ಸಾಂದರ್ಭಿಕ ಚಿತ್ರ 
ರಾಜ್ಯ

'ಸರ್ಕಾರ ನಿಗದಿಪಡಿಸಿದ ವೇತನವನ್ನು ನಮಗೆ ನೀಡುತ್ತಿಲ್ಲ, ದಿನಕ್ಕೆ 100 ರೂ. ಕೊಡುತ್ತಿದ್ದಾರೆ': ಬೆಳಗಾವಿಯ ನರೇಗಾ ಕಾರ್ಮಿಕರ ಅಳಲು

ಬೆಳಗಾವಿಯ ಕಡೋಲಿ ಗ್ರಾಮದ ಹತ್ತಿರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಡಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಕ್ಕೆ ಕೇವಲ 100 ರೂಪಾಯಿ ವೇತನ ನೀಡಲಾಗುತ್ತಿದೆ.

ಬೆಳಗಾವಿ: ಬೆಳಗಾವಿಯ ಕಡೋಲಿ ಗ್ರಾಮದ ಹತ್ತಿರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಕ್ಕೆ ಕೇವಲ 100 ರೂಪಾಯಿ ವೇತನ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ದಿನಕ್ಕೆ 289 ರೂಪಾಯಿ ವೇತನವನ್ನು ಸರ್ಕಾರ ನಿಗದಿ ಮಾಡಿದೆಯಾದರೂ ಅಷ್ಟೊಂದು ಸಿಗುತ್ತಿಲ್ಲ, ಈ ಬಗ್ಗೆ ಪಂಚಾಯತ್ ಅಧಿಕಾರಿಗಳನ್ನು ಕೇಳಿದರೆ ಪ್ರತಿಯೊಬ್ಬ ಕೆಲಸಗಾರರ ಕೆಲಸಕ್ಕೆ ಸರಿಯಾಗಿ ವೇತನ ನಿಗದಿ ಮಾಡಲಾಗಿದೆ ಎನ್ನುತ್ತಾರೆ, ಆದರೆ ಗ್ರಾಮಸ್ಥರು ತಮಗೆ ಕಡಿಮೆ ವೇತನ ಸಿಗುತ್ತಿದೆ ಎನ್ನುತ್ತಾರೆ.

ನಿನ್ನೆ ಅವರು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಡೋಲಿ ಗ್ರಾಮ ಪಂಚಾಯತ್‌ನಲ್ಲಿ, 2,000 ಕ್ಕೂ ಹೆಚ್ಚು ಸಕ್ರಿಯ ಕಾರ್ಮಿಕರು ನರೇಗಾ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಕೆರೆ ಅಭಿವೃದ್ಧಿ, ಕಾಲುವೆಗಳು, ನದಿಗಳು ಮತ್ತು ಸರೋವರಗಳ ನಿರ್ಜಲೀಕರಣ, ಸ್ವಚ್ಛಗೊಳಿಸುವಿಕೆ ಮತ್ತು ಹೊಸ ಕಂದಕಗಳನ್ನು ರಚಿಸುವುದು, ಅರಣ್ಯ ಪ್ರದೇಶಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸುವ ಕೆಲಸ ಮಾಡುತ್ತಾರೆ.

 ಕಡೋಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಲ್ಪ ಸಮಯದವರೆಗೆ ಯಾವುದೇ ಉದ್ಯೋಗಗಳು ಇರಲಿಲ್ಲ, ಈ ಕಾರ್ಮಿಕರು ಉದ್ಯೋಗಗಳಿಗಾಗಿ 20 ಕಿಮೀ ದೂರ ಹೋಗಬೇಕಾಗಿತ್ತು. ಕಾರ್ಮಿಕರಿಗೆ ದಿನನಿತ್ಯದ ವೇತನವಾಗಿ 275 ರೂಪಾಯಿ,  ಉದ್ಯೋಗ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ 100 ದಿನಗಳ ಕೆಲಸ ನೀಡಲಾಗುತ್ತದೆ. ಆದರೆ, ಕೆಲವು ಪಂಚಾಯಿತಿ ಅಧಿಕಾರಿಗಳು ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವೇತನವನ್ನು ಕಡಿತಗೊಳಿಸುತ್ತಿದ್ದಾರೆ.

ಕಾರ್ಮಿಕರ ಪ್ರಕಾರ, ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದರೂ ಅವರಲ್ಲಿ ಹಲವರಿಗೆ ದಿನಕ್ಕೆ 100 ರೂಪಾಯಿ ವೇತನ ನೀಡಲಾಗಿದೆ. ತಮಗೆ ನೀಡಲಾಗುತ್ತಿರುವ ವೇತನ ಸಾಲುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.

ಪಂಚಾಯತ್ ಅಧಿಕಾರಿಗಳು ಮತ್ತು ಕೆಲಸದ ಮೇಲ್ವಿಚಾರಣೆ ಮಾಡಿದ ಎಂಜಿನಿಯರ್ ಕಡಿಮೆ ವೇತನ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು, ಕಾರ್ಮಿಕರು ಕೆಲಸದ ಪ್ರಮಾಣವನ್ನು ಪೂರ್ಣಗೊಳಿಸಿಲ್ಲ. ಆದರೆ, ಕೆಲಸಗಳು ನಡೆಯುತ್ತಿರುವಾಗ ಎಂಜಿನಿಯರ್ ಮತ್ತು ಪಂಚಾಯತ್ ಅಧಿಕಾರಿಗಳು ಕೆಲಸದ ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ಕಾರ್ಮಿಕರು ಆರೋಪಿಸುತ್ತಾರೆ.

ನಾವು ಯಾವುದೇ ಕೆಲಸವನ್ನು ಮಧ್ಯದಲ್ಲಿ ಬಿಡಲಿಲ್ಲ. ನಮಗೆ ವಹಿಸಿದ ಕೆಲಸ ಪೂರ್ಣಗೊಳಿಸಿದ್ದೇವೆ. ಈ ಬಾರಿ ಯಾವುದೇ ಕಾರಣವಿಲ್ಲದೆ ಅಧಿಕಾರಿಗಳು ನಮ್ಮ ವೇತನವನ್ನು ಕಡಿತಗೊಳಿಸಿದ್ದಾರೆ. ತನ್ನ ತಪ್ಪಿನ ಅರಿವಾದ ನಂತರ, ಇಂಜಿನಿಯರ್ ಈಗ ನಮಗೆ ಸಂಪೂರ್ಣ ವೇತನದ ಭರವಸೆ ನೀಡಿದ್ದಾರೆ. ನಮ್ಮ ವೇತನವನ್ನು ತೆರವುಗೊಳಿಸುವ ಮೊದಲು ಮಾಡಿದ ಕೆಲಸಗಳನ್ನು ಪರಿಶೀಲಿಸುವುದಾಗಿ ಪಂಚಾಯತ್ ಅಧಿಕಾರಿಗಳು ಹೇಳುತ್ತಾರೆ ಎಂದು ಕಾರ್ಮಿಕರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ಕೇಳೋಣವೆಂದು ಹಲವಾರು ಬಾರಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ದರ್ಶನ್ ಎಚ್ ವಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಸಿಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಿಮ್ಮ ಮೇಲೆ ನಮಗೆ ನಂಬಿಕೆ ಇದೆ, ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ: CJP ಪ್ರತಿಭಟನೆ ನಂತರ ಮೊದಲ ಬಾರಿ Gen Z ಉದ್ದೇಶಿಸಿ ಮೋದಿ ಭಾಷಣ

ಭಾರತೀಯ ಅಭಿಮಾನಿಗಳಿಗೆ ಶಾಕ್: ಭಾರತಕ್ಕೂ ಮೊದಲು ವಿದೇಶದಲ್ಲಿ Ramayana ಚಿತ್ರ ಬಿಡುಗಡೆ; ಕಾರಣ ಬಿಚ್ಚಿಟ್ಟ ನಿರ್ಮಾಪಕ!

'ಜೆಡಿಎಸ್ ಪಾದಯಾತ್ರೆ ಅಲ್ಲ, ಕುಮಾರಸ್ವಾಮಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಯಾತ್ರೆ: ಸಚಿವ ಬಾಲಕೃಷ್ಣ ತಿರುಗೇಟು

ಶ್ರೀಲಂಕಾ ಪ್ರವಾಸ: ಜೈಸ್ವಾಲ್ ಡಕೌಟ್, ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕನ್ನಡಿಗ ದೇವದತ್ ಪಡಿಕ್ಕಲ್

ಮೈಸೂರು: ʻಡಾಲಿʼ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಶರಣು; ಡೆತ್‌ನೋಟ್‌ ಪತ್ತೆ!