ರಾಜ್ಯ

ಬೀದರ್: ಗುರುನಾನಕ್ ಝರಾ ಗುರುದ್ವಾರಕ್ಕೆ ಅಮಿತ್ ಶಾ ಭೇಟಿ, ಪ್ರಾರ್ಥನೆ

Nagaraja AB

ಬೀದರ್: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರಿಂದು ಬೀದರ್ ನಲ್ಲಿಂದು ಗುರುನಾನಕ್ ಝರಾ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ,  ಸಿಖ್ ಧರ್ಮದ ಪಂಜ್ ಪ್ಯಾರೆಗಳಲ್ಲಿ ಒಬ್ಬರಾದ ಬಾಯಿ ಸಾಹಿಬ್ ಸಿಂಗ್ ಇಲ್ಲಿ ಜನಿಸಿದರು. ಈ ಗುರುದ್ವಾರ ದೇಶದ ಎರಡನೇ  ಪಂಜಾ ಸಾಹಿಬ್ ಆಗಿದೆ. ವಾಹೆಗುರು  ದೇಶವಾಸಿಗಳಿಗೆ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದ್ದಾರೆ.

ನಂತರ ಬೀದರ್ ನ ಬಸವ ಕಲ್ಯಾಣದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಪಾಲ್ಗೊಂಡರು. ಸಂಜೆ ದೇವನಹಳ್ಳಿಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ, ತದನಂತರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

SCROLL FOR NEXT