ಬಿಡಿಎ ಕೆಂಪೇಗೌಡ ಲೇಔಟ್ 
ರಾಜ್ಯ

ದಂಡ ಮನ್ನ ಮಾಡಿ: ಬಿಡಿಎಗೆ ನಾಡಪ್ರಭು ಕೆಂಪೇಗೌಡ ಲೇಔಟ್ ಸೈಟ್ ಮಾಲೀಕರ ಮನವಿ

ಖರೀದಿ ಮಾಡಿದ ಸೈಟಿನಲ್ಲಿ ಮನೆ ಕಟ್ಟದ ಮಾಲೀಕರಿಗೆ ದಂಡ ಹಾಕುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ದಂಡ ಮನ್ನ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

ಬೆಂಗಳೂರು: ಖರೀದಿ ಮಾಡಿದ ಸೈಟಿನಲ್ಲಿ ಮನೆ ಕಟ್ಟದ ಮಾಲೀಕರಿಗೆ ದಂಡ ಹಾಕುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ದಂಡ ಮನ್ನ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

ಹೌದು.. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನ ಹಂಚಿಕೆದಾರರು ನಾಡಪ್ರಭು ಕೆಂಪೇಗೌಡ ಲೇಔಟ್ (NPKL), ತಮ್ಮ ಮನೆಗಳ ನಿರ್ಮಾಣವನ್ನು ಇನ್ನೂ ಆರಂಭಿಸಿದೇ ಇರುವುದು ಮಾಲೀಕರಿಗೆ ಸಮಸ್ಯೆ ಎದುರಿಸುವಂತೆ ಮಾಡಿದೆ. ಬಿಡಿಎ ಇದೀಗ ಸೈಟ್ ಖರೀದಿಸಿ ಇನ್ನೂ ಮನೆಕಟ್ಟದ ಮಾಲೀಕರಿಗೆ ದಂಡವಿಧಿಸುವಂತೆ ಸೂಚಿಸಿದೆ.

ಈ ಹಿಂದಿನ ಬಿಡಿಎ ಆದೇಶದ ಅನ್ವಯ 2 ವರ್ಷಗಳಿಂದ ಮನೆಕಟ್ಟಲು ಮುಂದಾಗದ ಮಾಲೀಕರಿಗೆ ದಂಡದ ಮೊತ್ತ ಮತ್ತು ಹೆಚ್ಚಿನ ಬಡ್ಡಿ ದರ ಮಾತ್ರವಲ್ಲದೇ ಸೈಟ್ ಗಳ ಮೇಲಿನ ಗೃಹ ಸಾಲವನ್ನು ವಾಣಿಜ್ಯ ಸಾಲವಾಗಿ ಪರಿವರ್ತಿಸುವ ಕುರಿತ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಸೈಟ್ ಗಳ ಮೇಲಿನ ಸಾಲವನ್ನು ಗೃಹ ಸಾಲದ ಬದಲಾಗಿ ವಾಣಿಜ್ಯ ಸಾಲವಾಗಿ ಪರಿವರ್ತಿಸಿದರೆ ಸೈಟ್ ಮಾಲೀಕರಿಗೆ ಆರ್ಥಿಕ ಹೊರೆಯನ್ನು ತಂದೊಡ್ಡಲಿದೆ ಎಂಬ ಭೀತಿ ಕಾಡುತ್ತಿದೆ.

ಇದರ ನಡುವೆಯೇ ತಾವು ಖರೀದಿಸಿದ ಬಿಡಿಎ ಸೈಟ್ ಗಳ ಬಡಾವಣೆಯಲ್ಲಿ ನಾಗರಿಕ ಮೂಲಸೌಕರ್ಯಗಳ ಅನುಪಸ್ಥಿತಿಯಲ್ಲಿ, ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹಂಚಿಕೆದಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.  ಹಂಚಿಕೆಯ ನಂತರ ಐದು ವರ್ಷಗಳ ಕಾಲ ಸೈಟ್ ಖಾಲಿ ಇರುವಂತೆ ನೋಡಿಕೊಳ್ಳುವುದು ಸೈಟ್ ಗಾತ್ರವನ್ನು ಅವಲಂಬಿಸಿ ಪ್ರಾಧಿಕಾರ 5,000 ರಿಂದ 6 ಲಕ್ಷದವರೆಗೆ ದಂಡದ ಮೊತ್ತವನ್ನು ಕೇಳಿದೆ. 5,000 ಸೈಟ್‌ಗಳ ಮೊದಲ ಬ್ಯಾಚ್ ಅನ್ನು 2016 ರ ಡಿಸೆಂಬರ್‌ನಲ್ಲಿ ಹಂಚಿಕೆ ಮಾಡಲಾಗಿದ್ದರೆ, ಇನ್ನೊಂದು 5,000 ಸೈಟ್‌ಗಳನ್ನು ಮಾರ್ಚ್ 2018 ರಲ್ಲಿ ಹಂಚಿಕೆ ಮಾಡಲಾಗಿದೆ.

ಮಾಲಿನಿ ವಿ ಎಸ್ ಎಂಬುವವರು ಮೂರು ವರ್ಷಗಳ ಹಿಂದೆ ಕೋಮಘಟ್ಟದಲ್ಲಿ ತನ್ನ 30x40 ಚದರ ಅಡಿ ಸೈಟ್ ಅನ್ನು 24 ಲಕ್ಷಕ್ಕೆ ಖರೀದಿಸಿದರು.  ಈ ವಿಚಾರವಾಗಿ ಮಾತನಾಡಿದ ಅವರು, 'ನನ್ನ ಬ್ಯಾಂಕ್‌ನಿಂದ ಪತ್ರವೊಂದನ್ನು ಸ್ವೀಕರಿಸಿದ್ದೇನೆ, ನಾನು ಡಿಸೆಂಬರ್ 2021 ರೊಳಗೆ ನಿರ್ಮಾಣ ಕಾರ್ಯವನ್ನು ಆರಂಭಿಸದಿದ್ದರೆ, ನನಗೆ ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುವುದು ಎಂದು ಹೇಳಲಾಗಿದೆ. ಪ್ರಸ್ತುತ, ನಾನು ನನ್ನ ಗೃಹ ಸಾಲದ ಮೇಲೆ 10.5% ಬಡ್ಡಿಯನ್ನು ಪಾವತಿಸುತ್ತೇನೆ. ವಸ್ತುಗಳನ್ನು ತರಲು ಮತ್ತು ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಯಾವುದೇ ರಸ್ತೆಗಳಿಲ್ಲ. ವಿದ್ಯುತ್ ಅಥವಾ ನೀರು ಪೂರೈಕೆ ಇಲ್ಲ. ನಾನು ನನ್ನ ಮನೆಯನ್ನು ಕಟ್ಟಲು ಮುಂದಾದರೆ, ನಾನು ಅಲ್ಲಿ ವಾಸಿಸಲು ಸಾಧ್ಯವಿಲ್ಲ ಮತ್ತು ನಾನು ಅದನ್ನು ಬಾಡಿಗೆಗೆ ನೀಡಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

"ಭೀಮನಕುಪ್ಪೆ ಪ್ರದೇಶದಲ್ಲಿ ನಿವೇಶನ ಖರೀದಿಸಿದ ಶಾಮ್ ಜುಜಾರೆ ಎಸ್ ಅವರು ತಮ್ಮ ಸಮಸ್ಯೆ ಹಂಚಿಕೊಂಡಿದ್ದು, 'ಬಿಡಿಎ ನಿವೇಶನಗಳನ್ನು ಖಾಲಿ ಇರಿಸಲು ವಿಧಿಸುವ ದಂಡವು ಚಿಂತಾಜನಕವಾಗಿದೆ. ಕೆಜಿ ಲೇಔಟ್‌ನಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ನಾವು ನಿರ್ಮಾಣವನ್ನು ಮುಂದುವರಿಸಲು ಸಾಧ್ಯವಾಗದ ಕಾರಣ ಇದು ದಂಡವನ್ನು ವಿಧಿಸಬಾರದು ಎಂದು ಹೇಳಿದ್ದಾರೆ.

ಬಿಡಿಎ ಆಯುಕ್ತ ರಾಜೇಶ್ ಗೌಡ ಅವರು ಹೇಳಿದ್ದು, ಬಿಡಿಎ ಬಡಾವಣೆಯಲ್ಲಿನ ಎಲ್ಲಾ ಮೂಲಸೌಕರ್ಯ ಕೆಲಸಗಳನ್ನು ತ್ವರಿತಗೊಳಿಸಲು ತನ್ನ ಅತ್ಯುತ್ತಮ ಕೆಲಸ ಮಾಡುತ್ತಿದೆ. ಎಸ್‌ಪಿಎಂಎಲ್ ಮತ್ತು ಎಲ್ ಅಂಡ್ ಟಿ ಎಂಬ ಎರಡು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಕೋವಿಡ್ -19 ನಿಂದಾಗಿ ಇದು ವಿಶ್ವದಾದ್ಯಂತ ಚಟುವಟಿಕೆಗಳನ್ನು ನಿಧಾನಗೊಳಿಸಿದೆ. ಅವರು ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಖಾಲಿ ನಿವೇಶನಗಳಲ್ಲಿ ವಿಧಿಸಲಾದ ದಂಡದ ಮೊತ್ತವನ್ನು ಮಂಜೂರು ಮಾಡುವವರು ನಿರ್ಮಾಣವನ್ನು ಮುಂದುವರಿಸಲು ಮತ್ತು ಅದನ್ನು ಖಾಲಿ ಬಿಡದಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT