ರಾಜ್ಯ

ಹನಿಟ್ರ್ಯಾಪ್: ಪಾಕಿಸ್ತಾನಿ ಏಜೆಂಟ್‌ಗೆ INS ಕದಂಬ ನೌಕಾನೆಲೆ ಮಾಹಿತಿ ಸೋರಿಕೆ; ಕಾರವಾರದಲ್ಲಿ ಮೂವರ ಬಂಧನ

ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಮೂವರಿಗೂ ಈಕೆ ಹತ್ತಿರವಾಗಿದ್ದಳು. ಆರೋಪಿಗಳಾದ ಮುದ್ಗಾದ ವೇಥನ್ ತಾಂಡೇಲ್, ಥೋಡೂರಿನ ಸುನೀಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಆರೋಪಿಗಳಾಗಿದ್ದಾರೆ.

ಕಾರವಾರ: ಶತ್ರು ರಾಷ್ಟ್ರಗಳಿಗೆ ಐಎನ್‌ಎಸ್ ಕದಂಬ ನೌಕಾ ನೆಲೆಯ ಚಿತ್ರಗಳು ಮತ್ತು ಮಹತ್ವದ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದ ಮೂವರು ಪಾಕಿಸ್ತಾನದ ಮಹಿಳಾ ಏಜೆಂಟ್ ನಿಂದ ಹನಿಟ್ರ್ಯಾಪ್ ಗೆ ಒಳಗಾದ ಮಾಹಿತಿ ಸಿಕ್ಕಿದೆ.

ತನ್ನನ್ನು ನೌಕಾ ಅಧಿಕಾರಿ ಎಂದು ಪರಿಚಯಿಸಿಕೊಂಡ ಪಾಕಿಸ್ತಾನಿ ಏಜೆಂಟ್, ಮೂವರಿಂದ ನೌಕಾ ನೆಲೆಯ ಪ್ರಮುಖ ಮಾಹಿತಿ ಮತ್ತು ಚಿತ್ರಗಳನ್ನು ಪಡೆದಿದ್ದಳು ಎಂದು ತನಿಖೆಯಿಂದ ಬಹಿರಂಗಗೊಂಡಿದೆ.

ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಮೂವರಿಗೂ ಈಕೆ ಹತ್ತಿರವಾಗಿದ್ದಳು. ಆರೋಪಿಗಳಾದ ಮುದ್ಗಾದ ವೇಥನ್ ತಾಂಡೇಲ್, ಥೋಡೂರಿನ ಸುನೀಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಆರೋಪಿಗಳಾಗಿದ್ದಾರೆ.ಸುನಿಲ್ ಮೂರು ವರ್ಷಗಳ ಹಿಂದೆ ನೌಕಾನೆಲೆಯಲ್ಲಿ ಕೆಲಸ ಬಿಟ್ಟು ಗೋವಾದ ರೆಸ್ಟೋರೆಂಟ್‌ಗೆ ಸೇರಿಕೊಂಡಿದ್ದ. ನೌಕಾನೆಲೆಯಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ವೆಥನ್ ಮಾಹಿತಿ ಪಡೆಯುತ್ತಿದ್ದ.

ಪಾಕಿಸ್ತಾನಿ ಏಜೆಂಟ್ ಯುದ್ಧನೌಕೆಗಳ ಆಗಮನ, ಅವುಗಳ ನಿರ್ಗಮನ ಮತ್ತು ಇತರ ಭದ್ರತಾ ವಿವರಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು. ಪ್ರತಿ ತಿಂಗಳು ಮೂವರಿಗೂ ತಲಾ 5,000 ರೂಪಾಯಿಗಳಂತೆ ವೇಥನ್ ತಾಂಡೇಲ್ ಮತ್ತು ಅಕ್ಷಯ್ ನಾಯ್ಕ್ ನಿಂದ ಎಂಟು ತಿಂಗಳ ಕಾಲ ಹಣ ನೀಡಿದ್ದಳು. ಈಕೆಯಿಂದ ನಾಲ್ಕು ತಿಂಗಳ ಕಾಲ ಹಣ ಪಡೆದ ಸುನೀಲ್ ನಂತರ ಫೇಸ್ ಬುಕ್ ನಲ್ಲಿ ಆಕೆಯನ್ನು ಬ್ಲಾಕ್ ಮಾಡಿದ್ದ.

ಮೂವರಿಂದ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಉಪಕರಣ ವಶ

ಹೈದರಾಬಾದ್‌ನ ಎನ್‌ಐಎ ಅಧಿಕಾರಿಗಳು 2023 ರಲ್ಲಿ ವಿಶಾಖಪಟ್ಟಣದಲ್ಲಿ ಇದೇ ಪ್ರಕರಣದಲ್ಲಿ ಒಬ್ಬ ದೀಪಕ್ ಮತ್ತು ಇತರ ಕೆಲವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ತಮ್ಮ ಕಾರವಾರ ಜಾಲವನ್ನು ಬಹಿರಂಗಪಡಿಸಿದ್ದಾರೆ. ವೇಥನ್, ಸುನಿಲ್ ಮತ್ತು ಅಕ್ಷಯ್ ಅವರು ತಮ್ಮ ಬ್ಯಾಂಕ್ ಖಾತೆಗಳಿಗೆ ದೀಪಕ್ ಮತ್ತು ಆತನ ತಂಡ ಪಡೆಯುತ್ತಿದ್ದ ಅದೇ ಖಾತೆಯಿಂದ ಹಣವನ್ನು ವರ್ಗಾಯಿಸಿದ್ದಾರೆ.

ದೀಪಕ್ ಮತ್ತು ಆತನ ತಂಡದ ಬಂಧನದ ನಂತರ ವೇಥನ್ ಮತ್ತು ಅಕ್ಷಯ್ ಹಣ ಪಡೆಯುವುದನ್ನು ನಿಲ್ಲಿಸಿದರು. ಈ ಸಾಕ್ಷ್ಯದ ಆಧಾರದ ಮೇಲೆ, ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಎನ್‌ಐಎ ಅಧಿಕಾರಿಗಳು ಮೊನ್ನೆ 27 ರಂದು ಕಾರವಾರಕ್ಕೆ ಆಗಮಿಸಿ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೂವರಿಂದ ಮೊಬೈಲ್ ಫೋನ್‌ಗಳು ಮತ್ತು ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಹೈದರಾಬಾದ್‌ಗೆ ತೆರಳುವಂತೆ ವೆಥನ್‌ಗೆ ಸೂಚಿಸಲಾಗಿದೆ. ಮುಂದಿನ ವಾರ ಎನ್‌ಐಎ ಅಧಿಕಾರಿಗಳ ತಂಡದ ಮುಂದೆ ಹಾಜರಾಗುವಂತೆ ಅಕ್ಷಯ್‌ಗೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel