ಸಂತೋಷ್ ಹೆಗ್ಡೆ 
ರಾಜ್ಯ

ಆಡಳಿತದಲ್ಲಿ ಭ್ರಷ್ಟಚಾರವಿದೆ ಎಂಬುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ : ಸಂತೋಷ್ ಹೆಗ್ಡೆ

ರಾಜಕೀಯದಲ್ಲಿ ಸೇವಾ ಮನೋಭಾವ ದೂರವಾಗಿ, ಅಧಿಕಾರ ಮತ್ತು ಹಣ ಗಳಿಸುವ ವೃತ್ತಿಯಾಗಿ ಮಾರ್ಪಟ್ಟಿದೆ ಎಂದು ಭಾರತದ ಮಾಜಿ ಸಾಲಿಸಿಟರ್ ಜನರಲ್ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ದೇಶದ ಸ್ವಾತಂತ್ರ್ಯ ದಿನದಂದು ವಾಗ್ದಾಳಿ ನಡೆಸಿದರು.

ಬೆಂಗಳೂರು: ರಾಜಕೀಯದಲ್ಲಿ ಸೇವಾ ಮನೋಭಾವ ದೂರವಾಗಿ, ಅಧಿಕಾರ ಮತ್ತು ಹಣ ಗಳಿಸುವ ವೃತ್ತಿಯಾಗಿ ಮಾರ್ಪಟ್ಟಿದೆ ಎಂದು ಭಾರತದ ಮಾಜಿ ಸಾಲಿಸಿಟರ್ ಜನರಲ್ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ದೇಶದ ಸ್ವಾತಂತ್ರ್ಯ ದಿನದಂದು ವಾಗ್ದಾಳಿ ನಡೆಸಿದರು.

ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಸಂತೋಷ್ ಹೆಗ್ಡೆ, ಸಮಾಜದಲ್ಲಿ ಒಗ್ಗಟ್ಟು ಮತ್ತು ಶಾಂತಿ ನೆಲೆಸಲು ಎರಡು ಸಾಮಾಜಿಕ ಮೌಲ್ಯಗಳಾದ ಸಂತೃಪ್ತಿ ಮತ್ತು ಮಾನವತಾವಾದವನ್ನು ಬೆಳೆಸಲು ಸರ್ವಾಂಗೀಣ ಪ್ರಯತ್ನ ನಡೆಯಬೇಕು ಎಂದು ಹೇಳಿದರು. ಸ್ವಾತಂತ್ರ್ಯದ ಮೊದಲು ದೇಶದಲ್ಲಿ ಅನೇಕರು ವಿದೇಶಿ ಆಡಳಿತದ ವಿರುದ್ಧ ಮತ್ತು ಸ್ವಾತಂತ್ರ್ಯಕ್ಕಾಗಿ ಯಾವುದೇ ಹಣದ ಲಾಭವಿಲ್ಲದೆ ಹೋರಾಡಿದರು, ಇದು ಅವರ ದೇಶದ ಮೇಲಿನ ಪ್ರೀತಿಯಿಂದಾಗಿ, ಇದು ತ್ಯಾಗ ಎಂದು ಅವರು ಸ್ಮರಿಸಿದರು.

ಸ್ವಾತಂತ್ರ್ಯ ನಂತರ ಜನರು ರಾಷ್ಟ್ರದ ಸೇವೆ ಎಂದು ರಾಜಕೀಯ ಸೇರಿದರು, ಕೆಲವು ದಶಕಗಳಿಂದ ಚುನಾಯಿತ ಪ್ರತಿನಿಧಿಗಳಿಗೆ ಸಂಬಳ ಇರಲಿಲ್ಲ. ಅವರಿಗೆ ವೆಚ್ಚ ಮಾತ್ರ ಪಾವತಿಸಲಾಗುತ್ತಿತ್ತು, ಚುನಾಯಿತ ಪ್ರತಿನಿಧಿಯ ಪಾತ್ರವು ಸಂಸತ್ತು ಅಥವಾ ರಾಜ್ಯ ಅಸೆಂಬ್ಲಿಗಳಂತಹ ಅವರ ಚುನಾಯಿತ ಸಂಸ್ಥೆಗಳ ಪ್ರಕ್ರಿಯೆಗಳಿಗೆ ಹಾಜರಾಗುವುದು ಮಾತ್ರ. ಚುನಾಯಿತ ಸಂಸ್ಥೆಗಳ ಕಾರ್ಯವೈಖರಿಯು ವರ್ಷದಲ್ಲಿ 100 ದಿನಗಳ ಅವಧಿಯದ್ದಾಗಿತ್ತು ಮತ್ತು ಕಾನೂನು ಮತ್ತು ನೀತಿಗಳನ್ನು ರೂಪಿಸುವುದು ಅವರ ಕೆಲಸವಾಗಿತ್ತು.

ಚುನಾಯಿತ ಪ್ರತಿನಿಧಿಯಾಗಲು ಯಾವುದೇ ಶೈಕ್ಷಣಿಕ ಅರ್ಹತೆ ಇರಲಿಲ್ಲ ಮತ್ತು ಆಡಳಿತದಲ್ಲಿ ಅವರಿಗೆ ಯಾವುದೇ ಪಾತ್ರವಿರಲಿಲ್ಲ. ಆದ್ದರಿಂದ, ಅವರು ತಮ್ಮ ಉಳಿವಿಗಾಗಿ ಇತರ ಕಾನೂನುಬದ್ಧ ಮೂಲಗಳನ್ನು ಹುಡುಕಬೇಕಾಯಿತು. ಆದರೆ ಕಳೆದ 50 ವರ್ಷಗಳಲ್ಲಿ ಆಡಳಿತದ ಸಂಪೂರ್ಣ ರಚನೆಯೇ ಬದಲಾಗಿದೆ.

ಸಂವಿಧಾನದ ಅಡಿಯಲ್ಲಿ ಆಡಳಿತವನ್ನು ವಹಿಸಿಕೊಟ್ಟ ಕಾರ್ಯಾಂಗವನ್ನು ಚುನಾಯಿತ ಪ್ರತಿನಿಧಿಗಳಿಗೆ ಅಧೀನಗೊಳಿಸಲಾಗಿದೆ. ಪರಿಣಾಮವಾಗಿ ಇಂದು ಚುನಾಯಿತ ಪ್ರತಿನಿಧಿಗಳು ಆಡಳಿತದ ಮಾಸ್ಟರ್ಸ್ ಆಗಿದ್ದಾರೆ ಎಂದಿದ್ದಾರೆ.

"ಅಧಿಕಾರವು ಭ್ರಷ್ಟಗೊಂಡಿದೆ  ಎಂಬ ಹಳೆಯ ಮಾತು ಇಂದಿನ ಘೋಷಣೆಯಾಗಿದೆ ಎಂದು ನ್ಯಾಯಮೂರ್ತಿ ಹೆಗಡೆ ಹೇಳಿದರು. ‘ಇಂದಿನ ಆಡಳಿತದಲ್ಲಿ ಭ್ರಷ್ಟಾಚಾರವಿದೆ ಎಂಬುದು ಎಲ್ಲರಿಗೂ ಗೊತ್ತಿದೆ.ರಾಜಕೀಯ ಸೇವೆಯಾಗಿ ಉಳಿಯದೆ, ಅಧಿಕಾರ ಮತ್ತು ಹಣದ ವೃತ್ತಿಯಾಗಿದೆ’ ಎಂದರು.

ವಾಸ್ತವದಲ್ಲಿ ಇಂದಿನ ಚುನಾಯಿತ ಪ್ರತಿನಿಧಿಗಳು ಜನಸೇವಕರಲ್ಲ, ಅವರು ಸಾರ್ವಜನಿಕ ಗುರುಗಳು. ಅವರಿಗೆ ಸ್ವಯಂ ನೀಡಲಾದ ಸವಲತ್ತುಗಳು ಅವರನ್ನು ಇತರ ನಾಗರಿಕರಿಗಿಂತ ಶ್ರೇಷ್ಠರನ್ನಾಗಿ ಮಾಡುತ್ತದೆ. ಅವರು ಇತರ ನಾಗರಿಕರಿಗೆ ಸಮಾನರಾಗುವುದು ಚುನಾವಣೆಯ ಹೊಸ್ತಿಲಲ್ಲಿ ಮಾತ್ರ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT