ಪರಾರಿಯಾಗಿರುವ ಜೋಡಿ 
ರಾಜ್ಯ

ಬೆಂಗಳೂರು: ಮದುವೆಯಾಗಿ ಮಕ್ಕಳಿದ್ದರೂ ಹೊಟೇಲ್ ರೂಂನಲ್ಲಿ ಸಿಕ್ಕಿಬ್ಬಿದ್ದ ಜೋಡಿ, ರಾತ್ರೋರಾತ್ರಿ ಮತ್ತೆ ಪರಾರಿ!

ವಿವಾಹಿತ ಮಹಿಳೆ ಮತ್ತೊಬ್ಬ ವಿವಾಹಿತ ಪುರುಷನ ಜೊತೆ ಓಡಿ ಹೋಗಿದ್ದು ನನ್ನ ಪತಿಯನ್ನು ಹುಡುಕಿಕೊಂಡುವಂತೆ ಪತ್ನಿ ಹಾಗೂ ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬೆಂಗಳೂರು: ವಿವಾಹಿತ ಮಹಿಳೆ ಮತ್ತೊಬ್ಬ ವಿವಾಹಿತ ಪುರುಷನ ಜೊತೆ ಓಡಿ ಹೋಗಿದ್ದು ನನ್ನ ಪತಿಯನ್ನು ಹುಡುಕಿಕೊಂಡುವಂತೆ ಪತ್ನಿ ಹಾಗೂ ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಪುಟ್ಟೇನಹಳ್ಳಿಯ ಇಲಿಯಾಸ್ ನಗರದಲ್ಲಿ ಘಟನೆ ನಡೆದಿದೆ. ಸುಮೈಯಾ ಬಾನು ಮತ್ತು ವಸೀಂ 7 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಆದರೆ ವಸೀಂ ಇತ್ತೀಚೆಗೆ ದಿಲ್ ಷಾದ್ ಎಂಬಾಕೆಯ ಮೇಲೆ ಪ್ರೇಮಾಂಕುರವಾಗಿದೆ. ಅದರಂತೆ ಈ ಜೋಡಿ ಆಗಾಗೇ ಭೇಟಿಯಾಗುತ್ತಿದ್ದರು.

ಇನ್ನು ಪತಿ ವಸೀಂ ನಡುವಳಿಕೆ ಮೇಲೆ ಅನುಮಾನಗೊಂಡ ಸುಮೈಯಾ ಬಾನು ಪತಿಯನ್ನು ಹಿಂಬಾಲಿಸಿದ್ದಾಳೆ. ವಸೀಂ ದಿಲ್ ಷಾದ್ ಜೊತೆ ಹೋಟೆಲ್ ನಲ್ಲಿ ತಂಗಿದ್ದಾಗ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಅಲ್ಲದೆ ತನ್ನ ಪತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ದಿಲ್ ಷಾದ್ ಳನ್ನು ಹಿಡಿದು ಥಳಿಸಿದ್ದರು. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಇದೀಗ ವಸೀಂ ಹಾಗೂ ದಿಲ್ ಷಾದ್ ಜೋಡಿ ರಾತ್ರೋರಾತ್ರಿ ಪರಾರಿಯಾಗಿದ್ದು ಪತಿಯನ್ನು ಹುಡುಕಿಕೊಂಡುವಂತೆ ಸುಮೈದಾ ಬಾನು ಹಾಗೂ ಪತ್ನಿಯನ್ನು ಹುಡುಕಿಕೊಂಡುವಂತೆ ದಿಲ್ ಷಾದ್ ಪತಿ ನಯೀಂ ಠಾಣೆಗೆ ದೂರು ನೀಡಿದ್ದು ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾದ ಚಿಕ್ಕಣ್ಣ: ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ; ಹಾಸ್ಯನಟನ ಕೈ ಹಿಡಿಯೋ ಹುಡುಗಿ ಯಾರು?

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

SCROLL FOR NEXT