ಅಮೆರಿಕದಲ್ಲಿ ಮೃತಪಟ್ಟ ಟೆಕ್ಕಿ ದಂಪತಿ ಪೋಷಕರು, ಸಿಎಂ ಸಿದ್ದರಾಮಯ್ಯ 
ರಾಜ್ಯ

ಅಮೆರಿಕದಲ್ಲಿ ದಾವಣಗೆರೆಯ ದಂಪತಿ ಸಾವು ಪ್ರಕರಣ: ಕುಟುಂಬಸ್ಥರಿಂದ ಸಿಎಂ ಭೇಟಿ, ಮೃತದೇಹ ತರಲು ಮನವಿ

ದಾವಣಗೆರೆ ಜಿಲ್ಲೆಯ ಅನಿವಾಸಿ ಭಾರತೀಯ ಕುಟುಂಬದ ಮೂವರು ಅಮೆರಿಕದ ಮೇರಿಲ್ಯಾಂಡ್ ನ ಬಾಲ್ಟಿಮೋರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರು: ದಾವಣಗೆರೆ ಜಿಲ್ಲೆಯ ಅನಿವಾಸಿ ಭಾರತೀಯ ಕುಟುಂಬದ ಮೂವರು ಅಮೆರಿಕದ ಮೇರಿಲ್ಯಾಂಡ್ ನ ಬಾಲ್ಟಿಮೋರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಕುಟುಂಬದ ಸಂಬಂಧಿಕರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೃತ ದೇಹಗಳನ್ನು ದಾವಣಗೆರೆಗೆ ತರಲು ಸಹಾಯ ಮಾಡುವಂತೆ ಮನವಿ ಮಾಡಿದರು.

ಅಗತ್ಯ ನೆರವು ನೀಡುವಂತೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು. ಕೆಲ ದಿನಗಳ ಹಿಂದೆ ಅಮೆರಿಕದ ಬಾಲ್ಟಿಮೋರ್‌ನಲ್ಲಿ 3 ಮಂದಿ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿತ್ತು. ಮೃತರನ್ನು 37 ವರ್ಷದ ಟೆಕ್ಕಿ ಯೋಗೇಶ್ ಎಚ್ ನಾಗರಾಜಪ್ಪ, ಅವರ ಪತ್ನಿ 37 ವರ್ಷದ ಪ್ರತಿಬಾ ವೈ ಅಮರನಾಥ್ ಮತ್ತು ಅವರ 6 ವರ್ಷದ ಮಗ ಯಶ್ ಹೊನ್ನಾಳ್ ಎಂದು ಗುರುತಿಸಲಾಗಿದೆ.

ದಿ ಬಾಲ್ಟಿಮೋರ್ ಸನ್ ಪ್ರಕಾರ  ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಈ ಘಟನೆಯು ಶಂಕಿತ ಯೋಗೇಶ್ ಎಚ್ ನಾಗರಾಜಪ್ಪ ಜೋಡಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಬಾಲ್ಟಿಮೋರ್ ಕೌಂಟಿ ಪೊಲೀಸ್ ವಕ್ತಾರ ಆಂಥೋನಿ ಶೆಲ್ಟನ್ ಶನಿವಾರ ಬೆಳಿಗ್ಗೆ ಹೇಳಿದ್ದಾರೆ. ಪ್ರತಿಯೊಬ್ಬರೂ ಸ್ಪಷ್ಟವಾಗಿ ಗುಂಡೇಟಿನಿಂದ ಬಳಲಿರುವಂತೆ ಕಂಡುಬಂದಿದೆ ಎಂದು ಶೆಲ್ಟನ್ ಹೇಳಿದರು. ಈ ಘಟನೆ ಕುರಿತು ತನಿಖೆ ಮುಂದುವರೆದಿದ್ದು, ನಂತರ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ಪೊಲೀಸರು ಹೇಳಿರುವುದಾಗಿ ಬಾಲ್ಟಿಮೋರ್ ಸನ್ ತಿಳಿಸಿದೆ.  ಇದು  ಮೇರಿಲ್ಯಾಂಡ್‌ನಲ್ಲಿ ಅತ್ಯಧಿಕ ಪ್ರಸರಣ ಹೊಂದಿರುವ ದಿನಪತ್ರಿಕೆಯಾಗಿದೆ.

ಈ ಮಧ್ಯೆ ದಂಪತಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಒಂದು ವಾರದ ಹಿಂದೆ ದಂಪತಿಯೊಂದಿಗೆ ಮಾತನಾಡಿದ್ದು ಎಲ್ಲವೂ ಸರಿಯಾಗಿದೆ ಎಂದು ಯೋಗೇಶ್ ಹೇಳಿದ್ದಾಗಿ ಪೋಷಕರು ಹೇಳಿದ್ದಾರೆ. ನಾವು ನೋಡಿದಂತೆ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಅವರು 9 ವರ್ಷಗಳ ಹಿಂದೆ ವಿವಾಹವಾದರು, ಅವರು ಅಮೆರಿಕದಲ್ಲಿದ್ದರು, ಅವರ ಪತ್ನಿ ಬೆಂಗಳೂರಿನವರು, ನಮ್ಮ ಎರಡನೇ ಮಗನಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ, ಸಾವಿನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಅಥವಾ ಏನಾಯಿತು, ಮೃತದೇಹಗಳನ್ನು ಮರಳಿ ತರಲು ನಮಗೆ ಸಹಾಯ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತಿರುವುದಾಗಿ ಅವರು ತಿಳಿಸಿದರು. 

ಯೋಗೇಶ್  ಮೊದಲು ಜರ್ಮನಿಯಲ್ಲಿದ್ದ, ನಂತರ ಆತ ಮದುವೆಯಾಗಿ ಯುಎಸ್‌ನಲ್ಲಿ ದಂಪತಿ ನೆಲೆಸಿದ್ದರು, ಅವರು ಭಾರತಕ್ಕೆ ಬಂದಾಗ ನಾವು ತೆಗೆದ ಈ ಫೋಟೋಗಳು ನಮ್ಮ ಬಳಿ ಇವೆ, ದೇಹವನ್ನು ಮರಳಿ ತರಬೇಕೆಂದು ನಮ್ಮ ಏಕೈಕ ಮನವಿಯಾಗಿದೆ. ಮೂರ್ನಾಲ್ಕು ದಿನ ಕಳೆದರೂ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೋಷಕರು  ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT