ವಿದ್ಯಾರ್ಥಿಗಳ ಚಿತ್ರ 
ರಾಜ್ಯ

ರಾಜ್ಯದಲ್ಲಿ ಶಾಲೆಗಳ ಪುನರಾರಂಭದೊಂದಿಗೆ ಕೋವಿಡ್ ಸುರಕ್ಷತೆ, ಅರಿವು ಮೂಡಿಸಲು ಶಾಲೆಗಳಿಗೆ ಸರ್ಕಾರದ ಸೂಚನೆ

ಕೋವಿಡ್-19 ಶಿಷ್ಟಾಚಾರದ ಬಗ್ಗೆ ಅರಿವು ಮೂಡಿಸಲು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 268. 21 ಲಕ್ಷ ರೂ.ಗಳನ್ನು ಪ್ರಾಥಮಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 

ಬೆಂಗಳೂರು: ಕೋವಿಡ್-19 ಶಿಷ್ಟಾಚಾರದ ಬಗ್ಗೆ ಅರಿವು ಮೂಡಿಸಲು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 268. 21 ಲಕ್ಷ ರೂ.ಗಳನ್ನು ಪ್ರಾಥಮಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 

ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ವಿದ್ಯಾರ್ಥಿಗಳಿಗೆ ನೆನಪಿಸಲು 'ಕೋವಿಡ್ -19 ಬಗ್ಗೆ ಜಾಗೃತರಾಗಿರಿ,' 'ಭಯಪಡಬೇಡಿ, ನಿಮ್ಮನ್ನು ರಕ್ಷಿಸಿಕೊಳ್ಳಿ' ಮತ್ತು 'ವೈರಸ್‌ನಿಂದ ಸುರಕ್ಷಿತವಾಗಿರಿ' ಮುಂತಾದ ಪೋಸ್ಟರ್‌ಗಳನ್ನು ರಚಿಸಲು ಶಾಲೆಗಳಿಗೆ ಸೂಚಿಸಲಾಗಿದೆ.  ಕೋವಿಡ್ -19  ಪ್ರಬಂಧ ಸ್ಪರ್ಧೆ, ಕಲಾ ಸ್ಪರ್ಧೆಯ ಪ್ರಮುಖ ವಿಷಯವಾಗಲಿದೆ.

ಆದಾಗ್ಯೂ, ಇದು 21,573 ಉನ್ನತ ಪ್ರಾಥಮಿಕ ಶಾಲೆಗಳು ಮತ್ತು 5,248 ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಸುರಕ್ಷಿತ ವಾತಾವರಣ ಸೃಷ್ಟಿಸಲು ಯೋಜಿತ ವೆಚ್ಚದ ಕೇವಲ 50 ಪ್ರತಿಶತವಾಗಿದೆ.

ಈ ಮಧ್ಯೆ 42,973 ಪ್ರಾಥಮಿಕ ಶಾಲೆಗಳು ಹಾಗೂ 5,279 ಪ್ರೌಢ ಶಾಲೆಗಳಲ್ಲಿ  ಸುರಕ್ಷತೆ ಮತ್ತು ಆತ್ಮವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲು ಕ್ರಮವಾಗಿ  895.46 ಲಕ್ಷ ರೂ. ಹಾಗೂ 105. 58 ಲಕ್ಷ  ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.

ಆತ್ಮವಿಶ್ವಾಸ ಮೂಡಿಸುವ ಈ ಕ್ರಮಗಳ ಜೊತೆಗೆ ಶಿಕ್ಷಕರು, ಸಿಬ್ಬಂದಿ ಮತ್ತು ಮುಖ್ಯ ಶಿಕ್ಷಕರು ಎಲ್ಲಾ ವೇಳೆಯಲ್ಲೂ ಮಾಸ್ಕ್ ಧರಿಸುವಂತೆ ಹಾಗೂ ಎಲ್ಲಾ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವಂತೆ, ಆರೋಗ್ಯ ಇಲಾಖೆಯ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳು, ಮೇಳಗಳು ಹಾಗೂ ಮಾರ್ಕೆಟ್ ಗಳಿಗೆ ಹೋಗುವುದನ್ನು ತಡೆಯುವಂತೆ, ಪ್ರತಿ ದಿನ ಮಾಸ್ಕ್ ಬದಲಾಯಿಸುವಂತೆ ವಿದ್ಯಾರ್ಥಿಗಳಿಗೂ ಸಲಹೆ ನೀಡಲಾಗಿದೆ. 

ವಿದ್ಯಾರ್ಥಿಗಳ ಪ್ರಯಾಣದ ಬಗ್ಗೆ ಗಮನ ಹರಿಸುವಂತೆ, ಭೌತಿಕ ದೂರ ಕಾಪಾಡಿಕೊಳ್ಳುವಂತೆ, ಬೋಜನ ವಿರಾಮದ ವೇಳೆಯಲ್ಲಿ ಗುಂಪು ಸೇರದಂತೆ., ಊಟಕ್ಕೆ ಮೊದಲು ಹಾಗೂ ನಂತರ ಕೈ ತೊಳೆದುಕೊಳ್ಳುವಂತೆ, ಹೊರಗಡೆ ಊಟ ತಿನ್ನದಂತೆ  ಶಾಲೆಗಳಲ್ಲಿ  ಆರೋಗ್ಯ ಶಿಬಿರ ಆಯೋಜಿಸುವಂತೆಯೂ ಶಾಲಾ ಆಡಳಿತ ಮಂಡಳಿಗೆ ತಿಳಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT