂಜಾರಿ ಅನಗಳ್ಳಿ, ತೇಜಪ್ಪ ಶೆಟ್ಟಿ(68) ಹಾಗೂ ಉದಯರಾಜ್ ಶೆಟ್ಟಿ(55)  ಎಂದು ಗುರುತಿಸಲಾಗಿದೆ.

ಕಳೆದ ಡಿಸೆಂಬರ್  17 ರಂದು   ಕೊಲೆಗೀಡಾದ  ಬಾಬು ಶೆಟ್ಟಿ  ಜಾರಮಕ್ಕಿಯಿಂದ ಕುಂದಾಪುರಕ್ಕೆ   ತನ್ನ  ಬೈಕ್ ನಲ್ಲಿ ತೆರಳುತ್ತಿದ್ದಾಗ  ಆತನನ್ನು  ಹಿಂಬಾಲಿಸಿದ  ಆರೋಪಿಗಳು   ಮಾರ್ಗಮಧ್ಯೆ  ಆತನನ್ನು  ಅಡ್ಡಿಗಟ್ಟಿ  ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು 

ಕೊಲೆಗೀಡಾಗಿದ್ದ ಬಾಬು ಶೆಟ್ಟಿ  ವಾಹನಗಳನ್ನು ಬಾಡಿಗೆಗೆ ನೀಡುವ ಹಾಗೂ   ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡು ಜೀವನ ನಿರ್ವಹಿಸುತ್ತಿದ್ದ  ಎಂದು ಪೊಲೀಸ್ ಮೂಲಗಳು ಹೇಳಿವೆ.

SCROLL FOR NEXT