ಹಾಕ್ಸ್ ಬಿಲ್ ಆಮೆ 
ರಾಜ್ಯ

ಕಾರವಾರ: 'ಹಾಕ್ಸ್ ಬಿಲ್' ಆಮೆ ದೇಹದಲ್ಲಿ ಪ್ಲಾಸ್ಟಿಕ್ ಪತ್ತೆ, ತಜ್ಞರ ಆತಂಕ

ದೇಶದ ಪಶ್ಚಿಮ ಕಡಲತೀರದಲ್ಲಿ ಅಪರೂಪವಾಗಿರುವ 'ಹಾಕ್ಸ್ ಬಿಲ್' ಜಾತಿಯ ಆಮೆಯೊಂದರ ಮೃತದೇಹವು ಕಾರವಾರದಲ್ಲಿ ಪತ್ತೆಯಾಗಿದ್ದು, ಮೃತದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವುದಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾರವಾರ: ದೇಶದ ಪಶ್ಚಿಮ ಕಡಲತೀರದಲ್ಲಿ ಅಪರೂಪವಾಗಿರುವ 'ಹಾಕ್ಸ್ ಬಿಲ್' ಜಾತಿಯ ಆಮೆಯೊಂದರ ಮೃತದೇಹವು ಕಾರವಾರದಲ್ಲಿ ಪತ್ತೆಯಾಗಿದ್ದು, ಮೃತದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವುದಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾರವಾರ ಕರಾವಳಿ ಮತ್ತು ಸಾಗರ ಪರಿಸರ ಸಂರಕ್ಷಣಾ ಘಟಕದ (ಸಿಎಂಇಸಿಸಿ) ಗಸ್ತುಪಡೆ ಮಾಜಾಳಿಯಲ್ಲಿ ಆಮೆಯನ್ನು ಪತ್ತೆ ಮಾಡಿದೆ.

ಆಮೆ ಮೀನುಗಾರಿಕೆ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರಬಹುದು. ಶವಪರೀಕ್ಷೆ ನಡೆಸಿದಾಗ ಮೃತದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ ಎಂದು ಸಿಎಂಇಸಿಸಿಯ ರೇಂಜ್ ಫಾರೆಸ್ಟ್ ಆಫೀಸರ್ ಪ್ರಮೋದ್ ನಾಯಕ್ ಹೇಳಿದ್ದಾರೆ.

ಪ್ಲಾಸ್ಟಿಕ್ ಸಮುದ್ರ ಜೀವಿಗಳಲ್ಲಿ ಪತ್ತೆಯಾಗಿದೆ ಎಂದರೆ, ಸಮುದ್ರದ ಆಳವನ್ನೂ ತಲುಪಿದೆ ಎಂದರ್ಥ. ಕೂಡಲೇ ಪ್ಲಾಸ್ಟಿಕ್‌ ಹಾವಳಿಗೆ ಕಡಿವಾಣ ಹಾಕಬೇಕು. “ಆಮೆಗಳು ಸೇರಿದಂತೆ ಅನೇಕ ಸಮುದ್ರ ಜೀವಿಗಳು ಪ್ಲಾಸ್ಟಿಕ್ ಅನ್ನು ಆಹಾರವೆಂದು ತಪ್ಪಾಗಿ ಗ್ರಹಿಸುತ್ತವೆ. ಸೂರ್ಯ ಮತ್ತು ಅಲೆಗಳ ಕಾರಣದಿಂದಾಗಿ ದೊಡ್ಡ ಪ್ಲಾಸ್ಟಿಕ್ ವಸ್ತುಗಳು ಮೈಕ್ರೋ ಮತ್ತು ನ್ಯಾನೋ ಪ್ಲಾಸ್ಟಿಕ್‌ಗಳಾಗಿ ಒಡೆಯುತ್ತವೆ. ಇವು ಜೀವಿಗಳ ಆಹಾರ ಸರಪಳಿಯನ್ನು ಪ್ರವೇಶಿಸುತ್ತವೆ. ನಂತರ ಮನುಷ್ಯನ ದೇಹವನ್ನೂ ಸೇರುತ್ತದೆ.

ಸಂಶೋಧನೆಯ ಪ್ರಕಾರ, 2050 ರ ವೇಳೆಗೆ ಸಮುದ್ರಗಳಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರುತ್ತದೆ ಹೇಳಲಾಗುತ್ತಿದ್ದು, ಪ್ಲಾಸ್ಟಿಕ್ ಈಗಾಗಲೇ ವಿವಿಧ ಬ್ರಾಂಡ್‌ಗಳ ಲವಣಗಳನ್ನು ಪ್ರವೇಶಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜಾಗೃತಿ ಮೂಡಿಸಬೇಕು’ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರಾಧ್ಯಾಪಕ ಜಗನಾಥ ರಾಠೋಡ್ ಹೇಳಿದ್ದಾರೆ.

ಹಾಕ್ಸ್ ಬಿಲ್ ಆಮೆಗಳು ಹೆಚ್ಚಾಗಿ ಫೆಸಿಪಿಕ್, ಅಟ್ಲಾಂಟಿಕ್ ಸಾಗರ ಹಾಗೂ ಅಂಡಮಾನ್, ನಿಕೋಬಾರ್‌ ಭಾಗದ ಸಮುದ್ರದಲ್ಲಿ ಕಡಿಮೆ ಆಳದಲ್ಲಿ, ಹವಳದ ದಿಬ್ಬಗಳ ನಡುವೆ ಕಾಣಿಸುತ್ತವೆ. ವನ್ಯಜೀವಿ ಕಾಯಿದೆಯ ಶೆಡ್ಯೂಲ್ 1 ರ ಅಡಿಯಲ್ಲಿ ಇವುಗಳನ್ನು ರಕ್ಷಿಸಲಾಗಿದೆ, ಇದು ಗಿಡುಗದ ಕೊಕ್ಕಿನಂತೆ ಕಾಣುವ ಕಿರಿದಾದ ಮೊನಚಾದ ತಲೆಯನ್ನು ಹೊಂದಿದೆ. ಹೀಗಾಗಿಯೇ ಇದಕ್ಕೆ ಹಾಕ್ಸ್ ಬಿಲ್ ಎಂದು ಹೆಸರಿಡಲಾಗಿದೆ.

ಸಮುದ್ರದ ಇತರೆ ಆಮೆಗಳಲ್ಲಿ ಇವು ಚಿಕ್ಕವಾಗಿದ್ದು, 2.5 ರಿಂದ 3 ಅಡಿ ಉದ್ದದವರೆಗೆ ಬೆಳೆಯುತ್ತವೆ. ಈ ಆಮೆಗಳು ಬೆಳೆಯಲು ಕಲ್ಲಿನ ಪ್ರದೇಶಗಳು, ಬಂಡೆಗಳನ್ನು ಬಯಸುತ್ತವೆ. ಆಭರಣಗಳ ತಯಾರಿಕೆಗೆ ಈ ಆಮೆಗಳ ಚಿಪ್ಪುಗಳಿಗಾಗಿ ಕೆಲವರು ಇವುಗಳನ್ನು ಬೇಟೆಯಾಡುತ್ತಿದ್ದಾರೆ. ಹೀಗಾಗಿ ಈ ಆಮೆಗಳು ಅಳಿವಂಚಿನಲ್ಲಿರುವ ಜೀವಿಗಳಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

Vaikunta Ekadasi: ತಿರುಮಲ ವೈಕುಂಠ ದ್ವಾರ ದರ್ಶನ ಕುರಿತು TTD ಮಹತ್ವದ ಮಾಹಿತಿ, ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ಲಭ್ಯ!

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ; AK-47 ಕಾರ್ಟ್ರಿಡ್ಜ್‌ಗಳು ಪತ್ತೆ!

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಘೋಷಣೆ, ಯಾವಾಗಿಂದ ಗೊತ್ತಾ?

SCROLL FOR NEXT