ಸಾಂದರ್ಭಿಕ ಚಿತ್ರ 
ರಾಜ್ಯ

ಅಕ್ಕಿ ತಿಕ್ಕಾಟ: ಮುಕ್ತ ಮಾರುಕಟ್ಟೆ, ರೈಸ್ ಮಿಲ್ ಗಳಲ್ಲಿ ಖರೀದಿಸುವ ಆಯ್ಕೆಯೊಂದೆ ಬಾಕಿ!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಗಾಗಿ ದೇಶಾದ್ಯಂತ ಗೋದಾಮುಗಳಲ್ಲಿ ಅಕ್ಕಿಗಾಗಿ ತೀವ್ರವಾಗಿ ಹುಡುಕಾಟ ನಡೆಸುತ್ತಿದೆ. ಆದರೆ ಸರ್ಕಾರದ ಮುಂದೆ ಇರುವ ತಕ್ಷಣದ ಆಯ್ಕೆಗಳೆಂದರೆ ಅಕ್ಕಿ ಗಿರಣಿಗಳಲ್ಲಿ ಮತ್ತು ಮುಕ್ತ ಮಾರುಕಟ್ಟೆಗಳು.

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಗಾಗಿ ದೇಶಾದ್ಯಂತ ಗೋದಾಮುಗಳಲ್ಲಿ ಅಕ್ಕಿಗಾಗಿ ತೀವ್ರವಾಗಿ ಹುಡುಕಾಟ ನಡೆಸುತ್ತಿದೆ. ಆದರೆ ಸರ್ಕಾರದ ಮುಂದೆ ಇರುವ ತಕ್ಷಣದ ಆಯ್ಕೆಗಳೆಂದರೆ ಅಕ್ಕಿ ಗಿರಣಿಗಳಲ್ಲಿ ಮತ್ತು ಮುಕ್ತ ಮಾರುಕಟ್ಟೆಗಳು.

ಆದರೆ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ವಿಧಿಸುವ 30-36 ರೂಪಾಯಿಗಳ ಬದಲಿಗೆ ಸರ್ಕಾರವು ಪ್ರತಿ ಕೆಜಿ ಅಕ್ಕಿಗೆ 50-60 ರೂಪಾಯಿಗಳನ್ನು ಪಾವತಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಇದು ಉಚಿತ ಅಕ್ಕಿ ಯೋಜನೆಗೆ ತಿಂಗಳಿಗೆ 600-800 ಕೋಟಿ ರೂಪಾಯಿಗಳಿಂದ 1,500-1,600 ಕೋಟಿ ರೂಪಾಯಿಗಳಿಗೆ ಬಜೆಟ್ ವೆಚ್ಚ ಹೆಚ್ಚಿಸಬಹುದು ಎಂದು ಹಲವು ವರ್ಷಗಳಿಂದ ಅಕ್ಕಿಯನ್ನು ಸಂಗ್ರಹಿಸುತ್ತಿದ್ದ ಮೂಲವೊಂದು ತಿಳಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕವು ಹತಾಶವಾಗಿರುವುದರಿಂದ, ಅಕ್ಕಿ ಗಿರಣಿ ಮಾಲೀಕರು ಬೆಲೆಗಳನ್ನು ಹೆಚ್ಚಿಸುವ ಮೂಲಕ ತ್ವರಿತ ಲಾಭ ಗಳಿಸಬಹುದು. ಹೀಗಾಗಿ ಅವರನ್ನು ದೂಷಿಸಲು ಸಾಧ್ಯವಿಲ್ಲ ಎನ್ನಲಾಗಿದೆ.

ಎಫ್‌ಸಿಐಗೆ ಮಾತ್ರ ಅಕ್ಕಿ ಸಂಗ್ರಹಿಸುವ ಪರಂಪರೆ ಇದೆ. ಅವರು ಧಾನ್ಯವನ್ನು ಪಡೆಯಲು ರಾಜ್ಯ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ ಮತ್ತು ಇದು ಸಂಪ್ರದಾಯವಾಗಿದೆ. ಕರ್ನಾಟಕ ಸರ್ಕಾರವೂ ಇದೇ ರೀತಿ ಮಾಡಬೇಕು. ಆದರೆ ರಬಿ ಋತುವಿನ ಭತ್ತದ ಕೊಯ್ಲು ಬಹಳ ಹಿಂದೆಯೇ ಇರುವುದರಿಂದ ಮತ್ತು ಮುಂದಿನ ಕಟಾವು ಅಕ್ಟೋಬರ್‌ನಲ್ಲಿ ಆಗಲಿದೆ. ಸದ್ಯ  ಖಾರಿಫ್ ಅಕ್ಕಿಯಾಗಿರುವುದರಿಂದ ಈಗ ಏನೂ ಮಾಡಲು ಸಾಧ್ಯವಿಲ್ಲ. ಎಫ್‌ಸಿಐಗಿಂತ ಭಿನ್ನವಾಗಿ, ಬೆಳೆಗಾರರಿಂದ ನೇರವಾಗಿ ಅಕ್ಕಿ ಸಂಗ್ರಹಿಸುವ ಪರಿಣತಿಯನ್ನು ಕರ್ನಾಟಕ ಹೊಂದಿಲ್ಲ ಎಫ್‌ಸಿಐ ಮೂಲಗಳು ತಿಳಿಸಿವೆ.

ಅಕ್ಕಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಪಡೆಯುವುದು ಮತ್ತೊಂದು ಆಯ್ಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ, ಆದರೆ ಅನೇಕ ದೇಶಗಳಲ್ಲಿ ಬಳಸಲಾಗುವ ಅಕ್ಕಿ ರಾಜ್ಯದಲ್ಲಿ ಬಳಸುವ ಗುಣಮಟ್ಟವನ್ನು ಹೊಂದಿಲ್ಲ. ಎಫ್‌ಸಿಐ ಮಾಜಿ ಅಧ್ಯಕ್ಷ ಡಿವಿ ಪ್ರಸಾದ್ ಹೇಳಿದ್ದಾರೆ.

ಚೀನೀ, ಮಲಯ ಮತ್ತು ಆಗ್ನೇಯ ಏಷ್ಯನ್ನರು ಬಳಸುವ ಅಕ್ಕಿ ನಮ್ಮ ಅಕ್ಕಿಗಿಂತ ಭಿನ್ನವಾಗಿದೆ ಮತ್ತು ಅದು ನಮ್ಮ ರುಚಿಗೆ ಸರಿಹೊಂದುವುದಿಲ್ಲ ಎಂದು ಹೇಳಿದರು. ತೆಲಂಗಾಣ ಹೆಚ್ಚಿನ ಅಕ್ಕಿಯನ್ನು ಉತ್ಪಾದಿಸುತ್ತದೆ, ಆದರೆ ಅದರಲ್ಲಿ ಹೆಚ್ಚಿನ ಭಾಗವನ್ನು ಬೇಯಿಸಿದ ಅಕ್ಕಿಯಾಗಿ ಪರಿವರ್ತಿಸಲಾಗುತ್ತದೆ. ಹೆಚ್ಚಿನ ಮಿಲ್‌ಗಳು ಉತ್ತಮ ಲಾಭವನ್ನು ಮಾಡಿಕೊಳ್ಳಲು ಆವಿಯಲ್ಲಿ ಬೇಯಿಸಿದ ಅಥವಾ ಬೇಯಿಸಿದ ಅಕ್ಕಿಯನ್ನು ಉತ್ಪಾದಿಸುತ್ತವೆ ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ, ಅಕ್ಕಿ ಪೂರೈಕೆಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಯಾವುದೇ ಗಂಭೀರ ಸಮಸ್ಯೆ ಇಲ್ಲ. ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಸ್ವಲ್ಪ ದಿನದಲ್ಲೇ ಅದನ್ನು ಪರಿಹರಿಸುತ್ತೇವೆ ಆದರೆ ಸ್ವಲ್ಪ ವಿಳಂಬವಾಗಬಹುದು. ನಾವು ಎನ್‌ಸಿಸಿಎಫ್ ಎಂಬ ಸರ್ಕಾರಿ ಏಜೆನ್ಸಿಯನ್ನು ಗುರುತಿಸಿದ್ದೇವೆ, ಅವರ ಮೂಲಕ ನಾವು ಟೆಂಡರ್‌ಗಳನ್ನು ಕರೆಯುವ ಮೂಲಕ ನೇರವಾಗಿ ಅಕ್ಕಿಯನ್ನು ಪಡೆಯುತ್ತೇವೆ ಇದು ಉತ್ತಮ ಪರಿಹಾರವಾಗಿದೆ. ಸಹಕಾರಿ ಒಕ್ಕೂಟಗಳೊಂದಿಗೆ ವ್ಯವಹರಿಸುವುದು ಕಠಿಣವಾಗಬಹುದು ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT