ರಾಜ್ಯ

ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ: ಎಸ್ ಆರ್ ಲೇ ಔಟ್ ನಲ್ಲಿ ಫೀಲ್ಡಿಗಿಳಿದ ಬುಲ್ಡೋಜರ್

Sumana Upadhyaya

ಬೆಂಗಳೂರು: ಮಳೆನೀರು ಚರಂಡಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೊನ್ನೆ ಸೋಮವಾರ ಪುನರಾರಂಭಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಿನ್ನೆ ಮಂಗಳವಾರ ಕೆಆರ್ ಪುರಂನ ಎಸ್‌ಆರ್ ಲೇಔಟ್ ಮತ್ತು ಶೀಲವಂತ ಕೆರೆ  ಮಹದೇವಪುರ ಬಳಿ ಕಾರ್ಯಾಚರಣೆಗಿಳಿದಿತ್ತು.

ಆರು ಆರ್ ಸಿಸಿ ಮನೆಗಳು ಮತ್ತು ಲಗತ್ತಿಸಲಾದ ಶೀಟ್ ಮನೆ, ಎಸ್‌ಆರ್ ಲೇಔಟ್‌ನಲ್ಲಿನ ರಾಜಕಾಲುವೆಯ 80 ಮೀಟರ್ ಅನ್ನು ಭಾಗಶಃ ಆಕ್ರಮಿಸಿಕೊಂಡಿವೆ ಎಂದು ಬಿಬಿಎಂಪಿ ಹೇಳಿದೆ. ಮನೆಯೊಂದರ ಕಾಂಪೌಂಡ್ ಗೋಡೆ ಹಾಗೂ ಮೆಟ್ಟಿಲುಗಳ ಭಾಗವನ್ನು ತೆರವುಗೊಳಿಸಲಾಗಿದ್ದು, ಇನ್ನೊಂದು ಮನೆಯ ಮಾಲೀಕರು ಸ್ವಯಂ ಪ್ರೇರಿತವಾಗಿ ಒತ್ತುವರಿ ತೆರವಿಗೆ ಒಪ್ಪಿಗೆ ನೀಡಿದ್ದಾರೆ. 

ಬಸವನಪುರದಲ್ಲಿರುವ ಮತ್ತೊಂದು ಆಸ್ತಿ ಅತಿಕ್ರಮಣ ತಡೆ ಅಭಿಯಾನ ಇಂದು ಕೂಡ ಮುಂದುವರಿಯಲಿದೆ. ಎಸ್‌ಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್ ಮಾಲತಿ, ಸೋಮವಾರ ಕಾಂಪೌಂಡ್ ಗೋಡೆಯನ್ನು ತೆಗೆದ ಪಾಲಿಕೆಯು ಕಂದಾಯ ಇಲಾಖೆಯಿಂದ ಗುರುತು ಮಾಡಿದ್ದರಿಂದ ಮಂಗಳವಾರ ಎರಡು ಮನೆಗಳ ಪೈಕಿ ಒಂದು ಭಾಗವನ್ನು ಕೆಡವಲಾಯಿತು.

ಮಹದೇವಪುರ ವಲಯದ ಶಿಲಾವಂತನ್‌ ಕೆರೆಯ ಅಸೆಂಟ್‌ ಗಾರ್ಡನ್‌ ಅಪಾರ್ಟ್‌ಮೆಂಟ್‌ ಹಿಂಭಾಗದ 130ಮೀಟರ್‌ ಎತ್ತರದ ಸುತ್ತಲಿನ ಇನ್ನೊಂದು ಕಾಂಪೌಂಡ್‌ ಗೋಡೆಯನ್ನೂ ತೆರವುಗೊಳಿಸಲಾಗಿದೆ. ರೈನ್‌ಬೋ ಲೇಔಟ್‌ನಲ್ಲಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದ ಮುಂದೆ ಬಾಕಿ ಉಳಿದಿದ್ದು, ಬೆಂಗಳೂರು ಪೂರ್ವ ತಹಶೀಲ್ದಾರ್ ಅವರ ಆದೇಶಕ್ಕಾಗಿ ಬಿಬಿಎಂಪಿ ಕಾಯುತ್ತಿದೆ ಎಂದು ಹೇಳಿದರು.

SCROLL FOR NEXT