ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಕಟ್ಟಡ ಯೋಜನೆ ಅನುಮೋದನೆ ದರ ಕಡಿತ!

ಬೆಂಗಳೂರಿನೊಳಗೆ ಕಟ್ಟಡ ಯೋಜನೆಗಳನ್ನು ಅನುಮೋದಿಸಲು ರಾಜ್ಯ ಸರ್ಕಾರ ಕಳೆದ ವರ್ಷ ನಿಗದಿಪಡಿಸಿದ ಶುಲ್ಕವನ್ನು ಕಡಿತಗೊಳಿಸಿದೆ.

ಬೆಂಗಳೂರು: ಬೆಂಗಳೂರಿನೊಳಗೆ ಕಟ್ಟಡ ಯೋಜನೆಗಳನ್ನು ಅನುಮೋದಿಸಲು ರಾಜ್ಯ ಸರ್ಕಾರ ಕಳೆದ ವರ್ಷ ನಿಗದಿಪಡಿಸಿದ ಶುಲ್ಕವನ್ನು ಕಡಿತಗೊಳಿಸಿದೆ. ಮಾರ್ಗದರ್ಶನ ಮೌಲ್ಯದ ಪ್ರತಿ ಚದರ ಮೀಟರ್‌ಗೆ 0.5 ಶೇಕಡಾದಿಂದ ಶೇ .60 ರಷ್ಟು ಕಡಿತಗೊಳಿಸಿ, ವಸತಿ ಆಸ್ತಿಗಳಿಗೆ ಶೇ 0.2 ಕ್ಕೆ ಇಳಿಸಿದೆ. ಕೈಗಾರಿಕೆಗಳಿಗೆ ಇದನ್ನು ಶೇಕಡಾ 1 ರಿಂದ 0.3 ಕ್ಕೆ ಇಳಿಸಲಾಗಿದೆ. ಅಭಿವೃದ್ಧಿ ಅಥವಾ ಹೆಚ್ಚುವರಿ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದೆ.

ಪರಿಷ್ಕೃತ ಶುಲ್ಕಗಳನ್ನು ಜಾರಿಗೆ ತರಲು  ಕರ್ನಾಟಕ ಪಟ್ಟಣ ಯೋಜನಾ ಪ್ರಾಧಿಕಾರ (ಎರಡನೇ ತಿದ್ದುಪಡಿ) ನಿಯಮಗಳು  2021ನ್ನು  ಸೋಮವಾರ ಗೆಜಿಟ್ ನಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಯೋಜನೆ ಅನುಮೋದನೆ ಶುಲ್ಕ ಹೆಚ್ಚಳದಿಂದಾಗಿ ಮನೆಗಳ ನಿರ್ಮಾಣವನ್ನು ವಿಳಂಬಗೊಳಿಸಿದ ಆಸ್ತಿ ಮಾಲೀಕರಿಗೆ ಈ ಕ್ರಮವು ದೊಡ್ಡ ಪರಿಹಾರವಾಗಿದೆ. 

ಸೆಪ್ಟೆಂಬರ್ 14, 2020 ರಂದು, ಬಿಬಿಎಂಪಿ ಸುತ್ತೋಲೆ ಹೊರಡಿಸಿ, ಮನೆ ಕಟ್ಟಡ ಯೋಜನೆ ಅನುಮೋದನೆ ಶುಲ್ಕವನ್ನು ಶೇಕಡಾ 0.5 ಕ್ಕೆ ಏರಿಸಿತು ಮತ್ತು ಇತರ ವರ್ಗಗಳಿಗೂ ಹೆಚ್ಚಳವನ್ನು ಮಾಡಿತು. ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಮತ್ತು ಅದನ್ನು ಇಳಿಸುವಂತೆ ಒತ್ತಾಯ ಕೇಳಿಬಂದಿತ್ತು. 

ಮಾರ್ಚ್ 10, 2021ರಂದು ಹೊರಡಿಸಲಾದ ಈ ಹಿಂದಿನ ಆದೇಶದಲ್ಲಿ 30 ದಿನಗಳೊಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಇದರ ಅನ್ವಯ ದರಗಳನ್ನು ಪರಿಷ್ಕರಿಸಲಾಗಿತ್ತು. ಈ ಹಿಂದೆ ವಸತಿ ಕಟ್ಟಡಗಳಿಗೆ ಪ್ಲಾಟ್ ನ ಮಾರುಕಟ್ಟೆ ಮೌಲ್ಯದ ಶೇ.0.2 ರಷ್ಟು ಅಭಿವೃದ್ಧಿ ವೆಚ್ಚ ನಿಗದಿಪಡಿಸಲಾಗಿತ್ತು. ಈಗ ಅದನ್ನು ಕಟ್ಟಡ ಅನುಮೋದನೆ ಯೋಜನೆ ಶುಲ್ಕದ ಶೇಕಡಾ 10 ಕ್ಕೆ ಕಡಿತಗೊಳಿಸಲಾಗಿದೆ.

ಈ ಕ್ರಮ ಕಟ್ಟಡ ನಿರ್ಮಾಣವನ್ನು ಉತ್ತೇಜಿಸುತ್ತದೆ. ಯೋಜನೆ ಅನುಮೋದನೆ ವೆಚ್ಚಗಳು ಹೆಚ್ಚಿದ್ದರೆ, ಜನರು ಕೆಲಸ ಕೈಗೊಳ್ಳಲು  ಹಿಂಜರಿಯುತ್ತಾರೆ. ಹಲವರು ತಕ್ಷಣ ಕಟ್ಟಡ ಪ್ರಾರಂಭಿಸುವುದಿಲ್ಲ. ಹೆಚ್ಚಿನ ಶುಲ್ಕವು ಅನುಮೋದನೆ ಪಡೆಯದಂತೆ ಜನರನ್ನು ತಡೆಯುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಬಿಬಿಎಂಪಿ ಅದನ್ನು ಎಂದಿಗೂ ಹೆಚ್ಚಿಸಬಾರದು ಎಂದು ಕ್ರೆಡಾಯ್ ಮುಖ್ಯಸ್ಥ ಸುರೇಶ್ ಹರಿ ಹೇಳಿದ್ದಾರೆ. 

 ಕೋವಿಡ್ ಸಾಂಕ್ರಾಮಿಕ ನಂತರ ಕಟ್ಟಡ ನಿರ್ಮಾಣ ಚಟುವಟಿಕೆ ಮೇಲೆ ಹೊಡೆತ ಬಿದ್ದಿದೆ. ಸಣ್ಣ ಡವಲಪರ್ಸ್ ಮೇಲೂ ಪರಿಣಾಮ ಬೀರಿದೆ. ಕಚ್ಚಾ ಸರಕುಗಳ ಬೆಲೆಯೂ ಹೆಚ್ಚಾಗಿದೆ. ಸರ್ಕಾರ ಈ ಕ್ರಮದ ಮೂಲಕ ಇದೀಗ ಬೆಂಬಲ ನೀಡಿರುವುದು ಮಹತ್ವದ್ದಾಗಿದೆ ಎಂದು ಹರಿ ತಿಳಿಸಿದ್ದಾರೆ.                                                                                   
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT