ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಕೈಚಳಕ! ಮಾತಾಡುತ್ತಿದ್ದ ವ್ಯಕ್ತಿಯ ಮೊಬೈಲ್ ಕಸಿದು ಖದೀಮರು ಪರಾರಿ

Raghavendra Adiga

ಬೆಂಗಳೂರು: ರಸ್ತೆಯ ಮೇಲೆ ವ್ಯಕ್ತಿಯೋರ್ವರು ಮೊಬೈಲ್‌ ಫೋನ್​ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಖದೀಮರು ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಲಿಕಾನ್ ಸಿಟಿಯ ವಿವೇಕ್ ನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

ವಿವೇಕ್ ನಗರದಲ್ಲಿ ದಂಪತಿ ರಸ್ತೆಯಲ್ಲಿ ನಡೆದುಕೊಂಡು ತಮ್ಮ ಮನೆಗೆ ತೆರಳುತ್ತಿದ್ದಾಗ ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಮೊಬೈಲ್​ ಮಾಲೀಕ ಕಳ್ಳರ ಹಿಂದೆಯೇ ಓಡಿ ಹೋಗಿದ್ದಾರೆ. ಆದರೆ, ಓಡಿ ಹೋಗುವ ಬರದಲ್ಲಿ ಮುಗ್ಗರಿಸಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ವಿವೇಕ್ ನಗರದ ಆಸು ಪಾಸು ಇದಕ್ಕೆ ಹಿಂದೆಯೂ ಇಂತಹಾ ಅನೇಕ ಪ್ರಸಂಗಗಳು ವರದಿಯಾಗಿದೆ. ಸಧ್ಯ ಈ ಪ್ರಕರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ವಿವೇಕ್ ನಗರ ಪೋಲೀಸ್ ಠಾಣೆಯಲ್ಲಿ ಮೊಬೈಲ್ ಕಳ್ಳತನ ಕುರಿತ ಪ್ರಕರಣ ದಾಖಲಾಗಿದ್ದು ರೋಪಿಗಳಿಗಾಗಿ ಹುಡುಕಾಟ ನಡೆದಿದೆ.

SCROLL FOR NEXT