ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಒತ್ತಾಯಿಸಿ ಅನಂತಕುಮಾರ್ ಪುತ್ರಿ ಟ್ವೀಟ್; ಚರ್ಚೆಗೆ ಗ್ರಾಸ

ಬೆಂಗಳೂರು ಮತ್ತು ಮುಂಬೈ ನಡುವೆ ಹೈಸ್ಪೀಡ್ ರೈಲು ಓಡಿಸುವಂತೆ ಮಾಜಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತಕುಮಾರ್ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದು, ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವೆ ಹೈಸ್ಪೀಡ್ ರೈಲು ಓಡಿಸುವಂತೆ ಮಾಜಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತಕುಮಾರ್ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದು, ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಅಸ್ತಿತ್ವದಲ್ಲಿರುವ ರೈಲನ್ನು ವೇಗಗೊಳಿಸಿ, ಈಗ ತೆಗೆದುಕೊಳ್ಳುತ್ತಿರುವ ಸಮಯವನ್ನು ಕಡಿಮೆ ಮಾಡಬಹುದು. ಆದರೆ ಈ ಮಾರ್ಗದಲ್ಲಿ ನಿರ್ದಿಷ್ಟ ಹೈ-ಸ್ಪೀಡ್ ರೈಲಿನ ಯಾವುದೇ ಪ್ರಸ್ತಾಪ ಇಲ್ಲ ಎಂದು ನೈಋತ್ಯ ರೈಲ್ವೆ(SWR) ಹೇಳಿದೆ.

ಪರಿಸರವಾದಿ ವಿಜೇತಾ ಅವರು ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲಿನ ಟ್ವೀಟ್ ಮಾಡಿದ್ದು, “ಮುಂಬೈ-ದೆಹಲಿ ನಡುವಿನ 1377 ಕಿಮೀ ದೂರ ಕ್ರಮಿಸಲು ವೇಗದ ರೈಲು ಸುಮಾರು 17 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಮುಂಬೈ-ಬೆಂಗಳೂರು ನಡುವಿನ 1120 ಕಿಮೀ ದೂರ  ಕ್ರಮಿಸಲು ವೇಗದ ರೈಲು ಸುಮಾರು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ಅಶ್ವಿನಿ ವೈಷ್ಣವ್ ಅವರೇ ನಮಗೆ ಈ ಎರಡು ಮೆಗಾ ಸಿಟಿಗಳ ನಡುವೆ ಹೈಸ್ಪೀಡ್ ರೈಲು ಬೇಕು ಎಂದು ಹೇಳಿದ್ದಾರೆ.

ಕೆಲವರು ವಿಜೇತಾ ಅನಂತಕುಮಾರ್ ಅವರ ಸಲಹೆಯನ್ನು ಬೆಂಬಲಿಸಿ ಆನ್‌ಲೈನ್‌ನಲ್ಲಿ ಚರ್ಚೆ ಪ್ರಾರಂಭಿಸಿದರೆ, ಇನ್ನೂ ಕೆಲವರು ಮೂಲಸೌಕರ್ಯಗಳ ಕೊರತೆಯನ್ನು ವಿವರಿಸಿದ್ದಾರೆ. 

“ಖಾಸಗಿ ಬಸ್ ನಿರ್ವಾಹಕರ ಲಾಬಿ ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲಿಗೆ ಅವಕಾಶ ನೀಡುತ್ತಿಲ್ಲ. ಈ ಎರಡು ನಗರಗಳ ನಡುವಿನ ವೇಗದ ರೈಲಿನ ಬೇಡಿಕೆ ದೀರ್ಘಕಾಲದಿಂದ ಬಾಕಿ ಉಳಿದಿದೆ ಎಂದು ಸಂಜಯ್ ಮೂರ್ತಿ ಟ್ವೀಟ್ ಮಾಡಿದ್ದಾರೆ.

ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಬೆಂಗಳೂರು ಮತ್ತು ಮುಂಬೈ ನಡುವೆ ಯಾವುದೇ ಹೈಸ್ಪೀಡ್ ಕಾರಿಡಾರ್ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದು, “ಇತ್ತೀಚೆಗೆ ಒಂಬತ್ತು ಹೈಸ್ಪೀಡ್ ಕಾರಿಡಾರ್‌ಗಳ ಪ್ರಸ್ತಾವನೆಯಲ್ಲಿ ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಒಂದು ಪ್ರಸ್ತಾಪವಿದೆ. ಆದಾಗ್ಯೂ, ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣದ ಸಮಯವನ್ನು 24 ಗಂಟೆಗಳಿಂದ ಕಡಿಮೆ ಮಾಡುವ ಅವಶ್ಯಕತೆಯಿದೆ ಮತ್ತು ಮಾರ್ಗದ ಉದ್ದಕ್ಕೂ ವಿದ್ಯುದ್ದೀಕರಣ ಮತ್ತು ಡಬಲ್ ಟ್ರಾಕ್ ಮಾಡಲು ಮಾತ್ರ ಸಾಧ್ಯ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT