ಪೀಣ್ಯ ಮೆಟ್ರೊ ನಿಲ್ದಾಣ 
ರಾಜ್ಯ

ಸಿಗ್ನಲಿಂಗ್ ಪರೀಕ್ಷೆ; 5 ದಿನ ಮೆಟ್ರೊ ಗ್ರೀನ್ ಲೈನ್ ಸಂಚಾರದಲ್ಲಿ ವ್ಯತ್ಯಯ; ಪ್ರಯಾಣಿಕರ ಪರದಾಟ

ಬೆಳಗ್ಗೆ 5 ಗಂಟೆಗೆ ಪೀಣ್ಯ ಇಂಡಸ್ಟ್ರಿಯಿಂದ ಹೊರಡುವ ರೈಲುಗಳಿಂದ ನಾಗಸಂದ್ರ, ಜಾಲಹಳ್ಳಿ ಮತ್ತು ದಾಸರಹಳ್ಳಿಯಲ್ಲಿ ಸಾಮಾನ್ಯವಾಗಿ ಹತ್ತುತ್ತಿದ್ದ ಪ್ರಯಾಣಿಕರು ಪೀಣ್ಯದಲ್ಲಿಯೇ ಇಳಿಯಬೇಕಾಗಿ ಬಂತು. ತುಮಕೂರು ಮುಖ್ಯ ರಸ್ತೆಗೆ ಹೋಗುವ ರೈಲಿನ ಸಂಚಾರಕ್ಕೆ ಪ್ರಯಾಣಿಕರು ಸಾಕಷ್ಟು ಉದ್ದ ಸಾಲಿನಲ್ಲಿ ನಿಂತರು.

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ನಿನ್ನೆ ಮಂಗಳವಾರದಿಂದ ಒಟ್ಟು ಐದು ದಿನಗಳು ಮೆಟ್ರೋ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಿಸಿದ್ದು, ಈ ಬಗ್ಗೆ ಮಾಹಿತಿ ಇಲ್ಲದ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಬಂದು ಪರದಾಡುವ ಪರಿಸ್ಥಿತಿ ಉಂಟಾಯಿತು. ದಿನನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಮೆಟ್ರೊ ರೈಲು ಪ್ರಯಾಣವನ್ನು ನಂಬಿಕೊಂಡಿರುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯುಂಟಾಗಿದೆ.

ಬೆಳಗ್ಗೆ 5 ಗಂಟೆಗೆ ಪೀಣ್ಯ ಇಂಡಸ್ಟ್ರಿಯಿಂದ ಹೊರಡುವ ರೈಲುಗಳಿಂದ ನಾಗಸಂದ್ರ, ಜಾಲಹಳ್ಳಿ ಮತ್ತು ದಾಸರಹಳ್ಳಿಯಲ್ಲಿ ಸಾಮಾನ್ಯವಾಗಿ ಹತ್ತುತ್ತಿದ್ದ ಪ್ರಯಾಣಿಕರು ಪೀಣ್ಯದಲ್ಲಿಯೇ ಇಳಿಯಬೇಕಾಗಿ ಬಂತು. ತುಮಕೂರು ಮುಖ್ಯ ರಸ್ತೆಗೆ ಹೋಗುವ ರೈಲಿನ ಸಂಚಾರಕ್ಕೆ ಪ್ರಯಾಣಿಕರು ಸಾಕಷ್ಟು ಉದ್ದ ಸಾಲಿನಲ್ಲಿ ನಿಂತರು.

ಬಿಎಂಆರ್ ಸಿಎಲ್ ನ ಕಳಪೆ ನಿರ್ವಹಣೆ ಇತ್ತೀಚೆಗೆ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯನ್ನುಂಟುಮಾಡುತ್ತಿದೆ. ವಾಹನಗಳಲ್ಲಿ ಬಂದ ಪ್ರಯಾಣಿಕರು ಮುಂದಿನ ನಿಲ್ದಾಣವಾದ ಪೀಣ್ಯ ತನಕ ಸವಾರಿ ಮಾಡಲು ಮುಂದಾದರು. ಜನಸಂದಣಿಯನ್ನು ನಿರ್ವಹಿಸಲು ಎರಡು ಕಡೆ ಕೌಂಟರ್ ತೆರೆಯುವ ಬದಲು, BMRCL ತನ್ನ ನಿಯಮಿತ ಏಕ ಪ್ರವೇಶವನ್ನು ಮುಂದುವರೆಸಿದ್ದು ಪ್ರಯಾಣಿಕರಿಗೆ ಇನ್ನಷ್ಟು ತೊಂದರೆಯನ್ನುಂಟುಮಾಡಿತು.

ರೈಲು ಕಾರ್ಯಾಚರಣೆಗಳ ಭಾಗಶಃ ಮುಚ್ಚುವಿಕೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ ಎಂದು ಪ್ರಯಾಣಿಕರು ಹೇಳುತ್ತಾರೆ. ಬಿಎಂಆರ್‌ಸಿಎಲ್ ನಿನ್ನೆಯಾದರೂ ನಿಲ್ದಾಣದ ಬೋರ್ಡ್ ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಘೋಷಣೆ ಮಾಡಬೇಕಿತ್ತು. ಅದನ್ನು ಘೋಷಿಸುವ ಸೂಚನೆಯನ್ನು ನಿಲ್ದಾಣಗಳ ಹೊರಗೆ ಅಂಟಿಸಬೇಕು. ಪ್ರಯಾಣಿಕರಿಗೆ ಸರಿಯಾಗಿ ಸೂಚನೆ ನೀಡಲಿಲ್ಲ ಎನ್ನುತ್ತಾರೆ ಪ್ರಯಾಣಿಕರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

Pak ಸಚಿವನಿಗೆ ಮುಖಭಂಗ: ನೆತನ್ಯಾಹು ವಿರುದ್ಧ ಮಾತಾಡ್ತಿದ್ದಂತೆ ಶೋ ನಿಲ್ಲಿಸಿ ಆಸಿಫ್‌ನನ್ನು ಹೊರಕಹಿಸಿದ ಆ್ಯಂಕರ್, Video!

1st ODI: ಮಿಚೆಲ್ ಸ್ಫೋಟಕ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್

ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು?': ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ನಡುವೆಯೇ ಹೊಸ ಮಾರುಕಟ್ಟೆಗಳತ್ತ ಭಾರತ ಕಣ್ಣು!

ಯುವನಿಧಿಗೆ ನಿರುದ್ಯೋಗಿ ವಿದ್ಯಾರ್ಥಿಗಳ ನೋಂದಣಿ ನೋಡ್ತಿದ್ದರೆ ಆತಂಕಕಾರಿ, ಶಿಕ್ಷಣದಲ್ಲಿ ಬದಲಾವಣೆ ಅಗತ್ಯ: ವಿಟಿಯು ಉಪಕುಲಪತಿ

SCROLL FOR NEXT