60 ಸೆಕೆಂಡ್ ಗಳಲ್ಲಿ ಗಿಡ ನೆಟ್ಟು ದಾಖಲೆ ನಿರ್ಮಾಣ 
ರಾಜ್ಯ

ವಿಶ್ವ ಪರಿಸರ ದಿನಕ್ಕೆ 1 ನಿಮಿಷದಲ್ಲಿ 1 ಸಾವಿರ ಸಸಿಗಳನ್ನು ನೆಟ್ಟು ದಾಖಲೆ

ನಿನ್ನೆ ಸೋಮವಾರ ಜೂನ್ 5 ವಿಶ್ವ ಪರಿಸರ ದಿನ 60 ಸೆಕೆಂಡುಗಳಲ್ಲಿ ಒಟ್ಟು 1,000 ಹಣ್ಣಿನ ಗಿಡಗಳನ್ನು ಬೆಂಗಳೂರು ನಗರದಲ್ಲಿ ನೆಟ್ಟು ದಾಖಲೆ ನಿರ್ಮಿಸಲಾಗಿದೆ.

ಬೆಂಗಳೂರು: ನಿನ್ನೆ ಸೋಮವಾರ ಜೂನ್ 5 ವಿಶ್ವ ಪರಿಸರ ದಿನ 60 ಸೆಕೆಂಡುಗಳಲ್ಲಿ ಒಟ್ಟು 1,000 ಹಣ್ಣಿನ ಗಿಡಗಳನ್ನು ಬೆಂಗಳೂರು ನಗರದಲ್ಲಿ ನೆಟ್ಟು ದಾಖಲೆ ನಿರ್ಮಿಸಲಾಗಿದೆ. 

ಬೆಂಗಳೂರಿನ ಜಯನಗರ ಅಗ್ನಿಶಾಮಕ ಠಾಣೆಯಿಂದ (ಡೈರಿ ವೃತ್ತದ ಬಳಿ) ಹಂತ-II ರ ಅಂಡರ್ ಗ್ರೌಂಡ್ ಕಾರಿಡಾರ್‌ನ ವೆಲ್ಲಾರಾ ಜಂಕ್ಷನ್‌ವರೆಗೆ BMRCL ಗಾಗಿ ಅಫ್ಕಾನ್ಸ್ (AFCONS) ಕೆಲಸ ನಿರ್ವಹಿಸುತ್ತಿದ್ದು, ಇತರ ಸಂಸ್ಥೆಗಳ ಬೆಂಬಲದೊಂದಿಗೆ ಬೆಳಿಗ್ಗೆ 10 ರಿಂದ 10.01 ರವರೆಗೆ ಗಿಡ ನೆಡುವ ಕೆಲಸವನ್ನು ಮಾಡಿದೆ.

ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರಾಷ್ಟ್ರೀಯ ಮಿಲಿಟರಿ ಶಾಲಾ ಆವರಣದ ಹೊರವಲಯದಲ್ಲಿ ಮತ್ತು ಸೇನಾ ಪೊಲೀಸ್ ಕೇಂದ್ರ ಮತ್ತು ಶಾಲೆಯ ಒಳಗೆ ಮರಗಳನ್ನು ನೆಡಲಾಗಿದೆ.

“ಇದಕ್ಕೆ ಎರಡು ದಿನಗಳ ತಯಾರಿ ನಡೆಸಲಾಗಿತ್ತು. ಎಲ್ಲ ಸಸಿಗಳಿಗೆ ಹೊಂಡ ತೋಡಿ ಸಿದ್ಧವಾಗಿ ಇಡಬೇಕಿತ್ತು. ಪ್ರತಿ ನಿಯೋಜಿತ ಒಂದು ಸಸಿಯೊಂದಿಗೆ ಒಟ್ಟು ಸಾವಿರ ಜನರು ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು ಎಂದು ಹೇಳಿದರು. ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆಯಲು ಎಎಫ್‌ಕಾನ್ಸ್ ಸುಮಾರು 3 ಲಕ್ಷ ರೂಪಾಯಿ ವಿನಿಯೋಗಿಸಿತ್ತು. 

ಹಲಸು (200), ತಬೆಬುಯಾ ರೋಸಿಯಾ (100), ಬಾದಾಮ್ ಮರ (150), ಜಾಮೂನ್ (200), ಮಾವು (150) ಮತ್ತು ಅಂಜೂರ, ಜಕರಂಡಾ, ಸಿಮರೂಬಾ, ಪೊಂಗಮಿಯಾ ತಲಾ 50 ಗಿಡಗಳನ್ನು ನೆಟ್ಟಿದ್ದೇವೆ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದರು. ನಿಂಬೆ, ದಾಳಿಂಬೆ, ಆಮ್ಲಾ ಮತ್ತು ಪೇರಳದ ಗಿಡವನ್ನು ಸಹ ನೆಡಲಾಯಿತು. ನಿರ್ಮಾಣ ಕಾರ್ಯ ಮುಗಿಯುವವರೆಗೆ AFCONS ಅವುಗಳನ್ನು ನಿರ್ವಹಿಸುತ್ತದೆ. ನಂತರ, ಶಾಲೆಗಳು ಅವುಗಳನ್ನು ನೋಡಿಕೊಳ್ಳುತ್ತವೆ ಎಂದು ಇನ್ನೊಬ್ಬ ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ.

ಯೋಜನೆಗಳು ಮತ್ತು ಯೋಜನಾ ವಿಭಾಗದ ನಿರ್ದೇಶಕ ಡಿ ರಾಧಾಕೃಷ್ಣ ರೆಡ್ಡಿ, ಕಾರ್ಯನಿರ್ವಾಹಕ ನಿರ್ದೇಶಕ (ಸಿವಿಲ್), ಮೇಜರ್ ವಿಕಾಸ್ ಸರೋಹ, ಆರ್‌ಎಂಎಸ್‌ನ ಅಧಿಕೃತ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿ ಎಸ್ ಹೆಗರಡ್ಡಿ ಸೇರಿದಂತೆ ಬಿಎಂಆರ್‌ಸಿಎಲ್ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT