ಸಾಂದರ್ಭಿಕ ಚಿತ್ರ 
ರಾಜ್ಯ

ಇಳಕಲ್ ನಲ್ಲಿ ಕೋಮು ಸಂಘರ್ಷ: 8 ಮಂದಿ ಬಂಧನ

ಖಾಸಗಿ ಟ್ಯೂಷನ್ ಒಂದರಲ್ಲಿ ಸೋಮವಾರ ಸಂಜೆ ತಲೆಗೆ ಟೋಪಿ ಧರಿಸಿದ್ದ ಸ್ನೇಹಿತನನ್ನು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕನೊಬ್ಬ ಲೇವಡಿ ಮಾಡಿದ ನಂತರ ಇಳಕಲ್ ನಲ್ಲಿ ಎರಡು ಧಾರ್ಮಿಕ ಗುಂಪುಗಳ ಸದಸ್ಯರ ನಡುವೆ ಸಂಘರ್ಷವೇರ್ಪಟ್ಟಿತ್ತು.

ಬಾಗಲಕೋಟೆ: ಖಾಸಗಿ ಟ್ಯೂಷನ್ ಒಂದರಲ್ಲಿ ಸೋಮವಾರ ಸಂಜೆ ತಲೆಗೆ ಟೋಪಿ ಧರಿಸಿದ್ದ ಸ್ನೇಹಿತನನ್ನು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕನೊಬ್ಬ ಲೇವಡಿ ಮಾಡಿದ ನಂತರ ಇಳಕಲ್ ನಲ್ಲಿ ಎರಡು ಧಾರ್ಮಿಕ ಗುಂಪುಗಳ ಸದಸ್ಯರ ನಡುವೆ ಸಂಘರ್ಷವೇರ್ಪಟ್ಟಿತ್ತು.

ಖಾಸಗಿ ಟ್ಯುಟೋರಿಯಲ್ ವೊಂದರಲ್ಲಿ ತರಗತಿಗೆ ಹಾಜರಾಗಿದ್ದ ಬಾಲಕನೊಬ್ಬ, ತಲೆಗೆ ಟೋಪಿಗೆ ಧರಿಸಿದ್ದ ಮತ್ತೊಬ್ಬ ಸ್ನೇಹಿತನನ್ನು ರೇಗಿಸಿದ್ದಾನೆ. ಇದರಿಂದ ಬೇಸರಗೊಂಡ ಬಾಲಕ ಪಿಎಫ್ ಐ ಸದಸ್ಯರಾಗಿದ್ದ ತನ್ನ ಪೋಷಕರಿಗೆ ದೂರು ನೀಡಿದ್ದಾನೆ. ತದನಂತರ ಅವರು ಮತ್ತೋರ್ವ ಬಾಲಕನನ್ನು ಭೇಟಿಯಾಗಿದ್ದು, ಕಪಾಳ ಮೋಕ್ಷ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಪಾಳ ಮೋಕ್ಷ ವಿಚಾರವನ್ನು ಬಾಲಕ ಹಿಂದೂ ಸಂಘಟನೆ ಸದಸ್ಯರಾಗಿದ್ದ ತನ್ನ ಸ್ನೇಹಿತರಿಗೆ ತಿಳಿಸಿದಾಗ, ಅವರು ಬಂದು, ಮುಸ್ಲಿಂ ಹುಡುಗ ಹಾಗೂ ಆತನ ಸ್ನೇಹಿತರಿಗೆ ಹೊಡೆದಿದ್ದಾರೆ. ಪಿಎಪ್ ಐ ಸದಸ್ಯರು 15 ವರ್ಷದ ಬಾಲಕನ ಸ್ನೇಹಿತ ಮೇಲೆ ಮತ್ತೆ ದಾಳಿ ನಡೆಸಿದಾಗ ಎರಡು ಗುಂಪಿನ ನಡುವೆ ಸಂಘರ್ಷ ವೇರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ. 

ಉಭಯ ಗುಂಪಿನ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದೂರು ಇಳಕಲ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.  ಕ್ಷುಲಕ ಕಾರಣಕ್ಕೆ ಎರಡು ಬಾಲಕರ ನಡುವೆ ನಡೆದ ಸಂಘರ್ಷವನ್ನು ಉಭಯ ಗುಂಪುಗಳು ದುರುಪಯೋಗಪಿಡಿಸಿದ್ದಾರೆ. ಎರಡು ಕಡೆಯಿಂದ ಎರಡು ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ಎಸ್ ಪಿ ಜಗಳಸರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT