ರಾಜ್ಯ

ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ವಿರೋಧ: ಸಚಿವ ಮಾಧುಸ್ವಾಮಿ ಸ್ವಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರ ಬೆದರಿಕೆ ಹಾಕಿದ ಜನತೆ!

Manjula VN

ಶಿರಾ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ಕಾನೂನು ಸಚಿವ ಮಾಧುಸ್ವಾಮಿಯವರ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಿಲಾರದಹಳ್ಳಿ ತಾಂಡಾದ ಲಂಬಾಣಿ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದು, ಚುನಾವಣೆ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಒಳಮೀಸಲಾತಿ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಲಂಬಾಣಿ ಸಮುದಾಯದವರು ತಾಂಡದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರದ ಈ ನೀತಿಯಿಂದ ಲಂಬಾಣಿ ಜನಾಂಗಕ್ಕೆ ಹೆಚ್ಚಿನ ಅನ್ಯಾಯವಾಗಲಿದೆ. ಮೀಸಲಾತಿ ನಮ್ಮ‌ ಹಕ್ಕು, ಭಿಕ್ಷೆಯಲ್ಲ‌. ಆದ್ದರಿಂದ, ಕೇಂದ್ರ ಸರ್ಕಾರಕ್ಕೆ‌ ಮಾಡಿರುವ ಶಿಫಾರಸು ವಾಪಸ್ ಪಡೆಯುವಂತೆ ಒತ್ತಾಯಿಸಿದರು.

ಅಲ್ಲದೆ, ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದು ಯಾವುದೇ ಪಕ್ಷದವರು ಸಹ ಗ್ರಾಮದಲ್ಲಿ ಪ್ರವೇಶ ಮಾಡದಂತೆ ಪ್ಲೆಕ್ಸ್ ಹಾಕಿದ್ದಾರೆ.

ಪ್ರತಿಭಟನೆಯಲ್ಲಿ ಶಿರಾ ತಾಲ್ಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಶೇಷ ನಾಯಕ್, ಚಂದ್ರನಾಯಕ್ ಇದ್ದರು. ಈ ಕುಗ್ರಾಮದಲ್ಲಿ ಸುಮಾರು 630 ಮತದಾರರಿದ್ದಾರೆ.

SCROLL FOR NEXT