ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಮತ ಚಲಾಯಿಸುವಾಗ ಬೀಪ್ ಸೌಂಡ್ ಕೇಳಿಸಲಿಲ್ಲ; ಮತದಾರರ ಆರೋಪ

ಮತದಾನ ಮಾಡುವಾದ ಬೀಪ್ ಸೌಂಡ್ ಕೇಳಿ ಬರಲಿಲ್ಲ ಎಂದು ಹಲವು ಮತದಾರರು ಆರೋಪ ಮಾಡಿದ್ದಾರೆ.

ಬೆಂಗಳೂರು: ಮತದಾನ ಮಾಡುವಾದ ಬೀಪ್ ಸೌಂಡ್ ಕೇಳಿ ಬರಲಿಲ್ಲ ಎಂದು ಹಲವು ಮತದಾರರು ಆರೋಪ ಮಾಡಿದ್ದಾರೆ.

ಹಲಸೂರಿನ ಕೇಂಬ್ರಿಡ್ಜ್ ರಸ್ತೆಯ ಸೇಂಟ್ ಆನ್ಸ್ ಶಾಲೆಯಲ್ಲಿ ಮತ ಚಲಾಯಿಸಿದ ವಿನ್ಸೆಂಟ್ ಪಿಂಟೋ ಎಂಬುವವರು ಮಾತಾಡಿ, ಮತದಾನದ ವೇಳೆ ಬಟನ್ ಒತ್ತಿದ 7 ಸೆಕೆಂಡ್ ಗಳ ಕಾಲ ಬೀಪ್ ಸೌಂಡ್ ಕೇಳಿ ಬರಬೇಕು. ಇದಕ್ಕಾಗಿ ನಾನು ಕಾದು ನಿಂತಿದ್ದೆ. ಆದರೆ, ಶಬ್ಧ ಬರಲಿಲ್ಲ. ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ನೀಡಿದೆ. ಬಳಿಕ ಅವರು ಎರಡನೇ ಬಾರಿ ಮತ ಚಲಾಯಿಸುವಂತೆ ಸೂಚಿಸಿದರು. ಮತ್ತೆ ಒತ್ತಿದೆ. ನಂತರವೂ ಸೌಂಡ್ ಬರಲಿಲ್ಲ. ನಂತರ ಯಂತ್ರ ಪರಿಶೀಲಿಸಿದ ಅಧಿಕಾರಿಗಳು, ಮೂರನೇ ಬಾರಿ ಒತ್ತುವಂತೆ ತಿಳಿಸಿದರು. ಈ ವೇಳೆ ಸೌಂಡ್ ಬಂದಿತ್ತು. ನಾನು ನಿವೃತ್ತ ಎಲೆಕ್ಟ್ರಾನಿಕ್ಸ್ ಇಂಜಿನಿಯರ್, ನನಗಿಂತ ಮೊದಲು ಇನ್ನೂ 10-12 ಜನರು ಮತ ಚಲಾಯಿಸಿದ್ದಾರೆ, ಅವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದರು. ಅವರು ಮತ ಚಲಾಯಿಸುವಾಗ ಸೌಂಡ್ ಬಂದಿರಲಿಲ್ಲ. ಇದು ಉದ್ದೇಶಪೂರ್ವಕ ವಂಚನೆಯಂತೆ ಕಾಣುತ್ತಿದೆ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಧ್ವನಿ ಎತ್ತಿದ್ದೇನೆಂದು ಹೇಳಿದ್ದಾರೆ.

ಬೆಂಗಳೂರು ಉತ್ತರದ ಕೆಂಗೇರಿಯಲ್ಲಿರುವ ಎಸ್‌ಬಿಎಸ್‌ ಬಂಡಿಮಠ ಶಾಲೆಯಲ್ಲಿ ಮತದಾನ ಮಾಡಿದ ಎಸ್‌ ಪರಮೇಶ್ವರಿ ಅವರು ಮಾತನಾಡಿ, ಮತದಾನ ಮಾಡುವಾಗ ಬೀಪ್‌ ಶಬ್ದ ಕೇಳಲಿಲ್ಲ. ಈ ಬಗ್ಗೆ ಮತಗಟ್ಟೆ ಅಧಿಕಾರಿಗೆ ದೂರು ನೀಡಿದೆ, ಆದರೆ ಸಬ್-ಇನ್‌ಸ್ಪೆಕ್ಟರ್ ಮತ್ತು ಪೋಲ್ ಅಧಿಕಾರಿಗಳು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದರು, ಮತ ಚಲಾಯಿಸಬೇಕೆಂದರೆ ಮಾಡಿ, ಇಲ್ಲದಿದ್ದರೆ ನೀವು ಹೋಗಿ ಎಂದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶೈಲಾ ಅವರು ಸಿವಿ ರಾಮನ್ ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ, ಮತಯಂತ್ರದ ಬಟನ್ ಒತ್ತಿ 10-15 ಸೆಕೆಂಡುಗಳ ಕಾಲವಾದರೂ ಬೀಪ್ ಸೌಂಡ್ ಕೇಳಿಸಲಿಲ್ಲ. ಈ ಬಗ್ಗೆ ದೂರು ನೀಡಿದ್ದೆ. ಅಧಿಕಾರಿಯೊಬ್ಬರು ಮತ್ತೊೂಬ್ಬ ಅಧಿಕಾರಿಗೆ ಬಟನೆ ಬಟನ್ ಒತ್ತುವಂತೆ ಹೇಳಿದರು. ಈ ವೇಳೆ ಬೀಪ್ ಸೌಂಡ್ ಬಂದಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT