ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 
ರಾಜ್ಯ

ರೇಡಿಯೊಆ್ಯಕ್ಟಿವ್ ವಸ್ತುವಿನೊಂದಿಗೆ ಕೇಂಪೇಗೌಡ ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ

ವಿಮಾನ ಹಾರಾಟದ ವೇಳೆ ತಮ್ಮ ಬ್ಯಾಗ್ ನಲ್ಲಿ ವಿಕಿರಣಶೀಲ ವಸ್ತುವನ್ನು ಮರೆಮಾಚಿದ್ದಕ್ಕಾಗಿ ಸುಮಾರು 30 ವರ್ಷದ ಯುವಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 

ಬೆಂಗಳೂರು: ವಿಮಾನ ಹಾರಾಟದ ವೇಳೆ ತಮ್ಮ ಬ್ಯಾಗ್ ನಲ್ಲಿ ವಿಕಿರಣಶೀಲ ವಸ್ತುವನ್ನು ಮರೆಮಾಚಿದ್ದಕ್ಕಾಗಿ ಸುಮಾರು 30 ವರ್ಷದ ಯುವಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 

ಪ್ರಯಾಣಿಕ ಪ್ರಯಾಣಿಸುವಾಗ ಕೋಬಾಲ್ಟ್ ನ್ನು ಹೆಚ್ಚಿನ ಮಟ್ಟದ ರೋಂಟ್ಜೆನ್ (ವಿಕಿರಣದ ಘಟಕ) ಹೊಂದಿದ್ದು, ಇದು ಮನುಷ್ಯರಿಗೆ ಸಾಕಷ್ಟು ಅಪಾಯಕಾರಿ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಎಫ್‌ಐಆರ್‌ ದಾಖಲಿಸಿ ಆತನನ್ನು ಬಂಧಿಸಲಾಗಿದೆ.

ವಿಮಾನ ಹಾರಾಟಗಾರ ಇಂಡಿಗೋ ವಿಮಾನದ ಮೂಲಕ ನಿನ್ನೆ ಅಪರಾಹ್ನ 3 ಗಂಟೆಯ ಸುಮಾರಿಗೆ ಭುವನೇಶ್ವರದಿಂದ ಬೆಂಗಳೂರಿಗೆ ತಲುಪಿದ್ದ. ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿದ್ದಂತೆ, ವಿಮಾನ ನಿಲ್ದಾಣದೊಳಗಿನ ವಿಕಿರಣ ಸಂವೇದಕ ಬೀಪ್ ಆಗಿದೆ. ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದರು. ಆಗ ಕೋಬಾಲ್ಟ್ ಸಿಕ್ಕಿದ್ದು, ಅದನ್ನು ಪ್ರಯಾಣಿಕ ಎರಡು ರಾಡ್‌ಗಳ ಒಳಗೆ ಮರೆಮಾಚಿದ್ದ. ಪ್ರತಿ ರಾಡ್ 3 ಇಂಚುಗಳಷ್ಟು ಉದ್ದ ಹೊಂದಿದೆ. ಇದರಿಂದ ಹೊರಬರುವ ವಿಕಿರಣ ಸಾಕಷ್ಟು ಎಂದು ಅಧಿಕಾರಿಗಳು ಹೇಳುತ್ತಾರೆ. 

ಮೇಲ್ನೋಟಕ್ಕೆ ವ್ಯಕ್ತಿಗೆ ತಾನು ಸಾಗಿಸುತ್ತಿದ್ದ ವಸ್ತುವಿನ ಬಗ್ಗೆ ತಿಳಿದಿರಲಿಲ್ಲ. ಅವನನ್ನು ವಾಹಕವಾಗಿ ಬಳಸಿರುವ ಸಾಧ್ಯತೆಯಿದೆ. ಭಾರತದಲ್ಲಿ ವಿಮಾನ ನಿಲ್ದಾಣಗಳಲ್ಲಿ ವಿಕಿರಣಶೀಲ ವಸ್ತುಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ. ಚೆಕ್-ಇನ್ ಮತ್ತು ಕ್ಯಾಬಿನ್ ಬ್ಯಾಗೇಜ್ ಎರಡರ ನಿಷೇಧಿತ ಪಟ್ಟಿಯಲ್ಲಿ ಈ ಬಗ್ಗೆ ಅಂಕಿಅಂಶಗಳಿವೆ. 

ವಿಮಾನ ನಿಲ್ದಾಣ ಪೊಲೀಸರು ಐಪಿಸಿ ಸೆಕ್ಷನ್ 284 (ವಿಷಕಾರಿ ವಸ್ತುವಿನ ಬಗ್ಗೆ ನಿರ್ಲಕ್ಷ್ಯ ವರ್ತನೆ) ಮತ್ತು 278 (ಆರೋಗ್ಯಕ್ಕೆ ಹಾನಿಕಾರಕ ವಾತಾವರಣವನ್ನು ಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಇಂಡಿಗೊ ವಿಮಾನ ಸಂಸ್ಥೆ ಪ್ರತಿಕ್ರಿಯಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT