ಸಾಂದರ್ಭಿಕ ಚಿತ್ರ 
ರಾಜ್ಯ

ನನ್ನ ಕೂದಲನ್ನು ಕತ್ತರಿಸಲು ನನ್ನ ಪೋಷಕರಿಗೆ ಹೇಳಿ: ಅಧಿಕಾರಿಗಳ ಬಳಿ ಬಾಲಕನ ಅಳಲು

16 ವರ್ಷದ ಬಾಲಕನಿಗೆ ತಲೆ ಕೂದಲೇ ದೊಡ್ಡ ಸಮಸ್ಯೆಯಾಗಿದೆ, ಈತನ ಪೋಷಕರಿಗೆ ಈತನ ಗೋಳು ಕೇಳಿಸುತ್ತಲೇ ಇಲ್ಲ, ಪ್ರತಿ 2 ವರ್ಷಕ್ಕೊಮ್ಮೆ ಈತನ ಕೂದಲು ಕಟ್ ಮಾಡಿಸಲಾಗುತ್ತದೆ...

ಗದಗ: 16 ವರ್ಷದ ಬಾಲಕನಿಗೆ ತಲೆ ಕೂದಲೇ ದೊಡ್ಡ ಸಮಸ್ಯೆಯಾಗಿದೆ,  ಈತನ ಪೋಷಕರಿಗೆ ಈತನ ಗೋಳು ಕೇಳಿಸುತ್ತಲೇ ಇಲ್ಲ, ಪ್ರತಿ 2 ವರ್ಷಕ್ಕೊಮ್ಮೆ ಈತನ ಕೂದಲು ಕಟ್ ಮಾಡಿಸಲಾಗುತ್ತದೆ, ಆದರೆ ಅಲ್ಲಿಯವರೆಗೆ ಆತ ಸ್ನಾನ ಕೂಡ ಮಾಡುವಂತಿಲ್ಲ, ಇದೇ ದೊಡ್ಡ ಸಮಸ್ಯೆಯಾಗಿದೆ.
ಗದಗದಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಸಮಿತಿ ಅಧಿಕಾರಿಗಳು ಭೇಟಿ ಕೊಟ್ಟ ನಂತರ ಆತನ ಹಣೆ ಬರಹವೇ ಬದಲಾಗಿದೆ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾನೂನು ಜಾಗೃತಿ ಮೂಡಿಸಲು ಬಂದಿದ್ದರು. ಅವರ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ತನ್ನ ಪೋಷಕರಿಗೆ ಹೇಳಿ ತನ್ನ ಕೂದಲು ಕಟ್ ಮಾಡಿಸುವಂತೆ  ಮನವಿ ಮಾಡಿದ್ದಾನೆ.
ತನ್ನ ಕೂದಲಿನಿಂದಾಗಿ ಶಾಲೆ ಮತ್ತು ಸಮಾಜದಲ್ಲಿ ಮುಜುಗರ ಅನುಭವಿಸುವಂತಾಗಿದೆ, ನಮ್ಮ ಕೂದಲು ಕಟ್ ಮಾಡಿಸುವಂತೆ ಪೋಷಕರಿಗೆ ಮನವೊಲಿಸುವಂತೆ ತಿಳಿಸಿದ್ದಾನೆ. 
ಆದರೆ ಅಧಿಕಾರಿಗಳಿಗೆ ಪೋಷಕರ ಮನವೊಲಿಸುವುದು ಸುಲಭದ ಮಾತಾಗಿರಲಿಲ್ಲ, ನಂತರ ಪೋಷಕರು ಕೂದಲು ಕಟ್ ಮಾಡಿಸಲು ಒಪ್ಪಿಕೊಂಡಿದ್ದಾರೆ, ಅದು ಒಂದು ಷರತ್ತಿನ ಮೇರೆಗೆ, ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ರೇಣುಕಾದೇವಿ ದೇವಾಸ್ಥಾನದ ಬಳಿ ಕೂದಲು ಕಟ್ ಮಾಡಿಸುವಂತೆ ಷರತ್ತು ವಿಧಿಸಿದ್ದಾರೆ. ಅನಂತರ ಬಾಲಕನನ್ನು ದೇವಾಸ್ಥಾನಕ್ಕೆ ಕರೆದೊಯ್ದು ಅಲ್ಲಿಯೇ ಹೇರ್ ಕಟ್ ಮಾಡಿಸಿದ್ದಾರೆ.
ಕೂದಲು ಕಟ್ ಮಾಡಿಸಿದ್ದರಿಂದ ಸಂತೋಷವಾಗಿದ್ದು, ತನ್ನ ಪರೀಕ್ಷೆ ಬಗ್ಗೆ ಗಮನ ಕೇಂದ್ರೀಕರಿಸುತ್ತಿದ್ದಾನೆ. ಇತ್ತೀಚೆಗೆ ಆತನ ಸ್ನೇಹಿತರು ಆತನನ್ನು ಅವಾಯ್ಡ್ ಮಾಡುತ್ತಿದ್ದರು, ಆತ ಪ್ರತಿದಿನ ಸ್ನಾನ ಮಾಡದಿದ್ದರಿಂದ ವಾಸನೆ ಬರುತ್ತಿದ್ದರಿಂದ ಅವನನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ,  
ಧಾರವಾಡ. ಗದಗ, ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಪದ್ಧತಿ ರೂಢಿಯಲ್ಲಿದೆ, ಇದೊಂದು ಅವೈಜ್ಞಾನಿಕ ಪದ್ಧತಿಯಿಂದ ವಿಶೇಷವಾಗಿ ಮಕ್ಕಳಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಾಲಕನ ಧೈರ್ಯ ಮೆಚ್ಚುವಂತಹದ್ದು, ಕುಟುಂಬದ ಹಿತಕ್ಕಾಗಿ  ಮಕ್ಕಳ ಕೂದಲು ಬೆಳೆಸಿ, ದೇವರಿಗೆ ನೀಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT