ರಾಜ್ಯ

ದಾವಣಗೆರೆ: ವೆಂಟಿಲೇಟರ್ ಬೇಕೆಂದರೂ ನೀಡದ ವೈದ್ಯ ಸಿಬ್ಬಂದಿ, ಗರ್ಭಿಣಿ ಮಹಿಳೆ ಸಾವು

Raghavendra Adiga

ದಾವಣಗೆರೆ: ವೈದ್ಯರ ನಿರ್ಲಕ್ಷದ ಕಾರಣ ಗರ್ಭಿಣಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವರದಿಯಾಗಿದೆ..

ಮೃತಳನ್ನು  ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಗ್ರಾಮದ ಭವಾನಿ (24) ಎಂದು ಗುರುತಿಸಲಾಗಿದೆ. ಸಂಬಂಧಿಕರು ಹೇಳಿದಂತೆ  ವೆಂಟಿಲೇಟರ್ ಲಭ್ಯವಿಲ್ಲದಿರುವುದು ಈ ದುರಂತಕ್ಕೆ ಮುಖ್ಯ ಕಾರಣವಾಗಿದೆ."ರೋಗಿಗೆ ವೆಂಟಿಲೇಟರ್ ಅಗತ್ಯವಿದ್ದರೂ, ವೈದ್ಯಕೀಯ ಸಿಬ್ಬಂದಿ ಒದಗಿಸಲಿಲ್ಲ ಮತ್ತು ವೈದ್ಯರು ನಿರ್ಲಕ್ಷ ವಹಿಸಿದ್ದರು. ಎಂದು ಅವರು ಆರೋಪಿಸಿದರು.

ಮೃತರ ಸಂಬಂಧಿಕರು ಆಸ್ಪತ್ರೆಯ ಮುಂದೆ ತಮ್ಮ ದುಃಖ ಹಾಗೂ ಆಕ್ರೋಶವನ್ನು ಪ್ರದರ್ಶಿಸಿದ್ದಾರೆ. ಆದಾಗ್ಯೂ, ಪೊಲೀಸರು ಸ್ಥಳಕ್ಕೆ ಆಗಮಿಸಿ ಉದ್ವಿಗ್ನ ಸ್ಥಿತಿಯನ್ನು ವಾರಿಸುವಲ್ಲಿ ಯಶಸ್ವಿಯಾದರು.

SCROLL FOR NEXT