ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ 
ರಾಜ್ಯ

ಚಂದ್ರಯಾನ-3: ಲ್ಯಾಂಡಿಂಗ್‌ಗೆ ಚಂದ್ರನ ದಕ್ಷಿಣ ಧ್ರುವವನ್ನು ಇಸ್ರೋ ಆಯ್ಕೆ ಮಾಡಿದ್ದೇಕೆ? ಎಸ್ ಸೋಮನಾಥ್ ಹೇಳಿದ್ದು ಹೀಗೆ...

ಚಂದ್ರಯಾನ-3ರ ಲ್ಯಾಂಡಿಂಗ್‌ಗಾಗಿ ಇಸ್ರೋ ಚಂದ್ರನ ದಕ್ಷಿಣ ತುದಿಯನ್ನು ಇಸ್ರೋ ಆಯ್ಕೆ ಮಾಡಿದ್ದೇಕೆ? ಎಂಬುದರ ಕುರಿತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಗುರುವಾರ ವಿವರಿಸಿದ್ದಾರೆ.

ಬೆಂಗಳೂರು: ಚಂದ್ರಯಾನ-3ರ ಲ್ಯಾಂಡಿಂಗ್‌ಗಾಗಿ ಇಸ್ರೋ ಚಂದ್ರನ ದಕ್ಷಿಣ ತುದಿಯನ್ನು ಇಸ್ರೋ ಆಯ್ಕೆ ಮಾಡಿದ್ದೇಕೆ? ಎಂಬುದರ ಕುರಿತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಗುರುವಾರ ವಿವರಿಸಿದ್ದಾರೆ.

ಸುಮಾರು 70 ಡಿಗ್ರಿ ಗಳಿಷ್ಟಿರುವ ದಕ್ಷಿಣ ಧ್ರುವದ ಬಳಿಗೆ ನಾವು  ಹೋಗಿದ್ದೇವೆ. ಅದು ಸೂರ್ಯನಿಂದ ಕಡಿಮೆ ಪ್ರಕಾಶಿಸುವಿಕೆಯೊಂದಿಗೆ ಒಂದು ನಿರ್ದಿಷ್ಟ ಪ್ರಯೋಜನವನ್ನು ಹೊಂದಿದೆ. ಹೆಚ್ಚಿನ ವೈಜ್ಞಾನಿಕ ವಿಷಯ ತಿಳಿಯಲು ಅದು ಪ್ರಶಸ್ತವಾಗಿದೆ. ಅಂತಿಮವಾಗಿ ಮಾನವರು ಹೋಗಿ ವಸಾಹತು ರಚಿಸಲು, ನಂತರ ಪ್ರಯಾಣಿಸಲು ಬಯಸುವುದರಿಂದ ವಿಜ್ಞಾನಿಗಳು ದಕ್ಷಿಣ ತುದಿಯತ್ತ ಹೆಚ್ಚಿನ ಆಸಕ್ತಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅದು ನಾವು ಹುಡುಕುತ್ತಿರುವ ಅತ್ಯುತ್ತಮ ಸ್ಥಳವಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇದೇ ವೇಳೆ ಮುಂದಿನ ಇಸ್ರೋ ಯೋಜನೆಗಳ ಕುರಿತು ಮಾತನಾಡಿದ ಸೋಮನಾಥ್, ಸೂರ್ಯನ ಬಳಿಗೆ ನೌಕೆ ಕಳುಹಿಸುವ ಆದಿತ್ಯ ಮಿಷನ್  ಸೆಪ್ಟೆಂಬರ್‌ನಲ್ಲಿ ಉಡಾವಣೆಗೆ ಸಿದ್ಧವಾಗುತ್ತಿದೆ. ಗಗನ ಯಾನ ಯೋಜನೆ ಇನ್ನೂ ಪ್ರಗತಿಯಲ್ಲಿದೆ. ಅನೇಕ ಪರೀಕ್ಷಾ ಕಾರ್ಯಾಚರಣೆಗಳ ಮೂಲಕ 2025 ರ ವೇಳೆಗೆ ಮೊದಲ ಮಾನವಸಹಿತ ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. 

ಇನ್ನೂ ಪ್ರಗ್ಯಾನ್ ರೋವರ್ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು, ಇದು ಎರಡು ಉಪಕರಣಗಳನ್ನು ಹೊಂದಿದೆ, ಎರಡೂ ಚಂದ್ರನ ಮೇಲಿನ ಧಾತುರೂಪದ ಸಂಯೋಜನೆಯ ಸಂಶೋಧನೆಗಳು ಮತ್ತು ರಾಸಾಯನಿಕ ಸಂಯೋಜನೆಗಳಿಗೆ ಸಂಬಂಧಿಸಿದೆ. ಮೇಲಾಗಿ ಇದು ಚಂದ್ರನ ಮೇಲ್ಮೈ ಮೇಲೆ ಸಂಚರಿಸುತ್ತದೆ. ಭವಿಷ್ಯದ ಹುಡುಕಾಟಕ್ಕೆ ಅಗತ್ಯವಾಗಿರುವ ರೊಬೊಟಿಕ್ ಮಾರ್ಗ ಪ್ಲಾನ್ ಬಗ್ಗೆಯೂ ಕಾರ್ಯ ಪ್ರವೃತ್ತರಾಗುವುದಾಗಿ ಅವರು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT