ಮೈಸೂರು, ಹಾಸನದಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿ ಬಂಧನ 
ರಾಜ್ಯ

ಮೈಸೂರು, ಹಾಸನದಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿ ಬಂಧನ

ಮೈಸೂರು-ಹಾಸನ ಜಿಲ್ಲೆಗಳಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿಯನ್ನು ಹೊಳೆನರಸಿಪುರ ಪೊಲೀಸರು ಬಂಧಿಸಿದ್ದಾರೆ.

ಹಾಸನ: ಮೈಸೂರು-ಹಾಸನ ಜಿಲ್ಲೆಗಳಲ್ಲಿ ಎಟಿಎಂ ಕಳ್ಳತನ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿಯನ್ನು ಹೊಳೆನರಸಿಪುರ ಪೊಲೀಸರು ಬಂಧಿಸಿದ್ದಾರೆ. 
ನಕಲಿ ಕಾರ್ಡ್ ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ಎಟಿಎಂ ನಲ್ಲಿ ಟಾಂಜೇನಿಯಾದ ಮಹಿಳೆ ಹಣ ದೋಚುತ್ತಿದ್ದ. ಆಂಡ್ರ್ಯೂ(28) ಬಂಧಿತ ವ್ಯಕ್ತಿಯಾಗಿದ್ದು, ಎಸ್ ಪಿ ಎಎನ್ ಪ್ರಕಾಶ್ ಗೌಡ ವ್ಯಕ್ತಿಯ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಆಂಡ್ರ್ಯೂ  ಈ ವರೆಗೂ 8.50 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾನೆ. 
ಮೈಕ್ರೋ ಕ್ಯಾಮರಾ, ಕಾರ್ಡ್ ರೀಡರ್,  ಚೀನಾದಿಂದ ತರಲಾಗಿದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಕೆ ಮಾಡಿ ಟಾಂಜೇನಿಯಾ ವ್ಯಕ್ತಿ ಎಟಿಎಂಗಳಲ್ಲಿ ಹಣ ದೋಚುತ್ತಿದ್ದಳು, ಈತನ ವಿರುದ್ಧ 4 ಬೇರೆ ಬೇರೆ ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೊಳೆನರಸಿಪುರದ ಎಟಿಎಂ ನಲ್ಲಿ ಹಣ ತೆಗೆದುಕೊಳ್ಳುತ್ತಿದ್ದಾಗ ಆಂಡ್ರ್ಯೂ ನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿದ್ಯಾಭ್ಯಾಸಕ್ಕಾಗಿ 2014 ರಲ್ಲಿ ಮೈಸೂರಿಗೆ ಆಗಮಿಸಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ; ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ; BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT