ಇಂಡಿಗೋ ವಿಮಾನದ ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ತಡವಾಗಿ ವಿಮಾನ ನಿಲ್ದಾಣ ತಲುಪಿದ ಇಬ್ಬರು ಇಂಡಿಗೋ ಪೈಲಟ್‌ಗಳು; ಕಾದು ಸುಸ್ತಾದ ಪ್ರಯಾಣಿಕರು

ಎರಡು ದೇಶಿ ಇಂಡಿಗೋ ವಿಮಾನಗಳ ಕ್ಯಾಪ್ಟನ್‌ಗಳು ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಕೆಐಎ) ತಡವಾಗಿ ತಲುಪಿದ್ದು, ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದರು.

ಬೆಂಗಳೂರು: ಎರಡು ದೇಶಿ ಇಂಡಿಗೋ ವಿಮಾನಗಳ ಕ್ಯಾಪ್ಟನ್‌ಗಳು ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಕೆಐಎ) ತಡವಾಗಿ ತಲುಪಿದ್ದು, ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದರು.

ಪ್ರಯಾಣಿಕರ ಪ್ರಕಾರ, ಇಂಡಿಗೋ ತನ್ನ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್‌ ನಿಂದಾಗಿ ಪೈಲಟ್ ಗಳು ಕರ್ತವ್ಯಕ್ಕೆ ತಡವಾಗಿ ವರದಿ ಮಾಡಿಕೊಂಡಿದ್ದಾರೆ ಎಂದು ಆನ್-ಬೋರ್ಡ್ ಪ್ರಕಟಣೆಗಳನ್ನು ಮಾಡಿತು ಮತ್ತು ಅವರೆಲ್ಲರೂ ನಂಬಿದ್ದಾರೆಂದು ತೋರುತ್ತದೆ.

ಆದರೆ ಶುಕ್ರವಾರ ನಗರದಲ್ಲಿ ಯಾವುದೇ ಪ್ರಮುಖ ಟ್ರಾಫಿಕ್ ಸಮಸ್ಯೆಗಳು ಇರಲಿಲ್ಲ ಎಂದು ಉನ್ನತ ಟ್ರಾಫಿಕ್ ಅಧಿಕಾರಿಗಳು ಹೇಳಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ.

ಬೆಂಗಳೂರಿನಿಂದ ದೆಹಲಿಗೆ ಇಂಡಿಗೋ ವಿಮಾನ ನಿಗದಿತ ಸಮಯಕ್ಕಿಂತ 81 ನಿಮಿಷಗಳ ವಿಳಂಬವಾಗಿ ತೆರಳಿದ್ದು, ಅದರಲ್ಲಿದ್ದ ಸುಮಾರು 180 ಪ್ರಯಾಣಿಕರು ಪೈಲಟ್ ಗಾಗಿ ಕಾಯುತ್ತದ್ದರು. ವಿಮಾನ ಸಂಖ್ಯೆ. 6E 869 KIA ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು 2. 50 ಗಂಟೆಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬೇಕಾಗಿತ್ತು. ಬದಲಿಗೆ ಮಧ್ಯಾಹ್ನ 1.21ಕ್ಕೆ ಹೊರಟು 77 ನಿಮಿಷ ತಡವಾಗಿ ಸಂಜೆ 4.07ಕ್ಕೆ ದೆಹಲಿ ತಲುಪಿದೆ.

ಇನ್ನು ವಿಳಂಬದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಇಂಡಿಗೋ, "ನಾವು ಸಮಯಕ್ಕೆ ಸರಿಯಾಗಿ ಹಾರಲು ಪ್ರಯತ್ನಿಸುತ್ತೇವೆ, ಆದಾಗ್ಯೂ, ಕೆಲವೊಮ್ಮೆ ನಮ್ಮ ಕಾರ್ಯಾಚರಣೆಯ ಅಂಶಗಳ ಅನಿಶ್ಚಿತ ಸ್ವಭಾವದಿಂದಾಗಿ, ವಿಮಾನದ ವೇಳಾಪಟ್ಟಿ ಬದಲಾವಣೆ ಅನಿವಾರ್ಯವಾಗುತ್ತವೆ. ನಿಮ್ಮ ಗಮ್ಯಸ್ಥಾನವನ್ನು ಆದಷ್ಟು ಬೇಗ ತಲುಪಲು ನಮ್ಮ ತಂಡವು ಪ್ರಯತ್ನಿಸುತ್ತಿದೆ" ಎಂದು ಟ್ವೀಟ್ ಮಾಡಿದೆ.

ಟ್ರಾಫಿಕ್ ಜಾಮ್‌ ಆರೋಪವನ್ನು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ ಎ ಸಲೀಂ ಸ್ಪಷ್ಟವಾಗಿ ತಳ್ಳಿಹಾಕಿದ್ದು, "ಇಂದು ಎಲ್ಲಿಯೂ ಯಾವುದೇ ಟ್ರಾಫಿಕ್ ಸಮಸ್ಯೆಗಳು ವರದಿಯಾಗಿಲ್ಲ. ಪೈಲಟ್‌ಗಳು ಯಾವ ರಸ್ತೆಗಳನ್ನು ಬಳಸಿದರು? ಕಳೆದ ಒಂದು ತಿಂಗಳಿನಿಂದ, ನಗರದಾದ್ಯಂತ ಟ್ರಾಫಿಕ್ ಜಾಮ್ ಕಣ್ಮರೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT