ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಜನ 
ರಾಜ್ಯ

ಬರಗಾಲ ಆವರಿಸುತ್ತಿದ್ದಂತೆ ಜೀವನೋಪಾಯಕ್ಕಾಗಿ ನಗರಕ್ಕೆ ಜನರ ವಲಸೆ: ಗದಗ ಜಿಲ್ಲೆಯ ಹಳ್ಳಿಗಳು ಖಾಲಿಯೋ ಖಾಲಿ!

ಭೀಕರ ಬರಗಾಲವು ಭೂಮಿಯನ್ನು ಬಂಜರುಗೊಳಿಸುತ್ತಿದ್ದು, ಗದಗ ಜಿಲ್ಲೆಯ ಹಳ್ಳಿಗಳು ವೃದ್ಧಾಶ್ರಮಗಳ ರೀತಿ ಕಾಣುತ್ತಿವೆ.  ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಅನೇಕ ರೈತರು ಮತ್ತು ದಿನಗೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

ಗದಗ: ಭೀಕರ ಬರಗಾಲವು ಭೂಮಿಯನ್ನು ಬಂಜರುಗೊಳಿಸುತ್ತಿದ್ದು, ಗದಗ ಜಿಲ್ಲೆಯ ಹಳ್ಳಿಗಳು ವೃದ್ಧಾಶ್ರಮಗಳ ರೀತಿ ಕಾಣುತ್ತಿವೆ. ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಅನೇಕ ರೈತರು ಮತ್ತು ದಿನಗೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

ಈ ವಲಸೆ ಹೋಗುವುದು ಪ್ರತಿ ವರ್ಷವೂ ಪುನರಾವರ್ತನೆಯಾಗುತ್ತಿದೆ, ಆದರೆ ಈ ವರ್ಷ ಪರಿಸ್ಥಿತಿ ಗಂಭೀರವಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಲಸೆ  ಕಂಡುಬರುತ್ತಿದೆ. ಮಾನ್ಸೂನ್ ವಿಫಲವಾದ ಕಾರಣ ಕೃಷಿ ಕೆಲಸಗಳು ಬೇಗನೆ ಮುಗಿದುಹೋದವು, ಕೆಲಸ ಮಾಡಬಹುದಾದ ವಯಸ್ಸಿನ ಜನರ ವಲಸೆಯು ಹೆಚ್ಚಾಗತೊಡಗಿತು.

ಇತರ ವರ್ಷಗಳಲ್ಲಿ, ಅವರು ಅಕ್ಟೋಬರ್ ಮತ್ತು ನವೆಂಬರ್ ವರೆಗೆ ಕೃಷಿ ಕೆಲಸ ಮುಂದುವರೆಸುತ್ತಿದ್ದರು,  ಆದರೆ  ಮಳೆಯ ಕೊರತೆಯಿಂದಾಗಿ ಸದ್ಯ  ಅವರಿಗೆ ಈಗ ಕೆಲಸವಿಲ್ಲ. ಹಾಗಾಗಿ ಉದ್ಯೋಗ ಅರಸಿ ಗೋವಾ, ಮಂಗಳೂರು, ಪುಣೆ, ಬೆಂಗಳೂರು ನಗರಗಳಿಗೆ ತೆರಳುತ್ತಿದ್ದಾರೆ.

ಜಿಲ್ಲೆಯ ಲಕ್ಷ್ಮೇವಾರ, ಶಿರಹಟ್ಟಿ, ಮುಂಡರಗಿ, ಗಂಜೇಂದ್ರಗಡ ಮತ್ತು ನರಗುಂದ ತಾಲೂಕುಗಳು ಹಲವು ತಾಂಡಾಗಳನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ನಿತ್ಯ ನಗರಗಳಿಗೆ ವಲಸೆ ಹೋಗುತ್ತಾರೆ.  ಗದಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಪುನರಾರಂಭಗೊಂಡಾಗ ಹಿಂತಿರುಗುತ್ತಾರೆ.

ನನ್ನ ಹೆಂಡತಿ ಮತ್ತು ಇಬ್ಬರು ಸಹೋದರಿಯರೊಂದಿಗೆ ನಾವು ಐದು ಜನರ ಕುಟುಂಬ ಉದ್ಯೋಗ ಅರಸಿ ದೊಡ್ಡ ನಗರಕ್ಕೆ ಹೋಗುತ್ತಿದ್ದೇವೆ. ಕಳೆದ ಎರಡು ತಿಂಗಳಿಂದ ಇಲ್ಲಿ ಸುಮ್ಮನೆ ಕುಳಿತಿದ್ದೇವೆ. ಮಂಗಳೂರಿಗೆ ಅಥವಾ ಬೆಂಗಳೂರಿಗೆ ಹೋದರೆ ನಮಗೆ ದಿನಕ್ಕೆ 700-800 ರೂ. ಸಿಗುತ್ತದೆ.  ಇಲ್ಲಿ ನಮಗೆ 250-300 ರೂ. 300 ರೂಪಾಯಿ ಸಿಕ್ಕರೂ ಪರವಾಗಿಲ್ಲ, ನಾವು ಕೆಲಸ ಮಾಡುತ್ತೇವೆ ಆದರೆ ಈಗ ನಮಗೆ ಇಲ್ಲಿ ಕೆಲಸವಿಲ್ಲ.

ನಾವು ಕೇವಲ ಸರ್ಕಾರದ ಖಾತರಿಗಳ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ಎಲ್ಲಾ ಐದು ಖಾತರಿಗಳು ಕಾರ್ಯರೂಪಕ್ಕೆ ಬಂದರೆ ಮತ್ತು ಮುಂದಿನ ದಿನಗಳಲ್ಲಿ ಮಳೆಯಾದರೆ ನಾವು ಖಂಡಿತವಾಗಿಯೂ ಹಿಂತಿರುಗುತ್ತೇವೆ ಎಂದು ಗದಗ ಸಮೀಪದ ಮುಳಗುಂದದ ಶಾಂತವೀರಪ್ಪ ಹುಯಿಲಗೋಳ ತಿಳಿಸಿದ್ದಾರೆ.

ನಾವು ಅನೇಕ ಮಾನವ ದಿನಗಳನ್ನು (ನರೇಗಾ ಯೋಜನೆಯಡಿ) ರಚಿಸಿದ್ದೇವೆ, ಆದರೆ ಇನ್ನೂ ಕೆಲವರು ವಲಸೆ ಹೋಗುತ್ತಿದ್ದಾರೆ. ನಮ್ಮ ಸಿಬ್ಬಂದಿ ಹಲವರಿಗೆ ಮನವರಿಕೆ ಮಾಡಿಕೊಟ್ಟು ವಲಸೆ ಹೋಗದಂತೆ ತಡೆದಿದ್ದಾರೆ ಎಂದು ಗದಗ ಜಿಲ್ಲಾ ಪಂಚಾಯಿತಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭಾ ಚುನಾವಣೆ 2025: Exit Poll Results ಬಹಿರಂಗ; ಯಾರಿಗೆ ಎಷ್ಟು ಸ್ಥಾನ?- ಇಲ್ಲಿದೆ ಮಾಹಿತಿ

Red Fort blast: ಮೃತರ ಸಂಬಂಧಿಕರಿಗೆ ರೂ.10 ಲಕ್ಷ, ಗಂಭೀರ ಗಾಯಾಳುಗಳಿಗೆ ರೂ. 2 ಲಕ್ಷ ಪರಿಹಾರ ಘೋಷಿಸಿದ ರೇಖಾಗುಪ್ತಾ!

Delhi Blast: ಆಪರೇಷನ್ ಸಿಂಧೂರ್ ಗೆ ಸೇಡು? 20 ಟೈಮರ್, 3000 ಕೆಜಿ ಸ್ಫೋಟಕ..; ಉಗ್ರರ ಯೋಜನೆ ಕಾರ್ಯಗತವಾಗಿದ್ದರೆ ಅತಿದೊಡ್ಡ ಭಯೋತ್ಪಾದಕ ದಾಳಿ!

Delhi blast ಖಂಡಿಸಿದ ವಿಶ್ವ ನಾಯಕರು; ಅಮೆರಿಕ, ಚೀನಾ ಸೇರಿ ವಿವಿಧ ದೇಶಗಳಿಂದ ಕಳವಳ

Delhi Blast: ದೇಹದ ಮಾದರಿ ಮ್ಯಾಚ್ ಮಾಡುವಂತೆ ವಿಧಿವಿಜ್ಞಾನ ತಜ್ಞರಿಗೆ ಅಮಿತ್ ಶಾ ಸೂಚನೆ

SCROLL FOR NEXT