ಆರೋಗ್ಯ ಸಿಬ್ಬಂದಿಯೊಬ್ಬರು ಲಸಿಕೆ ಹಾಕುತ್ತಿರುವ ಚಿತ್ರ 
ರಾಜ್ಯ

ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಶೇಕಡಾ 90 ರಷ್ಟು ಕೋವಿಡ್ ಲಸಿಕೆ ನೀಡಿಕೆ ಕಷ್ಟಸಾಧ್ಯ

ಅರ್ಹ ಜನಸಂಖ್ಯೆಯ ಶೇಕಡ 90 ರಷ್ಟು ಲಸಿಕೆ ಹಾಕುವ ತನ್ನ ನಿರೀಕ್ಷಿತ ಗುರಿ ತಲುಪಲು ರಾಜ್ಯ ಸರ್ಕಾರಕ್ಕೆ ಇನ್ನೂ ಕೇವಲ ಎರಡು ತಿಂಗಳು ಬಾಕಿಯಿದೆ. ಅಷ್ಟರೊಳಗೆ ಕೋವಿಡ್-19 ಎರಡು ಡೋಸ್ ಗಳೊಂದಿಗೆ ಕೇವಲ ಶೇ.82 ರಷ್ಟು ವಯಸ್ಕರಿಗೆ ಮಾತ್ರ ಲಸಿಕೆ ಹಾಕಬಹುದೆಂದು ಸ್ವತಂತ್ರ ಸಾರ್ವಜನಿಕ ಆರೋಗ್ಯ ನೀತಿ ವಿಶ್ಲೇಷಕ ಡಾ. ಚಂದ್ರಕಾಂತ್ ಲಹರಿಯಾ ಅಭಿಪ್ರಾಯಪಟ್ಟಿದ್ದಾರೆ. 

ಬೆಂಗಳೂರು: ಅರ್ಹ ಜನಸಂಖ್ಯೆಯ ಶೇಕಡ 90 ರಷ್ಟು ಲಸಿಕೆ ಹಾಕುವ ತನ್ನ ನಿರೀಕ್ಷಿತ ಗುರಿ ತಲುಪಲು ರಾಜ್ಯ ಸರ್ಕಾರಕ್ಕೆ ಇನ್ನೂ ಕೇವಲ ಎರಡು ತಿಂಗಳು ಬಾಕಿಯಿದೆ. ಅಷ್ಟರೊಳಗೆ ಕೋವಿಡ್-19 ಎರಡು ಡೋಸ್ ಗಳೊಂದಿಗೆ ಕೇವಲ ಶೇ.82 ರಷ್ಟು ವಯಸ್ಕರಿಗೆ ಮಾತ್ರ ಲಸಿಕೆ ಹಾಕಬಹುದೆಂದು ಸ್ವತಂತ್ರ ಸಾರ್ವಜನಿಕ ಆರೋಗ್ಯ ನೀತಿ ವಿಶ್ಲೇಷಕ ಡಾ. ಚಂದ್ರಕಾಂತ್ ಲಹರಿಯಾ ಅಭಿಪ್ರಾಯಪಟ್ಟಿದ್ದಾರೆ. 

ಲಸಿಕೆ ನೀಡಿಕೆ ಕುರಿತ ಲಭ್ಯವಿರುವ ರಾಜ್ಯದ ಮಾಹಿತಿಯನ್ನು ವಿಶ್ಲೇಷಿಸಿದ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಡಾ. ಲಹರಿಯಾ, ಶೇ. 90 ರಷ್ಟು ಗುರಿ ಸಾಧನೆಗೆ ಪರ್ಯಾಯ ಮಾರ್ಗವಿಲ್ಲ, ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಶೇ. 82 ರಷ್ಟು ವಯಸ್ಕರಿಗೆ ಮಾತ್ರ ಎರಡು ಡೋಸ್ ಪಡೆದುಕೊಳ್ಳಬಹುದು ಎಂದು ಹೇಳಿದರು.

ರಾಜ್ಯದಾದ್ಯಂತ ಶೇ. 51 ರಷ್ಟು ವಯಸ್ಕರು ಎರಡು ಡೋಸ್ ಲಸಿಕೆ ಪಡೆದಿದ್ದರೆ, ಶೇ. 88 ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಆದಾಗ್ಯೂ, ಮನೆ ಮನೆಗೆ ಲಸಿಕೆಯಂತಹ ಕಾರ್ಯಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಈಗಲೂ ಲಸಿಕೆ ನೀಡುವಿಕೆ ಸವಾಲಿನ ಕಾರ್ಯವಾಗಿದೆ. 

ಮನೆ ಮನೆಗೆ ಲಸಿಕೆ ಆಂದೋಲನ ಇನ್ನೂ ಆರಂಭಿಕ ಹಂತದಲ್ಲಿದೆ. ಆದರೆ, ಕೆಲ ಜಿಲ್ಲೆಗಳಲ್ಲಿ ಸ್ವಯಂ ಸೇವಕರು ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಜನರು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವುದಾಗಿ ಹೇಳುತ್ತಾರೆ. ಆದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುತ್ತಿಲ್ಲ. ಮೊದಲ ಡೋಸ್ ತೆಗೆದುಕೊಳ್ಳಲು ಅವರು ಮತ್ತೊಂದು ಫೋನ್ ಬಳಕೆ ಇದಕ್ಕೆ ಕಾರಣವಾಗುತ್ತಿದೆ. ಎನ್ ಜಿ ಒ, ಆಶಾ ಕಾರ್ಯಕರ್ತರೊಂದಿಗೆ ಸೇರಿ ಈ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ರಾಜ್ಯ ನಿರ್ದೇಶಕರಾದ ಡಾ. ಅರುಂದತಿ ಚಂದ್ರಶೇಖರ್ ಹೇಳಿದ್ದಾರೆ. 

ರಾಜ್ಯದಲ್ಲಿ ಸುಮಾರು 13 ಜಿಲ್ಲೆಗಳು ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ಹಿಂದೆ ಬಿದ್ದಿವೆ. ಕಲಬುರಗಿ, ಹಾವೇರಿ, ಮತ್ತು ರಾಯಚೂರಿನಲ್ಲಿ ಎರಡು ಡೋಸ್ ನೊಂದಿಗೆ ಕೇವಲ ಶೇ. 39 ರಷ್ಟು ಲಸಿಕೆ ಕಾರ್ಯ ನಡೆದಿದ್ದರೆ, ಶೇ.74 ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ.  ದಾವಣಗೆರೆ, ಧಾರವಾಡ, ಚಾಮರಾಜನಗರ, ಯಾದಗಿರಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಎರಡನೇ ಡೋಸ್ ಪಡೆದವರ ಸಂಖ್ಯೆ ಶೇ 42 ರಿಂದ 49 ರಷ್ಟಿದೆ.

ಮನೆ ಮನೆಗೆ ಲಸಿಕೆ ನೀಡಿಕೆ ಕಾರ್ಯದೊಂದಿಗೆ ನಿಗದಿತ ಗುರಿಯನ್ನು ಸಾಧಿಸುವ ವಿಶ್ವಾಸವಿದೆ. ಜನರು ಎರಡನೇ ಡೋಸ್ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದು ಡಾ. ಅರುಂದತಿ ವಿವರಿಸಿದ್ದಾರೆ. ಆದಾಗ್ಯೂ, ಡಿಸೆಂಬರ್ ಅಂತ್ಯದೊಳಗೆ ಶೇ 75 ರಿಂದ 80 ರಷ್ಟು ಎರಡನೇ ಡೋಸ್ ಗುರಿ ಸಾಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT