ರಾಜ್ಯ

ಬೆಳ್ತಂಗಡಿ: ಐವರು ಕುಖ್ಯಾತ ವಾಹನ ಕಳ್ಳರ ಬಂಧನ,  3.6 ಲಕ್ಷ ಮೌಲ್ಯದ ವಾಹನಗಳ ವಶ

Raghavendra Adiga

ಬೆಳ್ತಂಗಡಿ: ಬೆಳ್ತಂಗಡಿ ಸುತ್ತಮುತ್ತ ನಡೆಯುತ್ತಿದ್ದ ವಾಹನ ಕಳವು ಪ್ರಕರಣ ಬೇಧಿಸಿರುವ ಪೋಲೀಸರು ಐವರು ಆರೋಪಿಗಳನ್ನು ಬಂಧಿಸಿ 3.6 ಲಕ್ಷ ರೂ. ಮೌಲ್ಯದ ವಾಹನಗಳ ವಶಪಡಿಸಿಕೊಂಡಿದ್ದಾರೆ.

ಜುಲೈ 4 ರಂದು ಜೈನ್ಪೇಟೆ ಸಮೀಪ  ಪೋಲೀಸರು ವಾಡಿಕೆಯಂತೆ ವಾಹನ ಪರಿಶೀಲನೆ ನಡೆಸುತ್ತಿದ್ದಾಗ ಆರೋಪಿಗಳ ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಸುರತ್ಕಲ್ ನಿವಾಸಿ ವಿಜಯಾ ಅಲಿಯಾಸ್ ಅಂಜನೇಯ (23), ಉಳ್ಳೆಬೆಟ್ಟು  ನಿವಾಸಿ ಪ್ರದೀಪ್ ಅಲಿಯಾಸ್ ಚೇತನ್ ಅಲಿಯಾಸ್ ಪ್ರಡಿ (27), ಬಾಳೆಪುಣಿ ನಿವಾಸಿ  ಪೂರ್ವಡಿಕಲ್ಲು ಬಂಟ್ವಾಳ ಮೋಹನಾ ಅಲಿಯಾಸ್ ಪುಟ್ಟ (20) 21), ಬೆಳ್ತಂಗಡಿಯ ಕುಂಟಿನಿ ಲಾಯ್ಲಾ ಗ್ರಾಮದ ನಿವಾಸಿ  ನಿತಿನ್ ಕುಮಾರ್ (22). ಎಂದು ಗುರುತಿಸಲಾಗಿದೆ.

ಬಂಧಿತರಿಂದ ನಾಲ್ಕು ಬೈಕ್‌ಗಳು ಮತ್ತು ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.  ಮುಟ್ಟುಗೋಲು ಹಾಕಿಕೊಂಡ ವಾಹನಗಳ ಒಟ್ಟು ಮೌಲ್ಯ ಸುಮಾರು 3,60,000 ರೂ. ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.
 

SCROLL FOR NEXT