ರಾಜ್ಯ

ಸ್ಯಾಂಕಿ ಯೋಜನೆ ಹಿಂಪಡೆಯುವಂತೆ ಒತ್ತಾಯಿಸಿ ಅಚ್ಚರಿಯ ಪ್ರತಿಭಟನೆ ಆರಂಭಿಸಿದ ಬೆಂಗಳೂರು ನಿವಾಸಿಗಳು

Ramyashree GN

ಬೆಂಗಳೂರು: ಸ್ಯಾಂಕಿ ಯೋಜನೆ ಹಿಂಪಡೆಯುವಂತೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಮಲ್ಲೇಶ್ವರಂ ಮತ್ತು ಸುತ್ತಮುತ್ತಲಿನ ನಿವಾಸಿಗಳು ಇತರ ಕಾರ್ಯಕರ್ತರೊಂದಿಗೆ ಬೆಳಿಗ್ಗೆ ಸ್ಯಾಂಕಿ ರಸ್ತೆಯಲ್ಲಿ ಹಠಾತ್ ಪೋಸ್ಟರ್ ಪ್ರತಿಭಟನೆ ನಡೆಸಿದರು. 

ಮನೆಗಳಲ್ಲಿ ‘ಸೇವ್ ಸ್ಯಾಂಕಿ’ ಎಂಬ ಬ್ಯಾನರ್ ಇದ್ದು, ಮಕ್ಕಳು ಪೋಸ್ಟರ್‌ಗಳನ್ನು ರಚಿಸಿದ್ದಾರೆ. ನೂರಾರು ಪಕ್ಷಿಗಳಿಗೆ ನೆಲೆಯಾಗಿರುವ 400ಕ್ಕೂ ಹೆಚ್ಚು ಪೇಪರ್ ಮಲ್ಬರಿ (Paper mulberry) ಮರಗಳನ್ನು ಕಡಿಯುವುದರ ಜೊತೆಗೆ, ಇತರೆ ಹಲವಾರು ಮರಗಳನ್ನು ಕಡಿಯುವುದು ಈ ಯೋಜನೆಯಲ್ಲಿದೆ ಎಂದು ನಿವಾಸಿಗಳು ದೂರಿದರು.

ಇದಲ್ಲದೆ, ಇತ್ತೀಚಿನ ಬಿಬಿಎಂಪಿ ಬಜೆಟ್‌ನಲ್ಲಿ ಸ್ಯಾಂಕಿ ಟ್ಯಾಂಕ್ ಅನ್ನು 'ಟೂರಿಸ್ಟ್ ಪ್ಲಾಜಾ' ಆಗಿ ಪರಿವರ್ತಿಸಲು ಹಣ ಮಂಜೂರು ಮಾಡಿದ್ದು ಸಹ ನಿವಾಸಿಗಳನ್ನು ಕೆರಳಿಸಿದೆ.

'ಇದು ಸ್ಯಾಂಕಿ ಟ್ಯಾಂಕ್‌ನ ಪರಿಸರವನ್ನು ಮತ್ತಷ್ಟು ನಾಶಪಡಿಸುತ್ತದೆ ಮತ್ತು ಕಾಂಕ್ರೀಟ್ ಕೆಲಸ ಮತ್ತು ಅದರ ಮೇಲೆ ನಿರ್ಮಿಸಲಾದ ರಚನೆಗಳಿಂದ ಉಷ್ಣತೆಯ ಏರಿಕೆಗೆ ಕಾರಣವಾಗುತ್ತದೆ. ಸರೋವರದ ಅಂಚು ಮತ್ತು ಯಾವುದೇ ನಿರ್ಮಾಣದ ನಡುವೆ 30 ಮೀಟರ್ ಅಂತರ ಇರಬೇಕು ಎಂದು ಎನ್‌ಜಿಟಿ ತೀರ್ಪು ಸ್ಪಷ್ಟವಾಗಿ ಹೇಳುತ್ತದೆ. ಇದನ್ನು ಹಲವು ಬಾರಿ ಉಲ್ಲಂಘಿಸಲಾಗಿದೆ’ ಎಂದು ಸದಾಶಿವನಗರ ನಿವಾಸಿ ಕಿಮ್ಸುಕಾ ಹೇಳಿದರು. 

'ಬಿಬಿಎಂಪಿ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಬಯಸುತ್ತದೆ ಎಂಬ ಸುದ್ದಿಯಿಂದ ನಾವು ವಿಚಲಿತರಾಗಿದ್ದೇವೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಯಾಂಕಿಯ ನಾಗರಿಕರಾದ ಪ್ರೀತಿ ಸುಂದರರಾಜನ್ ಹೇಳಿದರು.

SCROLL FOR NEXT