ಸಾಂದರ್ಭಿಕ ಚಿತ್ರ 
ರಾಜ್ಯ

ಸತ್ತವರನ್ನೂ ನೆಮ್ಮದಿಯಾಗಿ ಬಿಡದ ಕೊರೋನಾ: ಶವದ ಮುಖ ನೋಡಲಾಗದೇ ಸಂಬಂಧಿಕರ ರೋಧನೆ

ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ತಂದಿಟ್ಟಿರುವ ಸಂಕಟಗಳು ಒಂದಲ್ಲ, ಎರಡಲ್ಲ, ಅನೇಕ ರೀತಿಯಲ್ಲಿ ಜನರು ತೊಂದರೆಗೊಳುಪಡುತ್ತಿದ್ದಾರೆ.ಕೇವಲ ಬದುಕಿರುವವರು ಮಾತ್ರವಲ್ಲ, ಸತ್ತವರನ್ನು ಕೊರೋನಾ ಕಾಡುತ್ತಿದೆ

ಬೆಂಗಳೂರು: ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ತಂದಿಟ್ಟಿರುವ ಸಂಕಟಗಳು ಒಂದಲ್ಲ, ಎರಡಲ್ಲ, ಅನೇಕ ರೀತಿಯಲ್ಲಿ ಜನರು ತೊಂದರೆಗೊಳುಪಡುತ್ತಿದ್ದಾರೆ.ಕೇವಲ ಬದುಕಿರುವವರು ಮಾತ್ರವಲ್ಲ, ಸತ್ತವರನ್ನು ಕೊರೋನಾ ಕಾಡುತ್ತಿದೆ.

ಅಸ್ವಾಭಾವಿಕವಾಗಿ ಸಾವನ್ನಪ್ಪಿದವರ ಕುಟುಂಬಸ್ಥರ ಪಾಡಂತು ಹೇಳತೀರದು, ಮರಣೋತ್ತರ ಪರೀಕ್ಷೆ ನಡೆದು ಶವ ಪಡೆಯಲು ಎರಡು ಮೂರು ದಿನ ಕಾಯಬೇಕಿದೆ.ಕೊರೋನಾ ಪರೀಕ್ಷೆ ನಡೆದು ಫಲಿತಾಂಶ ಬರುವವರೆಗೂ ಮರಣೋತ್ತರ ಪರೀಕ್ಷೆ ನಡೆಸುವಂತಿಲ್ಲ.

ರಸ್ತೆ ಅಪಘಾತ, ಆತ್ಮಹತ್ಯೆ, ಮತ್ತು ಕೊಲೆಗೀಡಾದ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ನಡೆಸಿ ಬೇಗ ಶವ ನೀಡುವಂತೆ ಒತ್ತಡ ಹೇರುತ್ತಾರೆ. ಪರಿಸ್ಥಿತಿ ಅರ್ಥಮಾಡಿಕೊಳ್ಳದ ಮೃತರ ಸಂಬಂಧಿಕರು ಸಿಬ್ಬಂದಿ ಜೊತೆ ಜಗಳ ಮಾಡುತ್ತಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

ಪರೀಕ್ಷೆ ಫಲಿತಾಂಶ ಬರುವವರೆಗೂ ಕಾಯುವಂತೆ ಸಂಬಂಧಿಕರ ಮನವೊಲಿಸುವಂತೆ ನಾವು ಪೊಲೀಸರಲ್ಲಿ ಮನವಿ ಮಾಡಿಕೊಳ್ಳಬೇಕಿದೆ ಎಂದು ಬೌರಿಂಗ್ ಆಸ್ಪತ್ರೆ ಮುಖ್ಯಸ್ಥ ಡಾ. ಸತೀಶ್ ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಕೊರೋನಾ ಫಲಿತಾಂಶ ಬರುವವರೆಗೂ ಶವಗಾರದ ಸಿಬ್ಬಂದಿಯನ್ನು ಶವದ ಜೊತೆ ಸಂಪರ್ಕಕ್ಕೆ ಬಿಡುವುದಿಲ್ಲ, ಕೆಲ ಪ್ರಕರಣಗಳಲ್ಲಿ ನಮಗೆ 2-3 ದಿನಗಳಲ್ಲಿ ವರದಿ ಬರುತ್ತದೆ, ಇಲ್ಲ ಅದೇ ದಿನ ಸಿಗುತ್ತದೆ. ಕಳೆದ ಕೆಲವು ದಿನಗಳಲ್ಲಿ ಕೊಲೆ, ಆತ್ಮಹತ್ಯೆ ಮತ್ತು ಅಪಘಾತ ಪ್ರಕರಣಗಳು ಹೆಚ್ಚಾಗಿ ಹೆಚ್ಚಿನ ಶವಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಮೃತರ ಸಂಬಂಧಿಕರು ಶವದ ಮುಖ ನೋಡಲು ಬಯಸುತ್ತಾರೆ. ಆದರೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಾವು  ಯಾರಿಗೂ ಅವಕಾಶ ನೀಡುವಂತಿಲ್ಲ, ಸರ್ಕಾರದ ಮಾರ್ಗಸೂಚಿ ಅನುಸಾರ ನಾವು ಶವಗಳನ್ನು ಸುಡಲು ಅವರ ಸಂಬಂಧಿಕರಿಗೆ ಹಸ್ತಾಂತರಿಸುವಂತಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ನಮ್ಮ ಸಿಬ್ಬಂದಿಯೊಬ್ಬರು ಕೊರೋನಾ ಶಂಕಿತ ರೋಗಿ ಶವ ತೆಗೆದುಕೊಂಡ ನಂತರ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆಧರೆ ಪಲಿತಾಂಶ ನೆಗೆಟಿವ್ ಬಂದಿದೆ ಎಂದು
ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT