ರಾಜ್ಯ

ಹೆಸರಾಂತ ಉದಯರಂಗ ಮೋಟಾರ್ಸ್ ಮಾಲೀಕ ನಿಧನ 

Nagaraja AB

ಮೈಸೂರು/ಬೆಂಗಳೂರು: ಹೆಸರಾಂತ ಖಾಸಗಿ ರಸ್ತೆ ಸಾರಿಗೆ ಸಂಸ್ಥೆ ಉದಯರಂಗ ಮೋಟಾರ್ಸ್ ಮಾಲೀಕ ಎಂ ವಿ ಸುಬ್ರಮಣ್ಯ ಗುರುವಾರ ವಿಧಿವಶರಾಗಿದ್ದಾರೆ. ಅವರಿಗ 74 ವರ್ಷ ವಯಸ್ಸಾಗಿತ್ತು

ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ಭಾಗದಲ್ಲಿ ಚಿರಪರಿಚಿತವಾಗಿರುವ, ಉದಯರಂಗ ಮೋಟಾರ್ಸ್ ಬೆಂಗಳೂರಿನಲ್ಲಿಯೂ ಕಳೆದೊಂದು ದಶಕದ ಹಿಂದೆ ವ್ಯವಹಾರವನ್ನು ವಿಸ್ತರಿಸಿತ್ತು.

ಮಳವಳ್ಳಿಯಲ್ಲಿ ಮಹಾಲಕ್ಷ್ಮಿ ಹಾಗೂ ರಾಜರಾಜೇಶ್ವರಿ ಚಿತ್ರ ಮಂದಿರದ ಮಾಲೀಕರು, ಪ್ರದರ್ಶಕರು ಹಾಗೂ ಹಂಚಿಕೆದಾರರೂ ಆಗಿದ್ದ ಸುಬ್ರಮಣ್ಯ ಅವರು, ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಸುಮಾರು 300ಕ್ಕೂ ಹೆಚ್ಚು ಚಿತ್ರಗಳಿಗೆ ಫೈನಾನ್ಸ್ ಮಾಡಿದ್ದರು. ಹೀಗಾಗಿ ಅನೇಕ ಚಿತ್ರಗಳು ತೆರೆಕಂಡು ಯಶಸ್ಸು ಗಳಿಸಲು ಸಾಧ್ಯವಾಗಿತ್ತು.

ಸುಬ್ರಮಣ್ಯ ಅವರ ನಿಧನಕ್ಕೆ ದ್ವಾರಕೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಹಿರಿಯ ನಟರು ಕಂಬನಿ ಮಿಡಿದಿದ್ದಾರೆ.
 

SCROLL FOR NEXT