ರಾಜ್ಯ

ಘಾಟಿ ಸುಬ್ರಹ್ಮಣ್ಯ: ಹುಡುಗಿಯರ ಜೊತೆ ಜಾಲಿ ರೈಡ್: ಕೆರೆಯಲ್ಲಿ ಮುಳುಗಿ ಮೂವರು ದುರ್ಮರಣ

Vishwanath S

ದೊಡ್ಡಬಳ್ಳಾಪುರ: ಮೋಜು ಮಾಡಲು ಬಂದಿದ್ದ ಮೂವರು ಯುವಕರು ನೀರುಪಾಲಾಗಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪಗಾನಹಳ್ಳಿ ಕೆರೆಯಲ್ಲಿ ಸೋಮವಾರ ಸಂಭವಿಸಿದೆ.
 
ಬೆಂಗಳೂರಿನ ರಾಮಮೂರ್ತಿನಗರದ ರಾಜು(19), ಚಂದ್ರು(20) ಮತ್ತು ನವೀನ್(24) ಮೃತ ದುರ್ದೈವಿಗಳು.

ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ನಾಲ್ವರು ಯುವಕರು, ಯುವತಿಯರು ಘಾಟಿ ಸುಬ್ರಹ್ಮಣ್ಯಕ್ಕೆ ಬಂದು ನಂತರ ಕೆರೆಯಲ್ಲಿ ಈಜುತ್ತಿದ್ದರು. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಓರ್ವನನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ನೀರುಪಾಲಾಗಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT