ಗಮನ ಸೆಳೆದ ಮಹಿಳೆಯರ ಆಕರ್ಷಕ ಪಥ ಸಂಚಲನ 
ರಾಜ್ಯ

ಮಕರ ಸಂಕ್ರಮಣದ ಅಂಗವಾಗಿ ಮೊದಲ ಬಾರಿಗೆ ಮಹಿಳಾ ಪಥಸಂಚಲನ

ಇದುವರೆಗೂ ಬಲಾಢ್ಯ ಕೇಸರಿ ಕೋಟೆ ಬಾಗಲಕೋಟೆಯಲ್ಲಿ ಸಂಘ ಪರಿವಾರದವರಿಂದ ಪ್ರತಿವರ್ಷ ರಾಜ್ಯವೇ ತಿರುಗಿ ನೋಡುವಂತಹ ಆಕರ್ಷಕ ಪಥ ಸಂಚಲನ ನಡೆಯುತ್ತದೆ ಎನ್ನುವುದರ ಮಧ್ಯೆ ಇದೇ ಮೊದಲ ಬಾರಿಗೆ ಮಕರ ಸಂಕ್ರಮಣದ ಅಂಗವಾಗಿ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿ ಆಶ್ರಯದಲ್ಲಿ ಶ್ವೇತ ವರ್ಣದ ಬಟ್ಟೆಗಳನ್ನುಟ್ಟ ಮಹಿಳೆಯರಿಂದ ಆಕರ್ಷಕ ಪಥ ಸಂಚಲ ನಡೆಯಿತು.

ಬಾಗಲಕೋಟೆ: ಇದುವರೆಗೂ ಬಲಾಢ್ಯ ಕೇಸರಿ ಕೋಟೆ ಬಾಗಲಕೋಟೆಯಲ್ಲಿ ಸಂಘ ಪರಿವಾರದವರಿಂದ ಪ್ರತಿವರ್ಷ ರಾಜ್ಯವೇ ತಿರುಗಿ ನೋಡುವಂತಹ ಆಕರ್ಷಕ ಪಥ ಸಂಚಲನ ನಡೆಯುತ್ತದೆ ಎನ್ನುವುದರ ಮಧ್ಯೆ ಇದೇ ಮೊದಲ ಬಾರಿಗೆ ಮಕರ ಸಂಕ್ರಮಣದ ಅಂಗವಾಗಿ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿ ಆಶ್ರಯದಲ್ಲಿ ಶ್ವೇತ ವರ್ಣದ ಬಟ್ಟೆಗಳನ್ನುಟ್ಟ ಮಹಿಳೆಯರಿಂದ ಆಕರ್ಷಕ ಪಥ ಸಂಚಲ ನಡೆಯಿತು.

ಸಂಘ ಪರಿವಾರದ ಕಾರ್ಯಕರ್ತರಿಂದ ಆಕರ್ಷಕ ಪಥ ಸಂಚಲನದ ಜತೆಗೆ ಇತ್ತೀಚಿನ ವರ್ಷಗಳಲ್ಲಿ ಸಂಘ ಪರಿವಾರದ ಬಾಲ ಸದಸ್ಯರಿಂದ ಪಥ ಸಂಚಲನ ಪದ್ಧತಿ ಆರಂಭಗೊಂಡಿದೆ. ಇದೀಗ ಮಹಿಳೆಯರಿಂದಲೂ ಆಕರ್ಷಕ ಪಥ ಸಂಚಲನ ಆರಂಭಗೊಂಡಿರುವುದು ಮಹಿಳೆಯರಲ್ಲೂ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ.

ರಾಷ್ಟ್ರೀಯ ಸೇವಿಕ ಸಮಿತಿ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ಚರಂತಿಮಠದಿಂದ ಘೋಷ್ ಸಹಿತ ಆರಂಭಗೊಂಡ ಪಥ ಸಂಚಲನ ಪ್ರಮುಖ ಬೀದಿಗಳ ಮೂಲಕ ವಾಪಸ್ಸು ಚರಂತಿಮಠ ತಲುಪಿತು. ಪಥಸಂಚಲನದ ಮಾರ್ಗದುದ್ದಕ್ಕೂ ಅದ್ದೂರಿ ಸ್ವಾಗತ ಕೋರಿದ ಜನತೆ ಅಲ್ಲಲ್ಲಿ ಪುಷ್ಪಮಳೆಗರೆದರು. ಇನ್ನೂ ಕೆಲ ಕಡೆಗಳಲ್ಲಿ ಮಾರ್ಗದಲ್ಲಿ ಚಿತ್ತ ಚಿತ್ತಾರದ ರಂಗೋಲಿ ಹೊಯ್ದು ಪಥಸಂಚಲನ ಬರಮಾಡಿಕೊಂಡರು. ಏತನ್ಮಧ್ಯೆ ಅಲ್ಲಲ್ಲಿ ಮಕ್ಕಳು ರಾಷ್ಟ್ರ ಪುರುಷರ ವೇಷದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

ಪಥಸಂಚಲನದಲ್ಲಿ ಭಾಗವಹಿಸಿದ್ದವರು. ಪಥಸಂಚಲನಕ್ಕೆ ಸ್ವಾಗತ ಕೋರಲು ಮಾರ್ಗದ ಇಕ್ಕೆಲಗಳಲ್ಲಿ ನಿಂತವರು ಛತ್ರಪತಿ ಶಿವಾಜಿ, ಭವಾನಿ, ಭಾರತ ಮಾತೆಯನ್ನು ಸ್ಮರಿಸುವ ಮೂಲಕ ರೋಮಾಂಚನ ವಾತಾವರಣ ಸೃಷ್ಟಿಸಿದ್ದರು. ಪಥ ಸಂಚಲನದಲ್ಲಿ ಬಾಗಲಕೋಟೆ ನಗರದ ಮಹಿಳೆಯರು ಸೇರಿದಂತೆ ಜಿಲ್ಲೆ ಮುಧೋಳ, ಜಮಖಂಡಿ, ಇಳಕಲ್, ಬೀಳಗಿ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಭಾವಹಿಸಿದ್ದರು. ಮಹಿಳಾ ಮುಖಂಡರಾದ ಜ್ಯೋತಿರಾವ್, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ಸವಿತಾ ಲೆಂಕಣ್ಣವರ, ಶಿವಲೀಲಾ ಪಟ್ಟಣಶೆಟ್ಟಿ, ಜ್ಯೋತಿ ಕದಾಂಪುರ, ಸುಧಾ ದೇಸಾಯಿ, ಶೈಲಜಾ ಅಂಕಲಗಿ ಇತರರು ಇದ್ದರು.

-ವಿಠಲ ಬಲಕುಂದಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

'ಜನ ಸಾಮಾನ್ಯರಿಗಾಗಿ ಸುಪ್ರೀಂಕೋರ್ಟ್' : ಬಲವಾದ ಸಂದೇಶ ರವಾನಿಸಿದ CJI ಸೂರ್ಯಕಾಂತ್!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ: 2-1 ಅಂತರದಲ್ಲಿ ಸರಣಿ ಕೈ ವಶ!

Puri Jagannath Temple: ಒಡಿಶಾ ಅಲ್ಲದೇ ಇತರ ಆರು ರಾಜ್ಯಗಳಲ್ಲಿ ಎಕರೆಗಟ್ಟಲೇ ಜಮೀನು! ಒಟ್ಟು ಎಷ್ಟಿದೆ ಗೊತ್ತಾ?

SCROLL FOR NEXT