ರಾಜ್ಯ

ಬೆಂಗಳೂರು: ತಡವಾಗಿ ವಿಮಾನ ನಿಲ್ದಾಣ ತಲುಪಿದ ಇಬ್ಬರು ಇಂಡಿಗೋ ಪೈಲಟ್‌ಗಳು; ಕಾದು ಸುಸ್ತಾದ ಪ್ರಯಾಣಿಕರು

Lingaraj Badiger

ಬೆಂಗಳೂರು: ಎರಡು ದೇಶಿ ಇಂಡಿಗೋ ವಿಮಾನಗಳ ಕ್ಯಾಪ್ಟನ್‌ಗಳು ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಕೆಐಎ) ತಡವಾಗಿ ತಲುಪಿದ್ದು, ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದರು.

ಪ್ರಯಾಣಿಕರ ಪ್ರಕಾರ, ಇಂಡಿಗೋ ತನ್ನ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್‌ ನಿಂದಾಗಿ ಪೈಲಟ್ ಗಳು ಕರ್ತವ್ಯಕ್ಕೆ ತಡವಾಗಿ ವರದಿ ಮಾಡಿಕೊಂಡಿದ್ದಾರೆ ಎಂದು ಆನ್-ಬೋರ್ಡ್ ಪ್ರಕಟಣೆಗಳನ್ನು ಮಾಡಿತು ಮತ್ತು ಅವರೆಲ್ಲರೂ ನಂಬಿದ್ದಾರೆಂದು ತೋರುತ್ತದೆ.

ಆದರೆ ಶುಕ್ರವಾರ ನಗರದಲ್ಲಿ ಯಾವುದೇ ಪ್ರಮುಖ ಟ್ರಾಫಿಕ್ ಸಮಸ್ಯೆಗಳು ಇರಲಿಲ್ಲ ಎಂದು ಉನ್ನತ ಟ್ರಾಫಿಕ್ ಅಧಿಕಾರಿಗಳು ಹೇಳಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ.

ಬೆಂಗಳೂರಿನಿಂದ ದೆಹಲಿಗೆ ಇಂಡಿಗೋ ವಿಮಾನ ನಿಗದಿತ ಸಮಯಕ್ಕಿಂತ 81 ನಿಮಿಷಗಳ ವಿಳಂಬವಾಗಿ ತೆರಳಿದ್ದು, ಅದರಲ್ಲಿದ್ದ ಸುಮಾರು 180 ಪ್ರಯಾಣಿಕರು ಪೈಲಟ್ ಗಾಗಿ ಕಾಯುತ್ತದ್ದರು. ವಿಮಾನ ಸಂಖ್ಯೆ. 6E 869 KIA ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು 2. 50 ಗಂಟೆಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬೇಕಾಗಿತ್ತು. ಬದಲಿಗೆ ಮಧ್ಯಾಹ್ನ 1.21ಕ್ಕೆ ಹೊರಟು 77 ನಿಮಿಷ ತಡವಾಗಿ ಸಂಜೆ 4.07ಕ್ಕೆ ದೆಹಲಿ ತಲುಪಿದೆ.

ಇನ್ನು ವಿಳಂಬದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಇಂಡಿಗೋ, "ನಾವು ಸಮಯಕ್ಕೆ ಸರಿಯಾಗಿ ಹಾರಲು ಪ್ರಯತ್ನಿಸುತ್ತೇವೆ, ಆದಾಗ್ಯೂ, ಕೆಲವೊಮ್ಮೆ ನಮ್ಮ ಕಾರ್ಯಾಚರಣೆಯ ಅಂಶಗಳ ಅನಿಶ್ಚಿತ ಸ್ವಭಾವದಿಂದಾಗಿ, ವಿಮಾನದ ವೇಳಾಪಟ್ಟಿ ಬದಲಾವಣೆ ಅನಿವಾರ್ಯವಾಗುತ್ತವೆ. ನಿಮ್ಮ ಗಮ್ಯಸ್ಥಾನವನ್ನು ಆದಷ್ಟು ಬೇಗ ತಲುಪಲು ನಮ್ಮ ತಂಡವು ಪ್ರಯತ್ನಿಸುತ್ತಿದೆ" ಎಂದು ಟ್ವೀಟ್ ಮಾಡಿದೆ.

ಟ್ರಾಫಿಕ್ ಜಾಮ್‌ ಆರೋಪವನ್ನು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ ಎ ಸಲೀಂ ಸ್ಪಷ್ಟವಾಗಿ ತಳ್ಳಿಹಾಕಿದ್ದು, "ಇಂದು ಎಲ್ಲಿಯೂ ಯಾವುದೇ ಟ್ರಾಫಿಕ್ ಸಮಸ್ಯೆಗಳು ವರದಿಯಾಗಿಲ್ಲ. ಪೈಲಟ್‌ಗಳು ಯಾವ ರಸ್ತೆಗಳನ್ನು ಬಳಸಿದರು? ಕಳೆದ ಒಂದು ತಿಂಗಳಿನಿಂದ, ನಗರದಾದ್ಯಂತ ಟ್ರಾಫಿಕ್ ಜಾಮ್ ಕಣ್ಮರೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

SCROLL FOR NEXT