ಸಂಗ್ರಹ ಚಿತ್ರ 
ರಾಜ್ಯ

ದುಬಾರಿಯಾದ ಸಿಲಿಕಾನ್ ಸಿಟಿ ಹೋಟೆಲ್'ಗಳು: ಕಾಫಿ, ಟೀ ರೂ 2 ಏರಿಕೆ, ತಿಂಡಿ ಬೆಲೆಯೂ ರೂ.5 ಏರಿಕೆ

ಅಗತ್ಯ ವಸ್ತುಗಳಾದ ಹಾಲು, ಅಡುಗೆ ಅನಿಲ, ತರಕಾರಿ ಹಾಗೂ ಕಾರ್ಮಿಕರ ಕೂಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಕಾಫಿ-ಟೀ ಬೆಲೆಯನ್ನು ರೂ.2 ಹಾಗೂ ತಂಡಿ ತಿನಿಸುಗಳ ದರವನ್ನು ರೂ.2ರಿಂದ ರೂ.5 ಹೆಚ್ಚಳ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. 

ಬೆಂಗಳೂರು: ಅಗತ್ಯ ವಸ್ತುಗಳಾದ ಹಾಲು, ಅಡುಗೆ ಅನಿಲ, ತರಕಾರಿ ಹಾಗೂ ಕಾರ್ಮಿಕರ ಕೂಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಕಾಫಿ-ಟೀ ಬೆಲೆಯನ್ನು ರೂ.2 ಹಾಗೂ ತಂಡಿ ತಿನಿಸುಗಳ ದರವನ್ನು ರೂ.2ರಿಂದ ರೂ.5 ಹೆಚ್ಚಳ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. 

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ. ಇತ್ತೀಚೆಗೆ ಹಾಲು ಹಾಗೂ ಮೊಸರು ಬೆಲೆ ರೂ.2 ರಷ್ಟು ಏರಿಕೆಯಾಗಿದೆ. ಅಡುಗೆ ಅನಿಲದ ಬೆಲೆ ಇತ್ತೀಚಿನ ದಿನಗಳಲ್ಲಿ ರೂ.230 ಹೆಚ್ಚಳವಾಗಿದೆ. ಸೊಪ್ಪು, ತರಕಾರಿ, ತೆಂಗಿನ ಕಾಯಿ ಬೆಲೆ ಕೂಡ ದಿನೇ ದಿನೇ ದುಬಾರಿಯಾಗುತ್ತಿದೆ. ಹೋಟೆಲ್ ಗಳ ಬಾಡಿಗೆ ಸೇರಿದಂತೆ ಪ್ರತೀಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಹೀಗಾಗಿ ಕಾಫಿ, ಟೀ, ಉಪಾಹಾರ, ಊಟದ ಬೆಲೆಯನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ. 

ಹೋಟೆಲ್ ಕಾರ್ಮಿಕರು ಕೂಡ ಈ ಹಿಂದಿನಂತೆ ಸಿಗುತ್ತಿಲ್ಲ. ದಿನಕ್ಕೆ ಕನಿಷ್ಟ ರೂ.500 ಕೇಳುತ್ತಿದ್ದಾರೆ. ಇಂತಹ ಸಮಯದಲ್ಲಿ ಹೋಟೆಲ್ ಗಳನ್ನು ನಡೆಸುವುದು ಸುಲಭದ ವಿಷಯವಾಗಿಲ್ಲ. ವಿದ್ಯುತ್ ಬೆಲೆ, ಕುಡಿಯುವ ನೀರಿನ ಬೆಲೆಗಳು ಕೂಡ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದರ್ಶಿನಿ ಹಾಗೂ ಕಾಫಿ ಬಾರ್ ಗಳಲ್ಲಿ ಆಯಾ ಬಡಾವಣೆ ಮತ್ತು ನಿರ್ವಹಣೆಯ ಆಧಾರದಲ್ಲಿ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ಸಂಬಂಧ ಈಗಾಗಲೇ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ರಾಜ್ಯಾದ್ಯಂತ ಬೆಲೆ ಹೆಚ್ಚಳ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT