ಎಚ್ಚರಿಕೆ ಫಲಕ ಹಾಕಿರುವ ಅಧಿಕಾರಿಗಳು. 
ರಾಜ್ಯ

ದಾಂಡೇಲಿಯಲ್ಲಿ ಮೊಸಳೆ ದಾಳಿ ಪ್ರಕರಣ ಹೆಚ್ಚಳ: ಪ್ರವಾಸಿಗರ ರಕ್ಷಣೆಗೆ ಎಚ್ಚರಿಕೆ ಫಲಕ ಹಾಕಿದ ಅಧಿಕಾರಿಗಳು!

ಮೊಸಳೆ ದಾಳಿಯಿಂದ ಪ್ರವಾಸಿಗರ ರಕ್ಷಿಸಲು ದಾಂಡೇಲಿಯ ಕಾಳಿ ನದಿ ತೀರದಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ಫಲಕಗಳನ್ನು ಹಾಕಿದೆ.

ಹುಬ್ಬಳ್ಳಿ: ಮೊಸಳೆ ದಾಳಿಯಿಂದ ಪ್ರವಾಸಿಗರ ರಕ್ಷಿಸಲು ದಾಂಡೇಲಿಯ ಕಾಳಿ ನದಿ ತೀರದಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ಫಲಕಗಳನ್ನು ಹಾಕಿದೆ.

ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ದಾಳಿಗೆ ಈ ವರ್ಷ ಮೂವರು ಬಲಿಯಾಗಿದ್ದಾರೆ. ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಇದೀಗ ನದಿ ತೀರದಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ.

ನದಿಯಲ್ಲಿ ಮೊಸಳಗಳು ಹೆಚ್ಚಾಗಿದ್ದು, ಈ ಸೂಚನಾ ಫಲಕವು ಪ್ರವಾಸಿಗರು, ಭಕ್ತರು, ಮತ್ತು ಸ್ಥಳೀಯರು ಎಚ್ಚರಿಕೆಯಿಂದಿರಲು ಸಹಾಯ ಮಾಡುತ್ತದೆ ಮತ್ತು ಜಾಗೃತಿಯನ್ನೂ ಮೂಡಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಚ್ಚರಿಕೆಯ ಫಲಕದಲ್ಲಿ ಮೊಸಳಗಳಿಗೆ ಆಹಾರ ನೀಡದಿರಲು, ನೀರಿನಲ್ಲಿ ಈಜದಂತೆ, ರಾತ್ರಿಯಲ್ಲಿ ಓಡಾಡುವಾಗ ಎಚ್ಚರಿಕೆಯಿಂದಿರುವಂತೆ, ಪ್ರಾಣಿಗಳಿಗೆ ತೊಂದರೆ ನೀಡದಂತೆ ಹಾಗೂ ಮೊಸಳೆಗಳ ಹತ್ತಿರ ಮಕ್ಕಳನ್ನು ಕರೆದೊಯ್ಯದಂತೆ ಸೂಚಿಸಲಾಗಿದೆ.

ಪ್ರವಾಸಿಗರ ಹೊರತುಪಡಿಸಿ ನದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರು ಇಲ್ಲಿಗೆ ಬರುತ್ತಾರೆ. ನದಿಯ ಬಳಿ ದೇವಸ್ಥಾನ ಇರುವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವವರು ನದಿ ಬಳಿ ಬರುತ್ತಾರೆ. ಅಸ್ತಿ ವಿಸರ್ಜನೆ ಮಾಡಲು, ಇತರೆ ಧಾರ್ಮಿಕ ಆಚರಣೆಗಳ ನಡೆಸಲು ಇಲ್ಲಿಗೆ ಬರುತ್ತಾರೆ. ನದಿಯ ನೀರು ನೋಡುತ್ತಿದ್ದಂತೆಯೇ ಮೊಸಳೆಗಳ ಬಗ್ಗೆ ತಿಳಿಯದೆಯೇ ಈಜಲು ಹೋಗಿ ತಮ್ಮ ಪ್ರಾಣ ಅಪಾಯ ಸಿಲುಕುವಂತೆ ಮಾಡುತ್ತಾರೆ. ಹೀಗಾಗಿ ನದಿಯಲ್ಲಿ ಮೊಸಳೆಗಳಿರುವ ಬಗ್ಗೆ ಬೋರ್ಡ್ ಹಾಕಲಾಗಿದ್ದು, ಇದು ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಹಳಿಯಾಳ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಂಡೇಲಿ ಮೂಲಕ ಹಾದು ಹೋಗುವ ಕಾಳಿ ನದಿಯಲ್ಲಿ ಹಲವು ವರ್ಷಗಳಿಂದ ಮೊಸಳೆಗಳ ಸಂಖ್ಯೆ ಹೆಚ್ಚಾಗಿ. ನೀರಿನ ಮಟ್ಟ ಕಡಿಮೆಯಾದಾಗ ಹಾವುಗಳು ಬಂಡೆಗಳ ಮೇಲೆ ಮತ್ತು ದಡದ ಉದ್ದಕ್ಕೂ ಸೂರ್ಯನ ಬಿಸಿಲಿಗೆ ತಮ್ಮ ಮೈಯನ್ನೊಡ್ಡಿ ಮಲಗುವುದು ಇಲ್ಲಿ ಸಾಮಾನ್ಯ ಎಂದಿದ್ದಾರೆ.

ದಾಂಡೇಲಿಯ ವನ್ಯಜೀವಿ ಹೋರಾಟಗಾರ ರಾಹುಲ್ ಬಾವಾಜಿ ಮಾತನಾಡಿ, ಹಲವು ವರ್ಷಗಳಿಂದ ದಾಂಡೇಲಿಯಲ್ಲಿ ಮೊಸಳೆ ದಾಳಿ ಪ್ರಕರಣಗಳು ನಡೆದಿರಲಿಲ್ಲ. ನದಿಯ ದಂಡೆಯಲ್ಲಿ ವಾಸಿಸುವ ಜನರು ಮತ್ತು ಮೊಸಳೆಗಳು ಸೌಹಾರ್ದಯುತವಾಗಿದ್ದರು. ಆದರೆ ಇತ್ತೀಚೆಗೆ ನದಿಯುದ್ದಕ್ಕೂ ನೀರು ತೆಗೆದುಕೊಳ್ಳುವುದು,  ಪೈಪ್ ಗಳ ಸಂಪರ್ಕದಿಂದಾಗಿ ಮೊಸಳೆಗಳ ಆವಾಸಸ್ಥಾನವನ್ನು ನಾಶಪಡಿಸುತ್ತಿವೆ. ಎಚ್ಚರಿಕೆಗಳ ಹೊರತಾಗಿಯೂ ಅವುಗಳ ನಿರ್ಲಕ್ಷ್ಯಿಸಿ ಕೆಲವರು ಸಾಹಸ ಮಾಡಲು ನದಿಗೆ ಇಳಿಯುತ್ತಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT