ಕಲಾವಿದ ಬಿಕೆಎಸ್ ವರ್ಮಾ 
ರಾಜ್ಯ

ಖ್ಯಾತ ಚಿತ್ರ ಕಲಾವಿದ ಬಿಕೆಎಸ್ ವರ್ಮ ನಿಧನ

ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ‌ (74 ವರ್ಷ) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.

ಬೆಂಗಳೂರು: ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ‌ (74 ವರ್ಷ) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.

ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ವರ್ಮ ಅವರು ಜನಿಸಿದ್ದ ವರ್ಮ ಅವರು ತಂದೆ ಕೃಷ್ಣಮಾಚಾರ್ಯರು,  ಸಂಗೀತಗಾರರಾಗಿದ್ದರು. ತಾಯಿ ಜಯಲಕ್ಷ್ಮಿ ಅವರಿಗೆ ಜನಿಸಿದರು. ಅವರೂ ಕೂಡ ಚಿತ್ರ ಕಲಾವಿದರಾಗಿದ್ದರು.

ವರ್ಮ ಸಾಧನೆಗೆ ರಾಜ್ಯ ಲಲಿತ‌ಕಲಾ ಅಕಾಡೆಮಿ‌ ಪ್ರಶಸ್ತಿ, ರಾಜ್ಯೋತ್ಸವ ‌ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್‌ಗಾಂಧಿ‌ ಪ್ರಶಸ್ತಿ ಲಭಿಸಿದ್ದವು. 2011ರಲ್ಲಿ‌ ಬೆಂಗಳೂರು ‌ವಿಶ್ವವಿದ್ಯಾಲಯವು ವರ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.

ಬಿಕೆಎಸ್‌ ವರ್ಮಾ (BKS Varma) ಅವರ ಕಲಾಕೃತಿಗಳು ನಾಡಿನ ಗಡಿಯನ್ನೂ ಮೀರಿ ವಿಶ್ವವಿಖ್ಯಾತವಾಗಿದ್ದವು.  ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajanikanth) ಅವರು ತಮ್ಮ ರಾಘವೇಂದ್ರ ಸ್ವಾಮಿಗಳ ಬೃಹತ್‌ ವರ್ಣಚಿತ್ರವನ್ನು ಇವರಿಂದಲೇ ಕೇಳಿ ಬರೆಸಿಕೊಂಡಿದ್ದರು.

ರಜನಿಕಾಂತ್‌ ಅವರು ತಮ್ಮ ಚೆನ್ನೈಯಲ್ಲಿರುವ ಮನೆಯಲ್ಲಿ ಸ್ವಾಮಿ ರಾಘವೇಂದ್ರರ ಒಂದು ಬೃಹತ್‌ ವರ್ಣಚಿತ್ರ ಇರಬೇಕೆಂದು ಬಯಸಿದ್ದರು. ಇದಕ್ಕೆ ಸೂಕ್ತ ಕಲಾವಿದರಿಗಾಗಿ ಅವರು ಹೆಚ್ಚೇನೂ ಹುಡುಕಾಡಿರಲಿಲ್ಲ. ವರ್ಮಾ ಅವರ ದೇವಾನುದೇವತೆಗಳ ಚಿತ್ರಗಳು ಅವರ ಮನಸ್ಸನ್ನು ಆಗಲೇ ಸೆಳೆದಿದ್ದುದರಿಂದ, ವರ್ಮಾ ಅವರಿಂದಲೇ ಆ ಚಿತ್ರ ಬರೆಸಲು ಮುಂದಾದರು. ರಜನಿಕಾಂತ್‌ ಅವರ ಒತ್ತಾಯಕ್ಕೆ ಮಣಿದಿದ್ದ ವರ್ಮಾ, ಚೆನ್ನೈಯಲ್ಲಿದ್ದ ರಜನಿ ಮನೆಗೆ ಹೋಗಿ ಅಲ್ಲಿ ವರ್ಣಚಿತ್ರವನ್ನು ಬಿಡಿಸಿಕೊಟ್ಟು ಬಂದಿದ್ದರು. ಈ ಚಿತ್ರದ ಹಲವು ಆವೃತ್ತಿಗಳನ್ನು ನಂತರ ಅವರು ಕೆಲವು ಕಡೆ ಬಳಸಿಕೊಂಡಿದ್ದಾರೆ.

ರಜನಿಕಾಂತ್‌ ಅವರಂತೆಯೇ ತೆಲುಗಿನ ಖ್ಯಾತ ಹಾಸ್ಯ ಕಲಾವಿದ ಬ್ರಹ್ಮಾನಂದಂ ಅವರು ಕೂಡ ದೈವಭಕ್ತರಾಗಿದ್ದು, ವರ್ಮಾ ಅವರಿಂದ ತಮ್ಮ ಮನೆಯ ಹಾಲ್‌ನ ಗೋಡೆಗೆ ತಿರುಪತಿ ಶ್ರೀನಿವಾಸ ದೇವರ ಬೃಹತ್‌ ವರ್ಣಚಿತ್ರ ಮಾಡಿಸಿಕೊಂಡಿದ್ದರು. ಚಿತ್ರ ಪೂರ್ತಿಯಾದ ಬಳಿಕ ವರ್ಮಾ ಅವರನ್ನು ಮನೆಗೆ ಕರೆದು ಸನ್ಮಾನಿಸಿದ್ದರು.

ವರ್ಮಾ ಅವರು ಮಾಡುತ್ತಿದ್ದ ದೇವಾನುದೇವತೆಗಳ ಚಿತ್ರಗಳು ವಿಖ್ಯಾತವಾಗಿದ್ದವು. ಇವರು ಬಿಡಿಸಿದ ಅನೇಕ ಚಿತ್ರಗಳು ದೇಶದ ಗಡಿ ದಾಟಿ ಪಾಶ್ಚಾತ್ಯ ದೇಶಗಳಿಗೂ ಹೋಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣವಚನ ಡೌಟ್; ಮತ್ತೆ ಸಂಖ್ಯಾಬಲ ಇಲ್ಲ ಎಂದ ಗವರ್ನರ್!

ತಮಿಳುನಾಡು: TVK ಸರ್ಕಾರ ರಚನೆಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್; ನಾಳೆ ವಿಜಯ್ ಸಿಎಂ ಆಗಿ ಪದಗ್ರಹಣ!

ಯಡಿಯೂರಪ್ಪ ರಾಜಕೀಯ ಜೀವನಕ್ಕೆ 50 ವರ್ಷ ಪೂರ್ಣ: ಅಭಿಮಾನೋತ್ಸವ ಸಮಾರಂಭದಲ್ಲಿ ಅಮಿತ್ ಶಾ ಭಾಗಿ ಸಾಧ್ಯತೆ!

ಕೊನೆಗೂ ವಿಜಯ್​ಗೆ ಸಿಕ್ತು ಮ್ಯಾಜಿಕ್​ ನಂಬರ್: CPI, VCKಯಿಂದಲೂ ಬೆಂಬಲ; ಶೀಘ್ರ CM ಆಗಿ 'ದಳಪತಿ' ಪ್ರಮಾಣ!

ವಿಜಯ್ ಸಾಧನೆ ಅಚ್ಚರಿ ತಂದಿದೆ, ಆದ್ರೆ ಗ್ಯಾರಂಟಿಗಳಿಗೆ 6-7 ಲಕ್ಷ ಕೋಟಿ ರೂ ಬೇಕು, ಹಣ ಹೇಗೆ ಹೊಂದಿಸ್ತಾರೆ? ದೇವರೇ ಕಾಪಾಡಬೇಕು: HDK

SCROLL FOR NEXT