ರಾಜ್ಯ

ಉತ್ತರ ಕನ್ನಡ: ಕಾಳಿ ನದಿ ದ್ವೀಪದಲ್ಲಿ ಸಿಲುಕಿಕೊಂಡಿದ್ದ ದನಗಾಹಿ ರಕ್ಷಣೆ

ಮಂಗಳವಾರ ತಡರಾತ್ರಿ ಆರಂಭವಾದ ರಕ್ಷಣಾ ಕಾರ್ಯಾಚರಣೆ ಬುಧವಾರದವರೆಗೂ ನಡೆಯಿತು. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ರಕ್ಷಣಾ ತಂಡದ ಪರಿಣಿತ ಈಜುಗಾರರು ಜಾನುವಾರು ಮೇಯಿಸುತ್ತಿದ್ದ ಜನ್ನು ಗಾವಡೆ ಎಂಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಹುಬ್ಬಳ್ಳಿ: ಸೂಪಾ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದ ನಂತರ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯ ದ್ವೀಪದಲ್ಲಿ ಸಿಲುಕಿಕೊಂಡಿದ್ದ ದನ ಮೇಯಿಸುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ.

ಮಂಗಳವಾರ ತಡರಾತ್ರಿ ಆರಂಭವಾದ ರಕ್ಷಣಾ ಕಾರ್ಯಾಚರಣೆ ಬುಧವಾರದವರೆಗೂ ನಡೆಯಿತು. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ರಕ್ಷಣಾ ತಂಡದ ಪರಿಣಿತ ಈಜುಗಾರರು ಜಾನುವಾರು ಮೇಯಿಸುತ್ತಿದ್ದ ಜನ್ನು ಗಾವಡೆ ಎಂಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸಂಜೆಯಾದರೂ ಮನೆಗೆ ಬಾರದೇ ಇದ್ದುದರಿಂದ ಗಾವಡೆ ಕುಟುಂಬದವರು ಆತಂಕಗೊಂಡಿದ್ದರು. ಅವರು ಅವನನ್ನು ಹುಡುಕಲು ಹೋದಾಗ, ಅವರು ದ್ವೀಪದಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದುದ್ದನ್ನು ಗಮನಿಸಿದರು. ದ್ವೀಪ ಸುತ್ತಲು ನೀರಿನಿಂದ ಆವೃತವಾಗಿತ್ತು.

ಮಂಗಳವಾರ ಸೂಪಾ ಅಣೆಕಟ್ಟಿನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಕೆಳಭಾಗದಲ್ಲಿರುವ ಬೊಮ್ಮನಹಳ್ಳಿ ಡ್ಯಾಂ ಕೂಡ ಗೇಟ್ ತೆರೆಯಲಾಗಿದೆ. ಬೊಮ್ಮನಹಳ್ಳಿ ಜಲಾಶಯ ಮಂಗಳವಾರ ಎರಡು ಬಾರಿಎಚ್ಚರಿಕೆ ಗಂಟೆ ಬಾರಿಸಿತ್ತು. ಆದರೆ ಎಚ್ಚರಿಕೆಯ ಅರಿವಿಲ್ಲದೆ ಗಾವಡೆ ದ್ವೀಪದಲ್ಲಿ ತನ್ನ ದನಗಳನ್ನು ಮೇಯಿಸುವುದನ್ನು ಮುಂದುವರೆಸಿದನು. ಅಣೆಕಟ್ಟು ಅಧಿಕಾರಿಗಳು ನೀರು ಬಿಡುವುದನ್ನು ಕಡಿಮೆ ಮಾಡಿದರೂ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಜಿಲ್ಲಾ ಆಡಳಿತವು ಗಣೇಶಗುಡಿಯಲ್ಲಿರುವ ಮಾನಸ ಅಡ್ವೆಂಚರ್ಸ್‌ನ ಸಹಾಯವನ್ನು ಕೋರಿತು, 10 ಪರಿಣಿತ ರಾಫ್ಟರ್‌ಗಳ ಗುಂಪು ತೆಪ್ಪದಲ್ಲಿ ದ್ವೀಪಕ್ಕೆ ಹೋಗಿ ಬುಧವಾರ ಮುಂಜಾನೆ ಗಾವಡೆ ಅವರನ್ನು ಸುರಕ್ಷಿತವಾಗಿ ಕರೆತಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

SCROLL FOR NEXT