ಸಾಂದರ್ಭಿಕ ಚಿತ್ರ 
ರಾಜ್ಯ

ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿ!

ನಗರದಲ್ಲಿ ಕೆಲಸ ಕೊಡಿಸುವುದಾಗಿ ಮಾಡೆಲ್‌ಗೆ ವಂಚನೆ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿಯಾಗಿದ್ದಾಳೆ.

ಬೆಂಗಳೂರು: ನಗರದಲ್ಲಿ ಕೆಲಸ ಕೊಡಿಸುವುದಾಗಿ ಮಾಡೆಲ್‌ಗೆ ವಂಚನೆ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿಯಾಗಿದ್ದಾಳೆ.

ಪುಣೆ ಮೂಲದ ರೂಪದರ್ಶಿ ರೂಪಾ ರಿಝಾವ್ಲ್ ಶೇಖ್‌ ಎಂಬಾಕೆಗೆ ಆಕೆಯ ಸ್ನೇಹಿತೆ ಸೂಫಿಯಾ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ರೂಪಾಗೆ ಮಾಡೆಲಿಂಗ್‌ನಲ್ಲಿ ಕೆಲಸ ಕೊಡಿಸುವುದಾಗಿ ಸೂಫಿಯಾ ನಂಬಿಸಿದ್ದಳಂತೆ. ರೂಪಾ ಬಳಿಯಿದ್ದ ಹಣವನ್ನು ಠೇವಣಿ ಮಾಡಲು ಹೋಗಿದ್ದ ವೇಳೆ  ಸೂಫಿಯಾ ರೂಪದರ್ಶಿಯ 3 ಲಕ್ಷ ರೂಪಾಯಿ ಮತ್ತು 2 ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಸದ್ಯ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ರೂಪ ಕಳೆದ 20 ದಿನಗಳ ಹಿಂದೆ ಮುಂಬೈನಿಂದ ಬೆಂಗಳೂರಿಗೆ ಕೆಲಸವನ್ನರಸಿ ಬಂದಿದ್ದರು. ನಗರದ ಸಂಪಂಗಿ ರಾಮನಗರದಲ್ಲಿ ಹೊಟೆಲ್ ನಲ್ಲಿ ತಂಗಿದ್ದ ರೂಪಾಗೆ ಆಕೆಯ ಸ್ನೇಹಿತರ ಮೂಲದಿಂದ ಸೂಫಿಯಾ ಎಂಬಾಕೆ ಪರಿಚಿತಳಾಗಿದ್ದಾಳೆ. ಈ ವೇಳೆ ತಾನೂ ಕೂಡ ಮಾಡಲಿಂಗ್  ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, 70 ಸಾವಿರೂ ರೂಗಳ ವರೆಗೆ ವೇತನ ದೊರೆಯುವ ಕೆಲಸ ರೂಪದರ್ಶಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ರೂಪಾಳನ್ನು ನಂಬಿಸಿದ್ದಾಳೆ. ಆಕೆಯ ಮಾತನ್ನು ನಂಬಿದ ರೂಪಾ ನವೆಂಬರ್ 1ರಂದು ಸಂಪಂಗಿ ರಾಮನಗರದಿಂದ ಸುದ್ದಗುಂಟೆ ಪಾಳ್ಯಕ್ಕೆ ನಿವಾಸ ಬದಲಿಸಿದ್ದಾರೆ. 

ಅದೇ ದಿನ ಸಂಜೆ ನನ್ನ ಬಳಿ ಮೂರು ಲಕ್ಷ ರೂಗಳಿದ್ದು ಅದನ್ನು ನನ್ನ ತಾಯಿ ಖಾತೆಗೆ ಠೇವಣಿ ಮಾಡಬೇಕು ಎಂದು ಹೇಳಿದಾಗ ಅದನ್ನು ರಾತ್ರಿ ಮಾಡಬಹುದು ಎಂದು ಹೇಳಿ ಕಾರಿನಲ್ಲಿ ಸುಮಾರು 2 ಗಂಟೆ ತಿರುಗಿಸಿದಳು. ಬಳಿಕ ಮೈಸೂರು ರಸ್ತೆಯ ಸ್ಯಾಟೆಲೈಟ್ ಬಸ್ ನಿಲ್ದಾಣದ ಬಳಿಯ ಪೆಟ್ರೋಲ್ ಬಂಕ್  ವೊಂದರ ಬಳಿ ಕಾರು ನಿಲ್ಲಿಸಿ ಬ್ಲಾಂಕೆಟ್ ತರುವಂತೆ ಹೇಳಿದರು. ನಾನು ನನ್ನ ಹಣ ಮತ್ತು ಮೊಬೈಲ್ ಅನ್ನು ಕಾರಿನಲ್ಲೇ ಬಿಟ್ಟು ಕಾರಿನಿಂದ ಇಳಿದಾಗ ಸೂಫಿಯಾ ಪರಾರಿಯಾದಳು ಎಂದು ರೂಪಾ ಹೇಳಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT