ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಆನ್ ಲೈನ್ ವಂಚನೆ, 3 ರು. ಆಸೆಗೆ 95 ಸಾವಿರ ಕಳೆದುಕೊಂಡ ಮಹಿಳೆ!

ಮನೆಯಲ್ಲೇ ಕುಳಿತು ಆನ್ ಲೈನ್ ಆ್ಯಪ್ ಗಳ ಮೂಲಕ ತಮ್ಮ ಮೊಬೈಲ್ ಅನ್ನು ಮಾರಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 95 ಸಾವಿರ ರುಪಾಯಿಯನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಮನೆಯಲ್ಲೇ ಕುಳಿತು ಆನ್ ಲೈನ್ ಆ್ಯಪ್ ಗಳ ಮೂಲಕ ತಮ್ಮ ಮೊಬೈಲ್ ಅನ್ನು ಮಾರಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 95 ಸಾವಿರ ರುಪಾಯಿಯನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

47 ವರ್ಷದ ಅಪರ್ಣಾ ಥಕ್ಕರ್ ಸುರಿ ಎಂಬುವರು ತಮ್ಮ ಮೊಬೈಲ್ ಅನ್ನು ಓಎಲ್‌ಎಕ್ಸ್‌ನಲ್ಲಿ ಮಾರಲು ಮುಂದಾಗಿದ್ದರು. ಇನ್ನು ಈ ಮೊಬೈಲ್ ಅನ್ನು ತೆಗೆದುಕೊಳ್ಳುವುದಾಗಿ ಮೊಹಮ್ಮದ್ ಬಿಲಾಲ್ ಎಂಬಾತ ಅರ್ಪಣಾ ಅವರಿಗೆ ಕರೆ ಮಾಡಿದ್ದ. ನಂತರ ಅಪರ್ಣಾ ಆನ್ ಲೈನ್ ಆ್ಯಪ್ ಸ್ವಿಗ್ಗಿ ಗೋ ಆ್ಯಪ್ ನಲ್ಲಿ ಬಿಲಾಲ್ ಗೆ ಮೊಬೈಲ್ ತಲುಪಿಸಲು ಮುಂದಾಗಿದ್ದಾರೆ.

ಸ್ವಿಗ್ಗಿ ಗೋ ಆ್ಯಪ್ ಡೆಲಿವರಿ ಬಾಯ್ ಮೊಬೈಲ್ ಅನ್ನು ಅರ್ಪಣಾರಿಂದ ಪಡೆದುಕೊಂಡಿದ್ದಾನೆ. ನಂತರ 11 ಗಂಟೆ ಸುಮಾರಿಗೆ ಬಿಲಾಲ್ ಮಹಿಳೆಗೆ ಕರೆ ಮಾಡಿ ನಿಮ್ಮ ಆರ್ಡರ್ ಕ್ಯಾನ್ಸಲ್ ಆಗಿದೆಯಂತೆ ಹೀಗಾಗಿ ಮೊಬೈಲ್ ಡೆಲಿವರಿ ಕೊಡುವುದಿಲ್ಲ ಡೆಲಿವರಿ ಬಾಯ್ ಹೇಳಿದ್ದಾಗಿ ಅಪರ್ಣಾಗೆ ತಿಳಿಸಿದ್ದಾನೆ. ನಂತರ ಡೆಲಿವರಿ ಬಾಯ್ ಗೆ ಕರೆ ಮಾಡಿದಾಗ ಆತ ಸಹ ಇದನ್ನೇ ಹೇಳಿದ್ದು ನೀವು ಸ್ವಿಗ್ಗಿ ಕಸ್ಟಮರ್ ಕೇರ್ ಗೆ ಕರೆ ಮಾಡುವಂತೆ ತಿಳಿಸಿದ್ದಾನೆ. 

ಅದೇ ರೀತಿ ಅಪರ್ಣಾ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿಯೋರ್ವ ನಿಮ್ಮ ಮೊಬೈಲ್ ಹಿಂಪಡೆಯಬೇಕು ಅಂದರೆ ಸ್ವಿಗ್ಗಿ ಖಾತೆಗೆ 3 ರುಪಾಯಿ ಕಳುಹಿಸುವಂತೆ ತಿಳಿಸಿದ್ದಾನೆ. ಆತ ಹೇಳಿದಂತೆ ಎಲ್ಲವನ್ನು ಅರ್ಪಣಾ ಮಾಡಿದ್ದಾರೆ. ಇದಾದ ಕೆಲವೇ ನಿಮಿಷದಲ್ಲಿ ಅರ್ಪಣಾ ಅವರಿಗೆ ಸಂದೇಶವೊಂದು ಬಂದಿದೆ. ಅದರಲ್ಲಿ ನಿಮ್ಮ ಖಾತೆಯಿಂದ 95 ಸಾವಿರ ರುಪಾಯಿಯನ್ನು ವರ್ಗಾವಣೆ ಮಾಡಲಾಗಿದೆ ಅಂತ. 

ಇದನ್ನು ನೋಡಿದ ಅಪರ್ಣಾ ಕೂಡಲೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. 

ಹ್ಯಾಕರ್ ಗಳು ಅಪರ್ಣಾ ಅವರ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಮಹಿಳೆಯೊಬ್ಬರು ಆನ್ ಲೈನ್ ಆ್ಯಪ್ ಗಳನ್ನು ನಂಬಿ ಹಣ ಕಳೆದುಕೊಂಡಿರುವುದು ವಿಷಾದವೇ ಸರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT