ರೋಡ್ ಶೋ ವೇಳೆ ಭದ್ರತಾ ನಿಯಮ ಉಲ್ಲಂಘಿಸಿ ಪ್ರಧಾನಿ ಮೋದಿಗೆ ಹಾರ ನೀಡುವಲ್ಲಿ ಯಶಸ್ವಿಯಾದ ಬಾಲಕ 
ರಾಜ್ಯ

ಹುಬ್ಬಳ್ಳಿ: ಬಾಲಕನೊಬ್ಬ ಪ್ರಧಾನಿ ಮೋದಿಗೆ ಹಾಕಿದ ಹಾರವನ್ನು ಪರೀಕ್ಷೆಗಾಗಿ ಎಫ್ಎಸ್ಎಲ್‌ಗೆ ರವಾನೆ

ನಿಯಮಾವಳಿ ಪ್ರಕಾರ, ವಿವರವಾದ ವಿಶ್ಲೇಷಣೆಗಾಗಿ ಹಾರವನ್ನು ಎಫ್‌ಎಸ್‌ಎಲ್ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಆದರೆ, ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಹುಬ್ಬಳ್ಳಿಯ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮತ್ತು ಮೋದಿ ಜೊತೆಗಿದ್ದ ಎಸ್‌ಪಿಜಿ ತಂಡಕ್ಕೆ ವರದಿ ಸಲ್ಲಿಸಲಾಗಿದೆ.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರೋಡ್‌ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯನ್ನು ಉಲ್ಲಂಘಿಸಿದ ಒಂದು ದಿನದ ಬಳಿಕ, ಸ್ಥಳೀಯ ಬಿಜೆಪಿ ಘಟಕ ಮತ್ತು ಎಸ್‌ಎಸ್‌ಕೆ ಸಮುದಾಯದ ಸದಸ್ಯರು ಬಾಲಕನನ್ನು ಬೆಂಬಲಿಸಿದ್ದಾರೆ. ಮೋದಿ ಹಾದು ಹೋಗುತ್ತಿದ್ದಾಗ ಬೆಂಗಾವಲು ಪಡೆಯಿದ್ದರೂ ಪ್ರಧಾನಿ ಮೋದಿ ಸಮೀಪಕ್ಕೆ ಬಂದಿದ್ದ ಬಾಲಕ, ಭದ್ರತಾ ಪಡೆಗಳು ಆತನನ್ನು ಹಿಡಿದು ದೂರ ಸರಿಯುವ ಮುನ್ನವೇ ಪ್ರಧಾನಿಗೆ ಹಾರ ನೀಡುವಲ್ಲಿ ಯಶಸ್ವಿಯಾದನು.

ನಿಯಮಾವಳಿ ಪ್ರಕಾರ, ವಿವರವಾದ ವಿಶ್ಲೇಷಣೆಗಾಗಿ ಹಾರವನ್ನು ಎಫ್‌ಎಸ್‌ಎಲ್ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಆದರೆ, ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಹುಬ್ಬಳ್ಳಿಯ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮತ್ತು ಮೋದಿ ಜೊತೆಗಿದ್ದ ಎಸ್‌ಪಿಜಿ ತಂಡಕ್ಕೆ ವರದಿ ಸಲ್ಲಿಸಲಾಗಿದೆ.

ವಿವಿಐಪಿ ಭೇಟಿಯ ಸಂದರ್ಭದಲ್ಲಿ ವರದಿಯಾಗುವ ಪ್ರತಿಯೊಂದು ಘಟನೆಯನ್ನು ವಿವರವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಅಧಿಕೃತವಾಗಿ ವರದಿ ಸಲ್ಲಿಸಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ಟಿಎನ್ಐಇಗೆ ತಿಳಿಸಿದ್ದಾರೆ.

'ಹಾನಿಕಾರಕ ರಾಸಾಯನಿಕಗಳು ಮತ್ತು ವಿಷಗಳಿಂದ ಕೂಡಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಲು ಮಾಲೆಯನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ಏಕೆಂದರೆ, ಅನೇಕ ವಿವಿಐಪಿ ದಾಳಿ ಪ್ರಕರಣಗಳಲ್ಲಿ ಮಕ್ಕಳನ್ನು ಆಮಿಷವಾಗಿ ಬಳಸಿಕೊಳ್ಳಲಾಗಿದೆ. ಪ್ರಧಾನಿ ಮತ್ತು ಇತರ ವಿವಿಐಪಿಗಳನ್ನು ರಕ್ಷಿಸುವ ಭದ್ರತಾ ಏಜೆನ್ಸಿಗಳು ಯಾವುದೇ ಬೆದರಿಕೆ ಅಥವಾ ಯಾರಾದರೂ ರೆಡ್ ಝೋನ್‌ಗೆ ಬಂದರೆ ಶೂಟ್ ಮಾಡುವ ಆದೇಶವನ್ನು ಹೊಂದಿವೆ' ಎಂದು ಅಧಿಕಾರಿ ಹೇಳಿದರು.

ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಇದು ಮೋದಿ ಮೇಲಿನ ಹುಡುಗನ ಪ್ರೀತಿಯ ಪ್ರದರ್ಶನದಂತೆ ತೋರುತ್ತಿದೆ. ಹುಡುಗ ಪ್ರಧಾನಿಯ ಅಭಿಮಾನಿ ಮತ್ತು ಅವನು ಹತ್ತಿರವಾಗಲು ಪ್ರಯತ್ನಿಸಿದನು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ಮತ್ತು ಎಸ್‌ಎಸ್‌ಕೆ ಸಮುದಾಯದ ಸದಸ್ಯರು ಬಾಲಕನನ್ನು ಸನ್ಮಾನಿಸಿದ ಬಗ್ಗೆ ಹುಬ್ಬಳ್ಳಿಯ ಬಿಜೆಪಿ ಮುಖಂಡರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

'ಬಾಲಕ ತನ್ನ ನೆಚ್ಚಿನ ವ್ಯಕ್ತಿಗೆ ಹಾರವನ್ನು ನೀಡಲು ಬಯಸಿದನು. ಇದನ್ನು ಸಾಮಾನ್ಯ ಪ್ರಕರಣವೆಂದು ಪರಿಗಣಿಸಬೇಕು ಮತ್ತು ಭದ್ರತೆಯ ಉಲ್ಲಂಘನೆ ಎಂದು ಪರಿಗಣಿಸಬಾರದು ಎಂದು ಸಮುದಾಯವು ಪೊಲೀಸರನ್ನು ವಿನಂತಿಸುತ್ತಿದೆ' ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ಹೇಳಿದರು.

ಮತ್ತೋರ್ವ ನಾಯಕ, ಪಕ್ಷವು ಹುಡುಗ ಅಥವಾ ಅವನ ಕುಟುಂಬದೊಂದಿಗೆ ನಿಲ್ಲುವ ಯಾವುದೇ ಮಾರ್ಗವಿಲ್ಲ. ಇದು ಭದ್ರತಾ ಉಲ್ಲಂಘನೆಯಾಗಿದೆ. ಸಾವಿರಾರು ಮೋದಿ ಅಭಿಮಾನಿಗಳು ಬ್ಯಾರಿಕೇಡ್‌ಗಳು, ಮನೆಗಳು, ಕಚೇರಿಗಳು ಮತ್ತು ಟೆರೇಸ್‌ಗಳ ಹಿಂದೆ ತಾಳ್ಮೆಯಿಂದ ಅವರನ್ನು ಸ್ವಾಗತಿಸಲು ಕಾಯುತ್ತಿದ್ದರಿಂದ ಈ ರೀತಿಯ ಘಟನೆಗಳು ಸಂಭವಿಸಬಾರದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT